ಅಂತಾರಾಷ್ಟ್ರೀಯ ಕೋರ್ಟ್‌ ವಾರಂಟ್‌, ಬಂಧನ ಭೀತಿ : ಜಿ20 ಶೃಂಗಕ್ಕೆ ಬರಲ್ಲ ಪುಟಿನ್

By Kannadaprabha NewsFirst Published Aug 29, 2023, 7:17 AM IST
Highlights

ಮುಂದಿನ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ದೇಶಗಳ ಶೃಂಗ ಸಭೆಯಲ್ಲಿ ತಾವು ಬರಲು ಆಗುವುದಿಲ್ಲ. ತಮ್ಮ ಬದಲು ರಷ್ಯಾ ವಿದೇಶಾಂಗ ಸಚಿವ ಸಗೈಋು ಲಾವ್ರೋವ್‌ರನ್ನು ಕಳಿಸಲಾಗುವುದು ಎಂದು ಪುಟಿನ್‌ ಅವರು ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ತಿಳಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಈ ವೇಳೆ ಮುಂದಿನ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ದೇಶಗಳ ಶೃಂಗ ಸಭೆಯಲ್ಲಿ ತಾವು ಬರಲು ಆಗುವುದಿಲ್ಲ. ತಮ್ಮ ಬದಲು ರಷ್ಯಾ ವಿದೇಶಾಂಗ ಸಚಿವ ಸಗೈಋು ಲಾವ್ರೋವ್‌ರನ್ನು ಕಳಿಸಲಾಗುವುದು ಎಂದು ಪುಟಿನ್‌ ಹೇಳಿದ್ದಾರೆ.

ಪುಟಿನ್‌ ವಿರುದ್ಧ ಉಕ್ರೇನ್‌ ಯುದ್ಧಾಪರಾಧಕ್ಕಾಗಿ ಅಂತಾರಾಷ್ಟ್ರೀಯ ಕೋರ್ಟ್‌ ವಾರಂಟ್‌ (international court warrant) ಇದೆ. ರಷ್ಯಾ ಬಿಟ್ಟು ಬೇರೆ ದೇಶಕ್ಕೆ ಹೋದರೆ ಬಂಧನದ ಭೀತಿ ಇದೆ. ಹೀಗಾಗಿ ಪುಟಿನ್‌ ಹೇಳಿಕೆಗೆ ಮಹತ್ವ ಬಂದಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಾರ್ಯಾಲಯ, ‘ಉಭಯ ನಾಯಕರು ಸೋಮವಾರ ದೂರವಾಣಿ ಮಾತುಕತೆ ನಡೆದಿರು. ಈ ವೇಳೆ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿದ್ದರ ಜೊತೆಗೆ, ಪರಸ್ಪರರಿಗೆ ಸಂಬಂಧಿತ ಪ್ರಾಂತೀಯ ಮತ್ತು ಜಾಗತಿಕ ವಿಷಯಗಳ ಕುರಿತೂ ಸಮಾಲೋಚಿಸಿದರು. ಈ ವೇಳೆ ಸೆ.9-10ರಂದು ದೆಹಲಿಯಲ್ಲಿ ನಡೆಯಲಲಿರುವ ಜಿ20 ಶೃಂಗ (G20 summit)ಸಭೆಯಲ್ಲಿ ಭಾಗಿಯಾಗಲಾರದ ಕುರಿತು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ರಷ್ಯಾದ ವಿದೇಶಾಂಗ ಸಚಿವರು ರಷ್ಯಾವನ್ನು ಪ್ರತಿನಿಧಿಸಲಿದ್ದಾರೆ ಎಂಬ ಮಾಹಿತಿ ನೀಡಿದರು. ಈ ವೇಳೆ ಭಾರತದ ಜಿ20 ಅಧ್ಯಕ್ಷತೆ ಅವಧಿಯಲ್ಲಿ ಕೈಗೊಂಡ ಕ್ರಮಗಳಿಗೆ ನಿರಂತರ ಬೆಂಬಲ ನೀಡುತ್ತಿರುವುದರ ಬಗ್ಗೆ ರಷ್ಯಾಕ್ಕೆ ಮೋದಿ ಧನ್ಯವಾದ ತಿಳಿಸಿದರು’ ಎಂದು ಮಾಹಿತಿ ನೀಡಿದೆ.

ಪುಟಿನ್‌ ವಿರುದ್ಧ ದಂಗೆ ಎದ್ದಿದ್ದ ಪ್ರಿಗೋಜಿನ್‌ ವಿಮಾನ ಅಪಘಾತದಲ್ಲಿ ಸಾವು?

ಇದೇ ವೇಳೆ, ಚಂದ್ರಯಾನ-3 ಯಶಸ್ಸಿಗೂ ಪುಟಿನ್‌ ಅಭಿನಂದನೆ ಸಲ್ಲಿಸಿದರು.

ಜಿ20 ಶೃಂಗಸಭೆಗೆ ಮುನ್ನ ಆತಂಕ: ದೆಹಲಿ ಖಲಿಸ್ತಾನ ಆಗುತ್ತೆ ಎಂದು ಮೆಟ್ರೋ ನಿಲ್ದಾಣಗಳಲ್ಲಿ ಗೀಚು ಬರಹ 

ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ: ಪಾಕ್‌ ವಿರುದ್ಧ ರಷ್ಯಾ ಕೆಂಡ

ನವದೆಹಲಿ: ರಷ್ಯಾ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವರದಿಗಳನ್ನು ತಾನು ಗಂಭೀರವಾಗಿ ಪರಿಗಣಿಸಿರುವುದಾಗಿ ರಷ್ಯಾ ಎಚ್ಚರಿಸಿದೆ. ಈ ಕುರಿತು ಇಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ರಷ್ಯಾ ರಾಯಭಾರಿ ಡೆನಿಸ್‌ ಅಲಿಪೋವ್‌, ‘ಪಾಕಿಸ್ತಾನವು ಉಕ್ರೇನ್‌ಗೆ ಹಲವು ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂಬ ವರದಿಗಳನ್ನು ನಾವು ಗಮನಿಸಿದ್ದೇವೆ. ಈ ಬೆಳವಣಿಗೆ ಯುದ್ಧದ ಮೇಲೆ ಪರಿಣಾಮ ಬೀರುವುದರ ಜೊತೆಗೆ ರಷ್ಯಾ ವಿರೋಧಿ ಕೃತ್ಯ ಎನ್ನಿಸಿಕೊಳ್ಳುತ್ತದೆ. ಇದರ ಮೇಲೆ ನಾವು ನಿಗಾ ಇಟ್ಟಿದ್ದೇವೆ. ಇದನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

click me!