'ದೇವರ ಸಲಹೆ': 26ನೇ ಎವರೆಸ್ಟ್ ಚಾರಣ ಕೈಬಿಟ್ಟ ಕಮಿ!

Published : May 26, 2021, 07:58 AM IST
'ದೇವರ ಸಲಹೆ': 26ನೇ ಎವರೆಸ್ಟ್ ಚಾರಣ ಕೈಬಿಟ್ಟ ಕಮಿ!

ಸಾರಾಂಶ

* ದೇವರ ಮಾತು ಕೇಳಿ 26ನೇ ಬಾರಿ ಎವರೆಸ್ಟ್‌ ಏರುವುದು ಬಿಟ್ಟ ಕಮಿ * ಈ ಸಲ ಶಿಖರ ಏರದಂತೆ ದೇವರಿಂದಲೇ ನನಗೆ ಸೂಚನೆ * ಹೀಗಾಗಿ ಮುಂದಿನ ವರ್ಷ ಮೌಂಟ್‌ ಎವರೆಸ್ಟ್‌ ಏರುವೆ

ಕಾಠ್ಮಂಡು(ಮೇ.26): ವಿಶ್ವದ ಅತೀ ಎತ್ತರದ ಹಿಮಶಿಖರ ಮೌಂಟ್‌ ಎವರೆಸ್ಟ್‌ ಅನ್ನು 25 ಸಲ ಹತ್ತಿದ ವಿಶ್ವದಾಖಲೆ ಹೊಂದಿರುವ ಪರ್ವತಾರೋಹಿ ಕಮಿ ರೀಟಾ ಅವರು 26ನೇ ಸಲ ಪರ್ವತ ಏರುವ ತಮ್ಮ ಯತ್ನವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಕೆಟ್ಟಕನಸು, ದೇವರ ಸಲಹೆ ಮತ್ತು ಕೆಟ್ಟವಾತಾವರಣದಿಂದಾಗಿ ಮೌಂಟ್‌ ಎವರೆಸ್ಟ್‌ ಏರುವ ಯತ್ನವನ್ನು ಅರ್ಧಕ್ಕೆ ಕೈಬಿಟ್ಟಿದ್ದಾಗಿ ಕಮಿ ರೀಟಾ ಹೇಳಿದ್ದಾರೆ.

ಅರ್ಧದಲ್ಲೇ ತಮ್ಮ ಪರ್ವತಾರೋಹಣದಿಂದ ಹಿಂತಿರುಗಿದ ಬಳಿಕ ಮಂಗಳವಾರ ಮಾತನಾಡಿದ ಕಮಿ ರೀಟಾ, ಮೌಂಟ್‌ ಎವರೆಸ್ಟ್‌ನ ಕ್ಯಾಂಪ್‌ 3ಗೆ ತಲುಪಿದ್ದೆ. ಈ ವೇಳೆ ವಾತಾವರಣ ವೈಪರಿತ್ಯ ಕಂಡುಬಂದಿತು. ಜೊತೆಗೆ ನಾನು ಕೆಟ್ಟಕನಸನ್ನೂ ಕಂಡೆ. ದೇವರ ಮೇಲೆ ಅಪಾರ ನಂಬಿಕೆಯಿರುವ ನನಗೆ ಶಿಖರವನ್ನು ಏರದಂತೆ ದೇವರೇ ಸೂಚಿಸಿದ ಅನುಭವ ಆಯಿತು.

ಈ ಹಿನ್ನೆಲೆಯಲ್ಲಿ ಪರ್ವತಾರೋಹಣವನ್ನು ಅರ್ಧದಲ್ಲೇ ಬಿಟ್ಟು ಬಂದಿದ್ದು, ಮುಂದಿನ ವರ್ಷ ಶಿಖರ ಏರುತ್ತೇನೆ ಎಂದು ಹೇಳಿದರು. ಮೌಂಟ್‌ ಎವರೆಸ್ಟ್‌ನಿಂದ ಹೆಲಿಕಾಪ್ಟರ್‌ ಮೂಲಕ ಕಾಠ್ಮಂಡುವಿಗೆ ಬಂದಿಳಿದ ರೀಟಾ ಅವರನ್ನು ಅವರ ಪತ್ನಿ, ಸ್ನೇಹಿತರು ಹಾಗೂ ಸರ್ಕಾರದ ಅಧಿಕಾರಿಗಳು ಹೂವಿನ ಹಾರ ಹಾಕಿ ಸ್ವಾಗತಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?