
ಇಸ್ಲಾಮಾಬಾದ್/ಕೊಲಂಬೋ (ಡಿ.3): 400 ಜನರ ಬಲಿಪಡೆದ ಭೀಕರ ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಗೆ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಡುವ ಧಾವಂತದಲ್ಲಿ ಪಾಕಿಸ್ತಾನವು ಅವಧಿ ಮೀರಿದ (ಎಕ್ಸ್ ಪೈರ್ಡ್) ವಸ್ತುಗಳನ್ನು ಕಳಿಸಿಕೊಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದಕ್ಕೆ ಪೂರಕವಾಗಿ ಎಕ್ಸ್ಪೈರಿ ಆಗಿರುವ ತಾರೀಖಿನ ಪರಿಹಾರ ಸಾಮಗ್ರಿಗಳ ಪೊಟ್ಟಣದ ಫೋಟೋ ವೈರಲ್ ಆಗಿವೆ. ಈ ಫೋಟೋವನ್ನು ಬೇರಾರೂ ಅಲ್ಲ, ಪಾಕ್ ನೌಕಾಪಡೆಯೇ ಬಿಡುಗಡೆ ಮಾಡಿತ್ತು. ಆದರೆ ತಾರೀಖು ಎಕ್ಸ್ಪೈರ್ ಆಗಿರುವುದು ನಂತರ ಬಹಿರಂಗವಾಗಿದೆ.
ಆದರೆ ಇದನ್ನು ಪಾಕಿಸ್ತಾನಿ ನೌಕಾಪಡೆ ತಳ್ಳಿಹಾಕಿದೆ. ‘ಶ್ರೀಲಂಕಾಗೆ ಪರಿಹಾರ ಸಾಮಗ್ರಿಗಳನ್ನು ತುರ್ತಾಗಿ ಸಾಗಿಸಲು ಸಾಕಷ್ಟು ಚೀಲಗಳು ಬೇಕಾಗಿದ್ದವು ಮತ್ತು ಹಡಗಿನಲ್ಲಿ ಈಗಾಗಲೇ ಬಾಕಿ ಇದ್ದ ಕೆಲವು ಹಳೆಯ ಖಾಲಿ ಚೀಲಗಳನ್ನೇ ಬಳಸಲಾಯಿತು. ಅವುಗಳ ಮೇಲೆ ಎಕ್ಸ್ಪೈರಿ ದಿನಾಂಕ ಇದ್ದರೂ ತಾಜಾ ಅಕ್ಕಿಯನ್ನೇ ಪ್ಯಾಕ್ ಮಾಡಿ ರವಾನಿಸಲಾಗಿದೆ. ನಕಲಿ ಸುದ್ದಿಗಳಿಗೆ ಬಲಿಯಾಗಬೇಡಿ’ ಎಂದಿದೆ.f
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ