ಸಂಗಾತಿಗೆ ಮೋಸ ಮಾಡುವುದು ಅಪರಾಧವಲ್ಲ, ಹೊಸ ಕಾನೂನಿಗೆ ಗವರ್ನರ್ ಸಹಿ!

Published : Nov 25, 2024, 03:35 PM ISTUpdated : Nov 25, 2024, 03:37 PM IST
ಸಂಗಾತಿಗೆ ಮೋಸ ಮಾಡುವುದು ಅಪರಾಧವಲ್ಲ, ಹೊಸ ಕಾನೂನಿಗೆ ಗವರ್ನರ್ ಸಹಿ!

ಸಾರಾಂಶ

ಸಂಗಾತಿಗೆ ಮೋಸ ಮಾಡಿದರೆ ಶಿಕ್ಷಾರ್ಹ ಅಪರಾಧ ಅನ್ನೋ 107 ವರ್ಷಗಳ ಹಳೇ ಕಾನೂನುನ್ನು ತೆಗೆದು ಹಾಕಲಾಗಿದೆ. ಈ ಕುರಿತು ಹೊಸ ಮಸೂದೆಗೆ ಗವರ್ನರ್ ಅಂಕಿತ ಹಾಕಿದ್ದಾರೆ. ಹೊಸ ಕಾನೂನಿನಲ್ಲಿ ಸಂಗಾತಿಗೆ ಮೋಸ ಮಾಡುವುದು ಅಪರಾಧ ಎಂದು ಪರಿಗಣಿಸುವುದಿಲ್ಲ.  

ನ್ಯೂಯಾರ್ಕ್(ನ.25) ಸಂಗಾತಿಗೆ ಮೋಸ ಮಾಡುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಮೋಸದ ರೀತಿ, ಪ್ರಮಾಣ ಸೇರಿದಂತೆ ಆಯಾ ಪ್ರಕರಣಕ್ಕೆ ಸಂಬಂಧಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಕುರಿತು ಬರೋಬ್ಬರಿ 107 ವರ್ಷಗಳ ಹಳೇ ಕಾನೂನನ್ನು ತೆಗೆದು ಹಾಕಿ ಹೊಸ ಮಸೂದೆಗೆ ಗವರ್ನರ್ ಸಹಿ ಹಾಕಿದ್ದಾರೆ. ಹೊಸ ಕಾನೂನಿನಲ್ಲಿ ಸಂಗಾತಿಗೆ  ಯಾರೇ  ಮೋಸ ಮಾಡಿದರೆ ಅಪರಾಧ ಎಂದು ಪರಿಗಣಿಸುವುದಿಲ್ಲ.ಈ ಹೊಸ ಕಾನೂನು ಬರುತ್ತಿರುವುದು ಭಾರತದಲ್ಲಿ ಅಲ್ಲ, ನ್ಯೂಯಾರ್ಕ್‌ನಲ್ಲಿ. 

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಈ ಮಸೂದೆಗೆ ಸಹಿ ಹಾಕಿದ್ದಾರೆ. ಈ ಹೊಸ ಕಾನೂನಿನಲ್ಲಿ ಸಂಗಾತಿ ಮೋಸ ಮಾಡಿ ಬೇರೆ ಸಂಬಂಧ ಬೆಳೆಸುವುದು ಸೇರಿದಂತೆ ಇತರ ವಂಚನೆಗಳನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ. 107 ವರ್ಷಗಳ ಹಿಂದಿನ ವಿಶೇಷ ಕಾನೂನಿನಲ್ಲಿ ಸಂಗಾತಿಗೆ ಮೋಸ, ವ್ಯಭಿಚಾರ ಪ್ರಕರಣದಲ್ಲಿ ಮೂರು ತಿಂಗಳ ವರೆಗೆ ಜೈಲು ಶಿಕ್ಷೆಗೆ ನೀಡುವ ಅವಕಾಶವಿತ್ತು. ಆದರೆ ಹೊಸ ಕಾನೂನು ಇದ್ಯಾವುದಕ್ಕೂ ಅವಕಾಶ ನೀಡುವುದಿಲ್ಲ.  ಹೊಸ ಮಸೂದೆಗೆ ಸಹಿ ಹಾಕಿದ ಗವರ್ನರ್ ಕ್ಯಾಥಿ, ಕಳೆದ 40 ವರ್ಷಗಳಿಂದ ನನ್ನ ಪತಿ ಜೊತೆ ಪ್ರೀತಿಯ ವೈವಾಹಿಕ ಜೀವನ ನಡೆಸುತ್ತಿದ್ದೇನೆ. ಇದು ನನ್ನ ಅದೃಷ್ಟ. ಆದರೆ ಅತ್ಯಂತ ಹಳೆಯ ವ್ಯಭಿಚಾರವನ್ನು ಅಪರಾಧೀಕರಿಸುವ ಬಿಲ್ ಸಹಿ ಹಾಕುವುದು ವಿಪರ್ಯಾಸ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಸದ್ಯ ಜನರ ಸಂಬಂಧ ಸಂಕೀರ್ಣವಾಗಿದೆ. ಕೆಲ ವಿಚಾರಗಳನ್ನು ಸಂಬಂಧದಲ್ಲಿರುವವರು, ವ್ಯಕ್ತಿಗಳು ನಿರ್ವಹಿಸಬೇಕು. ಕೋರ್ಟ್, ಪೊಲೀಸರು ಅಲ್ಲ. ಹೀಗಾಗಿ ಹಳತಾದ ಶಾಸನ ತೆಗೆದುಹಾಕಿ ಹೊಸ ಮಸೂದೆ ಜಾರಿ ಮಾಡಲಾಗಿದೆ ಎಂದು ಕ್ಯಾಥಿ ಹೇಳಿದ್ದಾರೆ.

ನಿಮ್ಮ ಸಂಗಾತಿಗೆ ಎಂದಿಗೂ ಈ ಏಳು ಶಬ್ದಗಳು ಹೇಳಬೇಡಿ..! ಸುಖ ಸಂಸಾರಕ್ಕೆ ನಿಷಿದ್ಧ ಪದಗಳಿವು...

ವ್ಯಭಿಚಾರ ಕುರಿತು ಹಲವು ರಾಜ್ಯಗಳಲ್ಲಿ ಕಾನೂನಿದೆ.  ಈ ಕಾನೂನು ವಿಚ್ಚೇಧನ ಪಡೆಯಲು ಹಲವು ಅಡೆ ತಡೆಗಳನ್ನೂ ಒಡ್ಡಿದೆ. ನ್ಯೂಯಾರ್ಕ್ ಈ ನಿಟ್ಟಿನಲ್ಲಿ ಹೊಸ ಹಾಗೂ ಪ್ರಬಲ ಕಾನೂನು ಜಾರಿಗೊಳಿಸಿದೆ. ಇದೀಗ ಹಲವು ರಾಜ್ಯಗಳು ವ್ಯಭಿಚಾರ ಕುರಿತು ಇರುವ ಹಳೇ ಕಾನೂನು ರದ್ದುಗೊಳಿಸಿ, ಅಲ್ಲಿನ ಜನತೆ, ಭೌಗೋಳಿಕ ಹಿನ್ನಲೆಯಲ್ಲಿ ಹೊಸ ಕಾನೂನು ರೂಪಿಸಲು ಮುಂದಾಗಿದ್ದಾರೆ ಎಂದು ಕ್ಯಾಥಿ ಹೇಳಿದ್ದಾರೆ.

ಹಳೇ ಕಾನೂನುಗಳು ಪ್ರಸ್ತುಕ ಕಾಲಕ್ಕೆ ತಕ್ಕಂತ ಬದಲಾವಣೆಯಾಗಬೇಕು. ಶತಮಾನಗಳ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲ. ಎಲ್ಲವೂ ಬದಲಾಗಿದೆ. ಹೀಗಾಗಿ ಸದ್ಯ ಜಾರಿಗೊಳಿಸಲು ಪ್ರಯಾಸವಿರುವ ಕಾನೂನುಗಳನ್ನು ಬದಲಿಸಬೇಕು. ಇದರ ಅವಶ್ಯಕತೆ ಇದೆ. ಇಂದಿನ ಕಾಲಕ್ಕೆ ತಕ್ಕಂತೆ ಕಾನೂನುಗಳನ್ನು ಬದಲಿಸಬೇಕಿದೆ. ಕಾನೂನುಗಳು ಜನರಿಗೆ ನ್ಯಾಯ ಒದಗಿಸುವಂತಿರಬೇಕು ಎಂದು ಕ್ಯಾಥಿ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!