WEB EXCLUSIVE

ಫಾದರ್ಸ್ ಡೇ: ಚಿನ್ನೇಗೌಡರ ಕಣ್ಣೀರಲ್ಲಿ ಕಂಡ ತಂದೆಯ ರೂಪ!

Jun 15, 2019, 10:48 PM IST

'ತಾನು ಎಲ್ಲಾ ಕಡೆ ಇರುವುದಕ್ಕೆ ಸಾಧ್ಯ ಇಲ್ಲ ಅಂತ ದೇವರು 'ತಾಯಿ'ಯನ್ನು ಸೃಷ್ಟಿಸಿದ. ಹಾಗೇ, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಅಂತ 'ತಂದೆ'ಯನ್ನು ಸೃಷ್ಟಿಸಿದ.'' ಈ ಮಾತು ವಿಶ್ವವ್ಯಾಪಿಯಾಗಲು ಕಾರಣ 'ಅಪ್ಪ' ಅನ್ನುವ ಪದದಲ್ಲಿರುವ ಅತೀವ ಒಲವು. 'ಅಪ್ಪ' ಅನ್ನುವ ಎರಡು ಅಕ್ಷರಗಳಲ್ಲಿ ಸಾವಿರ ಆನೆಗಳ ಬಲವಿದೆ. ಭಯ ಆದಾಗ ಮುಗ್ಧ ಮಕ್ಕಳು ಓಡಿಬಂದು ಬಿಗಿದಪ್ಪುವುದು 'ತಂದೆ'ಯನ್ನೇ.! ಮಕ್ಕಳಿಗೆ ಧೈರ್ಯತುಂಬಿ, ಮಾರ್ಗದರ್ಶನ ನೀಡುವ ತಂದೆಗೆ ಒಂದು ಸಲಾಂ ಸಲ್ಲಿಸುವುದಕ್ಕೆ 'ವಿಶ್ವ ತಂದೆಯರ ದಿನ' ಬಂದೇ ಬಿಟ್ಟಿದೆ.  ಈ ಸಂದರ್ಭದಲ್ಲಿ ಒಬ್ಬ ಯಶಸ್ವಿ ನಟರ ತಂದೆ ಹಾಗೂ FKCCIನ ಅಧ್ಯಕ್ಷರಾಗಿರುವ ಚಿನ್ನೆ ಗೌಡ್ರು ಏನ್ ಹೇಳ್ತಾರೆ ನೋಡೋಣ ಬನ್ನಿ ಇಂದಿನ ಕಾರ್ಯಕ್ರಮದಲ್ಲಿ.