
ಕಾಬೂಲ್(ಸೆ.28): ತಾಲಿಬಾನ್(Taliban) ಉಗ್ರರು, ಅಫ್ಘಾನಿಸ್ತಾನ(Afghanistan) ವಶಪಡಿಸಿಕೊಂಡ ಬಳಿಕ ಇಡೀ ದೇಶವ ಜೈಲಿನಂತಾಗಿದೆ. ನಾಗರಿಕರೆಲ್ಲಾ ಬದುಕಿದ್ದರೂ ಸತ್ತವರಂತೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ ಎಂದು ಕಾಬೂಲ್ನಲ್ಲಿ(Kabul) ನೆಲೆಸಿರುವ ವ್ಯಕ್ತಿಯೊಬ್ಬ ದೇಶದ ಚಿತ್ರವನ್ನು ಭಾರತದ ಸುದ್ದಿ ವಾಹಿನಿಯೊಂದರ ಜೊತೆ ಹಂಚಿಕೊಂಡಿದ್ದಾನೆ.
‘ಉಗ್ರರು ಕಾಬೂಲ್(Kabul) ವಶಪಡಿಸಿಕೊಂಡ ಬಳಿಕ ನಾನು ಕುಟುಂಬ ಸಮೇತ ದೇಶ ತೊರೆಯಲು ನೋಡಿದೆ. ಅದು ಆಗಲಿಲ್ಲ. ಕೊನೆಗೆ ಉಗ್ರರ ವಿರುದ್ಧ ಸಿಡಿದೆದ್ದ ಪಂಜ್ಶೀರ್ ಕಣಿವೆಗೆ(Panjshir Valley) ತೆರಳಿ ಅಲ್ಲಿ ಅವರ ಜೊತೆ ಸೇರಿ ಉಗ್ರರ ವಿರುದ್ಧ ಹೋರಾಡಿದೆ.
ಆದರೆ ಅಲ್ಲಿಯೂ ಉಗ್ರರ ಕೈ ಮೇಲಾದ ಬಳಿಕ ಒಂದೂವರೆ ದಿನ ನಡೆದುಕೊಂಡು ಕಾಬೂಲ್(Kabul) ಸೇರಿಕೊಂಡೆ. ಅಂದಿನಿಂದಲೂ ನಾನು ಇಲ್ಲಿ ಅಡಗಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನನ್ನ ಕುಟುಂಬದ ಸದಸ್ಯರು ಒಬ್ಬೊಬ್ಬರು ಒಂದೊಂದು ಕಡೆ ಇದ್ದಾರೆ. ಬದುಕು ಸಾವಿಗೆ ಸಮವಾಗಿದೆ’ ಎಂದು ತನ್ನ ನೋವನ್ನು ತೋಡಿಕೊಂಡಿದ್ದಾನೆ.
‘ಮಹಿಳೆಯರು ಕೆಲಸ ಮಾಡುವುದಕ್ಕೆ ತಾಲಿಬಾನ್(Taliban) ಸಂಪೂರ್ಣ ನಿರ್ಬಂಧ ವಿಧಿಸಿದೆ. ಜೊತೆಗೆ ಶಾಲೆ ಮತ್ತು ಕಾಲೇಜುಗಳಿಗೆ ಹೋಗುವ ಅವಕಾಶಗಳನ್ನೂ ಕಳೆದುಕೊಂಡಿದ್ದಾರೆ. ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಬದುಕು ಚಿಂತಾಜನಕವಾಗಿದೆ. ಆದರೆ ಭಾರತ ಹಲವು ಧರ್ಮಗಳಿಗೆ ಜಾಗ ನೀಡಿದೆ.
ಭಾರತದಲ್ಲಿ ನಾನು ವಿದ್ಯಾಭ್ಯಾಸ ಮಾಡಿರುವುದರಿಂದ ಇದನ್ನು ಕಂಡುಕೊಂಡಿದ್ದೇನೆ. ಭಾರತೀಯರು ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತಿದ್ದಾರೆ. ನನ್ನ ಭಾರತೀಯ ಮಿತ್ರರು ಕರೆ ಮಾಡಿ ಇಲ್ಲಿ ನನ್ನ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ. ಭಾರತಕ್ಕೆ ನಾನು ಸದಾ ಆಭಾರಿ ಎಂದು ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ