ಮೈಸೂರು ನಿವೃತ್ತ ಶಿಕ್ಷಕರ ಖಾತೆಗೆ 1.33 ಕೋಟಿ ಕ್ಯಾಶ್ ಡೆಪಾಸಿಟ್; ITR ಕೂಡ ಇಲ್ಲ, 26 ದಿನ ತಡವಾದ ನೋಟಿಸ್‌ನಿಂದ ITATನಲ್ಲಿ ಬಿಗ್ ಗೆಲುವು

Published : Aug 08, 2026, 05:59 PM IST
rs 1 33 crore cash deposit no itr filing yet Mysuru senior citizen wins income tax case itat Bengaluru

ಸಾರಾಂಶ

ಮೈಸೂರಿನ ನಿವೃತ್ತ ಶಿಕ್ಷಕರ 1.33 ಕೋಟಿ ನಗದು ಠೇವಣಿ ಪ್ರಕರಣದಲ್ಲಿ 26 ದಿನ ತಡವಾಗಿ ತೆರಿಗೆ ನೋಟಿಸ್ ನೀಡಿದ್ದರಿಂದ ITAT ಬೆಂಗಳೂರು ಮರುಮೌಲ್ಯಮಾಪನ ಆದೇಶವನ್ನೇ ರದ್ದುಪಡಿಸಿ ಅವರ ಪರ ತೀರ್ಪು ನೀಡಿದೆ.

ಬ್ಯಾಂಕ್ ಖಾತೆಗಳಲ್ಲಿ ಬರೋಬ್ಬರಿ 1.33 ಕೋಟಿ ರೂಪಾಯಿ ನಗದು ಠೇವಣಿ ಮಾಡಿದ್ದರೂ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸದ ಕರ್ನಾಟಕದ ಮೈಸೂರಿನ ನಿವೃತ್ತ ಶಿಕ್ಷಕರೊಬ್ಬರು ತೆರಿಗೆ ಪ್ರಕರಣದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಅವರ ವಿರುದ್ಧದ ಮರುಮೌಲ್ಯಮಾಪನ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ನಿವೃತ್ತ ಶಿಕ್ಷಕರ ಪರವಾಗಿ ತೀರ್ಪು ಬರಲು ಮುಖ್ಯ ಕಾರಣ ಅವರ ಬಳಿ 1.33 ಕೋಟಿ ರೂಪಾಯಿ ಹಣ ಇತ್ತು ಎಂಬುದಲ್ಲ. ಬದಲಾಗಿ ಆದಾಯ ತೆರಿಗೆ ಇಲಾಖೆ ಮರುಮೌಲ್ಯಮಾಪನದ ನೋಟಿಸ್ ನೀಡಿದ ಸಮಯವೇ ಕಾನೂನುಬದ್ಧ ಮಿತಿಯನ್ನು ಮೀರಿತ್ತು ಎಂಬುದು ಪ್ರಮುಖ ಕಾರಣವಾಗಿದೆ.

1.33 ಕೋಟಿ ರೂಪಾಯಿ ನಗದು ಠೇವಣಿ ಹೇಗೆ ಪತ್ತೆಯಾಯಿತು?

CBDT ಸ್ಥಾಪಿಸಿರುವ Risk Management Strategy (RMS) ವ್ಯವಸ್ಥೆಯಲ್ಲಿ ಮರಾಠಿಕ್ಯಾತನಹಳ್ಳಿ ಅವರ ಬ್ಯಾಂಕ್ ವಹಿವಾಟುಗಳು ರೆಡ್ ಫ್ಲ್ಯಾಗ್ ಆಗಿದ್ದವು. ಅವರು ಯಾವುದೇ ITR ಸಲ್ಲಿಸದ ಕಾರಣ, ಆ ವರ್ಷದಲ್ಲಿ ಅವರ ನಿಜವಾದ ಆದಾಯದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಇಲಾಖೆಗೆ ತಿಳಿದಿದ್ದ ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರ ಆದಾಯದ ಮೂಲಗಳು ಕೃಷಿ ಚಟುವಟಿಕೆಗಳು ಮತ್ತು ಉಳಿತಾಯ ಬ್ಯಾಂಕ್ ಖಾತೆಗಳಿಂದ ಬಂದ ಬಡ್ಡಿ ಆಗಿದ್ದವು. ಆದರೆ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತದ ನಗದು ಠೇವಣಿ ಆಗಿರುವುದು ಇಲಾಖೆಯ ಅನುಮಾನಕ್ಕೆ ಕಾರಣವಾಯಿತು.

RMSನಲ್ಲಿ ಪತ್ತೆಯಾದ ವಹಿವಾಟುಗಳೇನು?

2015-16ನೇ ಮೌಲ್ಯಮಾಪನ ವರ್ಷಕ್ಕೆ (AY 2015-16) ಸಂಬಂಧಿಸಿದಂತೆ CBDTಯ RMS ವ್ಯವಸ್ಥೆಯಲ್ಲಿ ಈ ವಹಿವಾಟುಗಳು ದಾಖಲಾಗಿದ್ದವು;

ಬ್ಯಾಂಕ್ ಆಫ್ ಬರೋಡಾ ಉಳಿತಾಯ ಖಾತೆಯಲ್ಲಿ ₹10 ಲಕ್ಷಕ್ಕಿಂತ ಹೆಚ್ಚಿನ ಠೇವಣಿ , ಒಟ್ಟು ಮೊತ್ತ 13 ಲಕ್ಷ ರೂಪಾಯಿ. ಕೆನರಾ ಬ್ಯಾಂಕ್ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಒಟ್ಟು ಮೊತ್ತ 60 ಲಕ್ಷ ರೂಪಾಯಿ. 50,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿಗಳು ಒಟ್ಟು ಮೊತ್ತ 60 ಲಕ್ಷ ರೂಪಾಯಿ. ಬ್ಯಾಂಕ್ ಆಫ್ ಬರೋಡಾದಿಂದ ಬಡ್ಡಿ ಆದಾಯ 12,701 ರೂಪಾಯಿ. ಒಟ್ಟು ಸುಮಾರು 1.33 ಕೋಟಿ ರೂಪಾಯಿ. ಈ ಮಾಹಿತಿಯ ಆಧಾರದ ಮೇಲೆ, ಮರಾಠಿಕ್ಯಾತನಹಳ್ಳಿ ಅವರು 2015-16ನೇ ಸಾಲಿನಲ್ಲಿ ಬಹಿರಂಗಪಡಿಸದ ಆದಾಯ ಹೊಂದಿರಬಹುದು ಎಂದು ಆದಾಯ ತೆರಿಗೆ ಇಲಾಖೆ ಶಂಕಿಸಿತು.

ಮಾರ್ಚ್ 26, 2022ರಂದು ಮೊದಲ ನೋಟಿಸ್

ಈ ಹಿನ್ನೆಲೆಯಲ್ಲಿ ಮಾರ್ಚ್ 26, 2022ರಂದು ಸೆಕ್ಷನ್ 148A(b) ಅಡಿಯಲ್ಲಿ ತೆರಿಗೆ ನೋಟಿಸ್ ನೀಡಲಾಯಿತು. ಆದರೆ ಮರಾಠಿಕ್ಯಾತನಹಳ್ಳಿ ಅವರು ಈ ನೋಟಿಸ್‌ಗೆ ಪ್ರತಿಕ್ರಿಯಿಸಲಿಲ್ಲ ಅಥವಾ ಪ್ರತಿಕ್ರಿಯಿಸಲು ಹೆಚ್ಚುವರಿ ಸಮಯವನ್ನೂ ಕೇಳಲಿಲ್ಲ. ನಂತರ ಏಪ್ರಿಲ್ 26, 2022ರಂದು ಸೆಕ್ಷನ್ 148A(d) ಅಡಿಯಲ್ಲಿ ಆದೇಶ ಹೊರಡಿಸಲಾಯಿತು. AY 2015-16ಕ್ಕೆ ಸಂಬಂಧಿಸಿದಂತೆ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ನೀಡಲು ಇದು ಸೂಕ್ತ ಪ್ರಕರಣ ಎಂದು AO ನಿರ್ಧರಿಸಿದರು. ಅದೇ ದಿನ ಸೆಕ್ಷನ್ 148ರ ಅಡಿಯಲ್ಲಿ ಮತ್ತೊಂದು ನೋಟಿಸ್ ನೀಡಿ, ನೋಟಿಸ್ ಸ್ವೀಕರಿಸಿದ 30 ದಿನಗಳೊಳಗೆ ITR ಸಲ್ಲಿಸುವಂತೆ ಸೂಚಿಸಲಾಯಿತು.

ITR ಸಲ್ಲಿಸಿದರೂ ಮತ್ತೊಂದು ಸಮಸ್ಯೆ

ಇದಕ್ಕೆ ಪ್ರತಿಕ್ರಿಯೆಯಾಗಿ ಮರಾಠಿಕ್ಯಾತನಹಳ್ಳಿ ITR ಸಲ್ಲಿಸಿದರು. ಆದರೆ ಅದನ್ನು ಇ-ವೆರಿಫೈ ಮಾಡಿರಲಿಲ್ಲ. ಹೀಗಾಗಿ ಆ ITR ಅಮಾನ್ಯವೆಂದು ಪರಿಗಣಿಸಲಾಯಿತು. ನಂತರ AO ಅವರು ಸೆಕ್ಷನ್ 142(1) ಅಡಿಯಲ್ಲಿ ವಿವಿಧ ನೋಟಿಸ್‌ಗಳನ್ನು ಹಾಗೂ ಶೋಕಾಸ್ ನೋಟಿಸ್‌ಗಳನ್ನು ನೀಡಿದರು. ಮರಾಠಿಕ್ಯಾತನಹಳ್ಳಿ ಅವರು ಇವುಗಳಿಗೆ ಭಾಗಶಃ ಮಾತ್ರ ಪ್ರತಿಕ್ರಿಯಿಸಿದರು. ಅಂತಿಮವಾಗಿ ಫೆಬ್ರವರಿ 29, 2024ರಂದು ಸೆಕ್ಷನ್ 147ರ ಜೊತೆಗೆ ಸೆಕ್ಷನ್ 144ರ ಅಡಿಯಲ್ಲಿ ಮರುಮೌಲ್ಯಮಾಪನ ಆದೇಶ ಹೊರಬಂದಿತು. ಅವರ ಒಟ್ಟು ಅಂದಾಜು ಆದಾಯವನ್ನು ಸುಮಾರು ₹48.85 ಲಕ್ಷ ಎಂದು ನಿಗದಿಪಡಿಸಲಾಯಿತು. ಇದರಲ್ಲಿ ಸುಮಾರು 48.73 ಲಕ್ಷವನ್ನು ಸೆಕ್ಷನ್ 69A ಮತ್ತು ಸೆಕ್ಷನ್ 115BBE ಅಡಿಯಲ್ಲಿ ವಿವರಿಸಲಾಗದ ಹಣ ಎಂದು ಪರಿಗಣಿಸಲಾಗಿತ್ತು.

CIT(A)ಯಲ್ಲಿ ಸೋಲು, ITATನಲ್ಲಿ ಗೆಲುವು

ಈ ಆದೇಶದಿಂದ ಅಸಮಾಧಾನಗೊಂಡ ಮರಾಠಿಕ್ಯಾತನಹಳ್ಳಿ ಅವರು CIT(A) ಮುಂದೆ ಮೇಲ್ಮನವಿ ಸಲ್ಲಿಸಿದರು. ಆದರೆ ಅಲ್ಲಿ ಅವರಿಗೆ ಪರಿಹಾರ ಸಿಗಲಿಲ್ಲ. ಇದಾದ ಬಳಿಕ ಅವರು ಬೆಂಗಳೂರಿನ ITAT ಮೊರೆ ಹೋದರು. ಏಪ್ರಿಲ್ 15, 2026ರಂದು ITAT ಬೆಂಗಳೂರು SMC ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಬಳಿಕ ಜುಲೈ 10, 2026ರಂದು ಅವರ ಪರವಾಗಿ ಆದೇಶ ನೀಡಿತು. ಈ ಪ್ರಕರಣದಲ್ಲಿ ಅವರನ್ನು ಚಾರ್ಟರ್ಡ್ ಅಕೌಂಟೆಂಟ್ ಅತುಲ್ ಸಿಜೆ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಸಿದ್ದೇಶ್ ಎನ್. ಗಡ್ಡಿ ಪ್ರತಿನಿಧಿಸಿದ್ದರು.

PREV
Read more Articles on
click me!

Recommended Stories

1917ರಲ್ಲಿ ಬ್ರಿಟಿಷರಿಗೆ 35 ಸಾವಿರ ಸಾಲ: ಈಗ ಸಿಕ್ಕಿತು ದಾಖಲೆ- ಹಣ ವಾಪಸಿಗೆ ಮನವಿ; ಮುಂದಾಗಿದ್ದೇ ರೋಚಕ
ಯಶ್ ಈಗ ಜಗತ್ತೇ ಲವ್ ಮಾಡೋ ನಟ.. ಆದ್ರೆ, ಕೆಜಿಎಫ್ ರಿಲೀಸ್ ವೇಳೆ ಭಾರೀ 'ಹೈಡ್ರಾಮಾ' ನಡೆದಿತ್ತು! ಅದೇನು ನೋಡಿ..