'ಮನೆಯಲ್ಲೆ ಕಲಿ-ಕನ್ನಡ ಕಲಿ'  ಸಿಂಗಾಪುರ ಕನ್ನಡ ಸಂಘದ ಅದ್ಭುತ ಕಾರ್ಯಕ್ರಮ

Published : May 01, 2021, 12:14 AM ISTUpdated : May 01, 2021, 03:04 PM IST
'ಮನೆಯಲ್ಲೆ ಕಲಿ-ಕನ್ನಡ ಕಲಿ'  ಸಿಂಗಾಪುರ ಕನ್ನಡ ಸಂಘದ ಅದ್ಭುತ ಕಾರ್ಯಕ್ರಮ

ಸಾರಾಂಶ

ಕನ್ನಡ ಕಟ್ಟುವ ಹೊಸತನದ ಯತ್ನ/ ಅನಿವಾಸಿ ಕನ್ನಡಿಗರ ಸಂಭ್ರಮ/ ಆನ್ ಲೈನ್ ಕನ್ನಡ ಕಲಿಕೆಯ ತರಗತಿಗಳು/ ಸುಮಾರು 2 ಗಂಟೆಗಳ ಕಾಲ ನಾಡಿನ ದಿಗ್ಗಜರೊಂದಿಗೆ ಸಂವಾದ

ಸಿಂಗಾಪುರ(ಏ. 30):  ಕನ್ನಡ ಸಂಘ (ಸಿಂಗಪುರ) ಆಯೋಜಿಸಿದ 'ಹೊಂಗೆ ಹೂವ ತೊಂಗಲಲ್ಲಿ' ಕಾರ್ಯಕ್ರಮಕ್ಕೆ  ಅಭೂತ ಪೂರ್ವವಾದ ಪ್ರತಿಕ್ರಿಯೆ ದೊರೆತಿದೆ ಕನ್ನಡ ಸಂಘ (ಸಿಂಗಾಪುರ) ದ ಮಹಾದಾಸೆಯ ಚಟುವಟಿಕೆ  "ಮನೆಯಲ್ಲೇ ಕಲಿ - ಕನ್ನಡ ಕಲಿ"ಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿರ್ದೇಶಕ ಟಿಎಸ್ ನಾಗಾಭರಣ,  ಪ್ರೇಮಕವಿ ಬಿ.ಆರ್.ಲಕ್ಷ್ಮಣರಾವ್, ಲೇಖಕ ಡುಂಡಿರಾಜ್ ಅವರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆಯನ್ನು ಮಾಡಲಾಯಿತು . 

ಇದೇ ಸಂದರ್ಭದಲ್ಲಿ ಕನ್ನಡ ಕಲಿಕೆ, ಭಾಷೆಯ ಸ್ಥಿತಿ ಗತಿಗಳ ಬಗ್ಗೆ ನಡೆದ ಅರ್ಥಪೂರ್ಣ ಸಂವಾದದಲ್ಲಿ ಸಿಂಗಾಪುರ ಕನ್ನಡಿಗರು ಭಾಗವಹಿಸಿದ್ದರು. ಸುಮಾರು 2 ಗಂಟೆಗಳ ಕಾಲ ನಾಡಿನ ದಿಗ್ಗಜರೊಂದಿಗೆ  ನಡೆದ ಅರ್ಥಪೂರ್ಣವಾದ  ಚರ್ಚೆ ನಿಜಕ್ಕೂ ಒಂದಷ್ಟು ಹೊಸತನಗಳನ್ನು ನೀಡಿತು.

ಸಿಂಗಾಪುರ ಕನ್ನಡ ಸಂಘದಿಂದ ಯುಗಾದಿ ಸಂಭ್ರಮ.. ಲೈವ್ ನೋಡುವ ಅವಕಾಶ ಇದೆ 

ಮೇ 2 ರಿಂದ, ಪ್ರತೀ ಭಾನುವಾರ ಬೆಳಿಗ್ಗೆ, ಕನ್ನಡ ಕಲಿಯ ತರಗತಿಗಳು ಆರಂಭಗೊಳ್ಳಲಿವೆ.  ವಿದೇಶಗಳಲ್ಲಿ ಸಂಘ-ಸಂಸ್ಥೆಗಳು ಕನ್ನಡವನ್ನು ಮೊಳಗಿಸುತ್ತಲೇ ಬಂದಿವೆ. ಅನಿವಾಸಿ ಕನ್ನಡಿಗರ ನಾವಿಕ, ಅಕ್ಕ ಸಮ್ಮೇಳನಗಳು  ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾಡಿಕೊಟ್ಟಿವೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ
ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ