ಅನ್ನ ನೀರು ಬಿಟ್ಟು ಕೂತ ಕುಟುಂಬ; ಕಾಣೆಯಾದ ಪ್ರೀತಿಯ ನಾಯಿ ಹುಡುಕಿ ಕೊಟ್ಟವರಿಗೆ ಬಹುಮಾನ

Published : Sep 05, 2026, 10:06 PM IST
dog missing

ಸಾರಾಂಶ

ಪ್ರೀತಿಯಿಂದ ಸಾಕಿದ್ದ ಮುದ್ದಿನ ನಾಯಿ ಪಟಾಕಿ ಸದ್ದಿಗೆ ಮನೆ ಬಿಟ್ಟು ಓಡಿ ಹೋಗಿದೆ. ನಾಯಿ ಮನೆಯಿಂದ ಹೋಗಿದ್ದೇ ಹೋಗಿದ್ದು, ಮಾಲೀಕರು ಅನ್ನ ನೀರು ಬಿಟ್ಟು ಕೂತಿದ್ದಾರಂತೆ. ಅಷ್ಟಕ್ಕೂ ಇದು ಎಲ್ಲಿ ನಡೆದಿರೋದು ಗೊತ್ತಾ?

ಮೂಗ ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ಬಾಂಧವ್ಯ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಮನೆಯ ಸದಸ್ಯನಂತೆ ಸಾಕಿದ ಪ್ರಾಣಿ ಕಣ್ಣೆದುರಿನಿಂದ ದೂರಾದರೆ ಆ ಕುಟುಂಬ ಪಡುವ ಪಾಡು ಹೇಳತೀರದು. ತೆಲಂಗಾಣದ ಹನುಮಕೊಂಡದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ತನ್ನ ಪ್ರೀತಿಯ ನಾಯಿಯನ್ನು ಹುಡುಕಿಕೊಟ್ಟವರಿಗೆ ಮಾಲೀಕರು ಭರ್ಜರಿ ಬಹುಮಾನ ಘೋಷಿಸಿದ್ದಾರೆ.

ಪಟಾಕಿಗೆ ಓಡಿಹೋದ 'ಚೋಟು'

ಹನುಮಕೊಂಡದ ನಕ್ಕಲಗುಟ್ಟ ನಿವಾಸಿ ಅನಿ ಎಂಬುವವರು 'ಚೋಟು' ಎಂಬ ಜರ್ಮನ್ ಶೆಫರ್ಡ್ ತಳಿಯ ನಾಯಿಯನ್ನು ಅತಿ ಮುದ್ದಿನಿಂದ ಸಾಕುತ್ತಿದ್ದರು. ಆಗಸ್ಟ್ 28 ರಂದು ಮನೆಯ ಮುಂದೆ ನಡೆದ ಶುಭ ಸಮಾರಂಭವೊಂದರಲ್ಲಿ ಪಟಾಕಿಗಳನ್ನು ಸಿಡಿಸಲಾಗಿತ್ತು. ಆ ಭೀಕರ ಸದ್ದಿಗೆ ಹೆದರಿದ ಚೋಟು, ಭಯದಿಂದ ಮನೆಯ ಗೋಡೆ ಹಾರಿ ಓಡಿಹೋಗಿದ್ದಾನೆ. ಅಂದಿನಿಂದ ಇಂದಿನವರೆಗೆ ಆ ಮುದ್ದಿನ ನಾಯಿ ಮನೆಗೆ ಮರಳಿಲ್ಲ.

ನಾಯಿಯ ಗುರುತುಗಳು ಹೀಗಿವೆ

  • ಹೆಸರು: ಚೋಟು
  • ತಳಿ: ಜರ್ಮನ್ ಶೆಫರ್ಡ್ (German Shepherd)
  • ವಯಸ್ಸು: 1 ವರ್ಷ
  • ಗುರುತು: ಕುತ್ತಿಗೆಯಲ್ಲಿ ನೀಲಿ ಬಣ್ಣದ ಪಟ್ಟಿ (Blue Collar) ಇದೆ.
  • ನಾಪತ್ತೆಯಾದ ಸ್ಥಳ: ನಕ್ಕಲಗುಟ್ಟ, ಹನುಮಕೊಂಡ.
  • ಹುಡುಕಿಕೊಟ್ಟವರಿಗೆ 5,000 ರೂ. ಬಹುಮಾನ!

ತಮ್ಮ ಪ್ರೀತಿಯ ಚೋಟು ಕಾಣೆಯಾದಾಗಿನಿಂದ ಅನಿ ಅವರ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ನಾಯಿಯನ್ನು ಪತ್ತೆ ಹಚ್ಚಲು ಅವರು ಮಾಡದ ಪ್ರಯತ್ನವಿಲ್ಲ. ನಗರದಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ, ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ ಮತ್ತು ಪೊಲೀಸರಿಗೂ ದೂರು ನೀಡಿದ್ದಾರೆ. ಯಾರು ಈ ನಾಯಿಯನ್ನು ಪತ್ತೆ ಹಚ್ಚಿ ತಂದುಕೊಡುತ್ತಾರೋ ಅವರಿಗೆ 5,000 ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಹುಡುಕಿಕೊಟ್ಟವರಿಗೆ ಒಂದು ವಿಶೇಷ ಉಡುಗೊರೆಯನ್ನು ನೀಡುವುದಾಗಿ ತಿಳಿಸಿದ್ದಾರೆ.

ಪ್ರೀತಿಗಿಂತ ಬೆಲೆ ದೊಡ್ಡದಲ್ಲ

ನಮಗೆ ನಾಯಿಯ ಬೆಲೆ ಮುಖ್ಯವಲ್ಲ, ಅದರೊಂದಿಗೆ ನಮಗಿರುವ ಭಾವನಾತ್ಮಕ ಸಂಬಂಧ ದೊಡ್ಡದು. ಅದು ನಮ್ಮ ಮನೆಯ ಮಗನಿದ್ದಂತೆ ಎಂದು ಮಾಲೀಕರು ಭಾವುಕರಾಗಿ ಹೇಳಿದ್ದಾರೆ. ಒಂದು ವೇಳೆ ನಿಮಗೆ ಈ ನಾಯಿ ಎಲ್ಲಾದರೂ ಕಂಡುಬಂದಲ್ಲಿ ಅಥವಾ ಯಾರಾದರೂ ಪೊಲೀಸರಿಗೆ ಒಪ್ಪಿಸಿದ್ದರೆ ಕೂಡಲೇ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಸ್ಕಾರ್ಪಿಯೋ ಕಳ್ಳತನವಾಗಬಾರದೆಂದು ಮಾಲೀಕನ ಮಾಸ್ಟರ್ ಪ್ಲ್ಯಾನ್! ಕಾರು ಛಾವಣಿ ಮೇಲೆ ಶಿಫ್ಟ್, Video Viral
'ಬಂದು ನಮ್ಮೊಂದಿಗೆ ಕೆಲಸ ಮಾಡು': ನದಿ ಸ್ವಚ್ಛಗೊಳಿಸಿದ ಭಾರತೀಯ ಯುವಕನಿಗೆ ನೆದರ್‌ಲ್ಯಾಂಡ್ಸ್ ನಿಂದ ಆಹ್ವಾನ!