ನಿರ್ಬಂಧ ಬದಿಗೊತ್ತಿ ಭಾರತದಿಂದ ಸಕ್ಕರೆ, ಹತ್ತಿ ಆಮದಿಗೆ ಪಾಕ್‌ ನಿರ್ಧಾರ

Published : Apr 01, 2021, 11:59 AM IST
ನಿರ್ಬಂಧ ಬದಿಗೊತ್ತಿ ಭಾರತದಿಂದ ಸಕ್ಕರೆ, ಹತ್ತಿ ಆಮದಿಗೆ ಪಾಕ್‌ ನಿರ್ಧಾರ

ಸಾರಾಂಶ

‌: ಕಾಶ್ಮೀರದಲ್ಲಿ ಬಿಕ್ಕಟ್ಟಿನ ಕಾರಣ ಕಳೆದ 2 ವರ್ಷದಿಂದ ಹೇರಿದ್ದ ಆಮದು ಮೇಲಿನ ನಿರ್ಬಂಧ| ನಿರ್ಬಂಧ ಬದಿಗೊತ್ತಿ ಭಾರತದಿಂದ ಸಕ್ಕರೆ, ಹತ್ತಿ ಆಮದಿಗೆ ಪಾಕ್‌ ನಿರ್ಧಾರ| 

ಇಸ್ಲಮಾಬಾದ್(ಏ.01): ಕಾಶ್ಮೀರದಲ್ಲಿ ಬಿಕ್ಕಟ್ಟಿನ ಕಾರಣ ಕಳೆದ 2 ವರ್ಷದಿಂದ ಹೇರಿದ್ದ ಆಮದು ಮೇಲಿನ ನಿರ್ಬಂಧವನ್ನು ತೆಗೆದುಹಾಕಿ, ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿದೆ.

ಪಾಕ್‌ ನೂತನ ಹಣಕಾಸು ಸಚಿವ ಹಮ್ಮದ್‌ ಅಜಾರ್‌ ಅವರು ಬುಧವಾರ ಈ ಘೋಷಣೆ ಮಾಡಿದರು.

ಖಾಸಗಿ ವಲಯಗಳು 5 ಲಕ್ಷ ಟನ್‌ ಸಕ್ಕರೆಯನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಆರ್ಥಿಕ ಸಹಕಾರ ಸಮಿತಿ (ಇಸಿಸಿ) ಒಪ್ಪಿಗೆ ನೀಡಿದೆ. ಭಾರತದಲ್ಲಿ ಸಕ್ಕರೆ ದರ ಕಡಿಮೆ ಇದೆ. ಹಾಗಾಗಿ ಭಾರತದೊಂದಿಗೆ ಮತ್ತೆ ಸಕ್ಕರೆ ವ್ಯವಹಾರ ನಡೆಸಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು. ಇದೇ ವೇಳೆ ಇದೇ ಜೂನ್‌ನಿಂದ ಭಾರತದ ಹತ್ತಿಯನ್ನು ಆಮದು ಮಾಡಿಕೊಳ್ಳುವುದಾಗಿ ತಿಳಿಸಿದರು.

ಪಾಕಿಸ್ತಾನದ ಈ ನಿರ್ಧಾರವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಲಿದೆ ಎಂದು ಅಲ್ಲಿನ ಪ್ರತಿಷ್ಠಿತ ಡಾನ್‌ ಪತ್ರಿಕೆ ವಿಶ್ಲೇಷಿಸಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಪರಿಚ್ಛೇದ-370 ಅನ್ನು 2019ರಲ್ಲಿ ಭಾರತ ಸರ್ಕಾರ ರದ್ದು ಮಾಡಿತ್ತು. ಇದರಿಂದ ಸಿಟ್ಟಾದ ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದಗಳನ್ನು ಮುರಿದು, ಇಸ್ಲಮಾಬಾದ್‌ನಲ್ಲಿದ್ದ ಭಾರತದ ಹೈಕಮಿಷನರ್‌ಅನ್ನು ಹೊರದಬ್ಬಿತ್ತು. ನಂತರ ಭಾರತದೊಂದಿಗಿನ ಎಲ್ಲಾ ವ್ಯಾಪಾರ ಮತ್ತು ರೈಲ್ವೆ ಸೇವೆಯನ್ನು ಸ್ಥಗಿತ ಮಾಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್