ಆಫ್ಘನ್‌ ಸಿಖ್ಖರ ಭಾರತ ಭೇಟಿಗೆ ಹೈಕಮಾಂಡ್‌ ಸಮ್ಮತಿ ಕೋರಿದ ಉಗ್ರರು!

Published : Aug 31, 2021, 11:27 AM IST
ಆಫ್ಘನ್‌ ಸಿಖ್ಖರ ಭಾರತ ಭೇಟಿಗೆ ಹೈಕಮಾಂಡ್‌ ಸಮ್ಮತಿ ಕೋರಿದ ಉಗ್ರರು!

ಸಾರಾಂಶ

ಗುರು ತೇಜ್‌ ಬಹದ್ದೂರ್‌ ಸಾಹಿಬ್‌ ಅವರ 400ನೇ ಜನ್ಮ ಜಯಂತಿ  ಭಾರತಕ್ಕೆ ತೆರಳಲು ಬಯಸಿರುವ 140 ಆಫ್ಘನ್‌ ಸಿಖ್ಖರಿಗೆ ಅನುಮತಿ ನೀಡುವ ವಿಷಯದಲ್ಲಿ ಸಂಘಟನೆಯ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ

ಕಾಬೂಲ್‌(ಆ.31): ಗುರು ತೇಜ್‌ ಬಹದ್ದೂರ್‌ ಸಾಹಿಬ್‌ ಅವರ 400ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾರತಕ್ಕೆ ತೆರಳಲು ಬಯಸಿರುವ 140 ಆಫ್ಘನ್‌ ಸಿಖ್ಖರಿಗೆ ಅನುಮತಿ ನೀಡುವ ವಿಷಯದಲ್ಲಿ ಸಂಘಟನೆಯ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಎಂದು ತಾಲಿಬಾನಿ ಉಗ್ರರು ಹೇಳಿದ್ದಾರೆ.

ಕಳೆದ ವಾರ ಈ ಸಿಖ್ಖರು, ವಿಮಾನ ಏರಲು ಹೊರಟಾಗ ಅವರನ್ನು ಉಗ್ರರು ಬೆದರಿಸಿ ಹಿಂದಕ್ಕೆ ಕಳಿಸಿದ್ದರು. ಬಳಿಕ ಅವರೆಲ್ಲಾ ಸ್ಥಳೀಯ ಗುರುದ್ವಾರವೊಂದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅದಾದ ಬಳಿಕ ಸ್ಥಳೀಯ ಸಿಖ್‌ ಮುಖಂಡರು, ಸ್ಥಳೀಯ ತಾಲಿಬಾನಿಗಳಿಗೆ ಭಾರತಕ್ಕೆ ತೆರಳುವ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದರು.

ಈ ವೇಳೆ ಕೇಂದ್ರ ನಾಯಕರೊಂದಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಸ್ಥಳೀಯ ತಾಲಿಬಾನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಬೂಲ್‌ನಲ್ಲಿ ಇದ್ದ ಆಫ್ಘನ್‌ ಸಿಖ್ಖರು ಇದೀಗ ತವರಾದ ಘಜ್ನಿ, ಜಲಾಲಾಬಾದ್‌ಗೆ ಮರಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ