ನೇಪಾಳ ಪ್ರಧಾನಿ ಕುರ್ಚಿ ಉಳಿಸಲು ಚೀನಾ ಸಂಧಾನ!

Published : Jul 08, 2020, 12:33 PM ISTUpdated : Jul 08, 2020, 01:21 PM IST
ನೇಪಾಳ ಪ್ರಧಾನಿ ಕುರ್ಚಿ ಉಳಿಸಲು ಚೀನಾ ಸಂಧಾನ!

ಸಾರಾಂಶ

ನೇಪಾಳ ಪ್ರಧಾನಿ ಕುರ್ಚಿ ಉಳಿಸಲು ಚೀನಾ ಸಂಧಾನ!| ರಾಜಕಾರಣಿಗಳ ಜತೆ ರಾಯಭಾರಿ ಚರ್ಚೆ| ಪ್ರಧಾನಿ ವಿರುದ್ಧ ಎದ್ದ ಬಂಡಾಯವನ್ನು ತಣಿಸಲು ಚೀನಾ ರಾಯಭಾರಿ ಮಾತುಕತೆ

ನವದೆಹಲಿ(ಜು.08): ಭಾರತ ವಿರೋಧಿ ನೀತಿ ಅನುಸರಿಸುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನ ಆರಂಭವಾದ ಬೆನ್ನಲ್ಲೇ, ಓಲಿ ಅವರ ಕುರ್ಚಿ ಉಳಿಸಲು ಚೀನಾ ಮಧ್ಯಪ್ರವೇಶ ಮಾಡಿದೆ.

ಪ್ರಧಾನಿ ವಿರುದ್ಧ ಎದ್ದ ಬಂಡಾಯವನ್ನು ತಣಿಸಲು ಚೀನಾ ರಾಯಭಾರಿ ಹೌ ಯಾಂಕಿ ನೇಪಾಳ ರಾಜಕೀಯ ನಾಯಕರೊಂದಿಗೆ ಮಾತುಕತೆ ಆರಂಭಿಸಿದ್ದಾರೆ. ನೇಪಾಳದ ಪ್ರಧಾನಿ ವಿರುದ್ಧ ಆಡಳಿತಾರೂಢ ಕಮ್ಯುನಿಸ್ಟ್‌ ಪಾರ್ಟಿಯೊಳಗಿನ ಬಂಡಾಯ ಬಯಲಾದಾಗಿನಿಂದ ಅಂದರೆ ಕಳೆದ ಏಪ್ರಿಲ್‌ ಮತ್ತು ಮೇ ತಿಂಗಳಿನಿಂದಲೇ ಹೌ ಯಾಂಕಿ ಪಕ್ಷದ ಪ್ರಮುಖ ನಾಯಕರೊಂದಿಗೆ ಸರಣಿ ಸಂಧಾನ ಸಭೆ ನಡೆಸುತ್ತಿದ್ದಾರೆ.

ಭಾರತ, ನೇಪಾಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದ ಈಕೆ ಯಾರು?

ಇತ್ತೀಚೆಗೆ ಕಮ್ಯುನಿಸ್ಟ್‌ ಪಕ್ಷದ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಪಾಲ್ಗೊಂಡಿದ್ದ ಹೌ, ಬಂಡಾಯವನ್ನು ಶೀಘ್ರ ಬಗೆಹರಿಸಿಕೊಳ್ಳುವಂತೆ ಕೋರಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಚೀನಾ ಕಮ್ಯುನಿಸ್ಟ್‌ ಪಾರ್ಟಿ ಮತ್ತು ನೇಪಾಳ ಕಮ್ಯುನಿಸ್ಟ್‌ ಪಾರ್ಟಿ ಆನ್‌ಲೈನ್‌ ಮೂಲಕ ಸಂವಾದವನ್ನೂ ನಡೆಸಿವೆ.

"

ಲಡಾಖ್‌ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ವಿರೋಧ ಕಟ್ಟಿಕೊಂಡಿರುವ ಕುತಂತ್ರಿ ಚೀನಾ, ನೇಪಾಳವನ್ನೂ ಭಾರತದ ವಿರುದ್ಧ ಎತ್ತಿಕಟ್ಟುತ್ತಿದೆ. ಚೀನಾ ಪ್ರಚೋದನೆಗೆ ಒಳಗಾಗಿ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ಭಾರತ ವಿರೋಧಿ ಧೋರಣೆ ತಾಳಿದ್ದರು. ಭಾರತದ ಭೂಭಾಗವನ್ನೂ ಸೇರ್ಪಡೆಗೊಳಿಸಿ ವಿವಾದಿತ ನಕ್ಷೆ ರಚಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ
ನಿಮ್ಮ ಪತ್ನಿ ಭಾರತಕ್ಕೆ ಕಳಿಸಿ : ವ್ಯಾನ್ಸ್‌ಗೆ ವಲಸಿಗರ ಟಾಂಗ್‌