ಮನದ ಕಡಲು ಚಿತ್ರದ ಮೊದಲ ಹಾಡು ರಿಲೀಸ್‌,  ಭಟ್ಟರ ಲಿರಿಕ್ಸ್-ಹರಿಕೃಷ್ಣ ಮ್ಯೂಸಿಕ್-ಸಂಜಿತ್ ಹೆಗ್ಡೆ ವಾಯ್ಸ್!

ಮನದ ಕಡಲು ಚಿತ್ರದ ಮೊದಲ ಹಾಡು ರಿಲೀಸ್‌, ಭಟ್ಟರ ಲಿರಿಕ್ಸ್-ಹರಿಕೃಷ್ಣ ಮ್ಯೂಸಿಕ್-ಸಂಜಿತ್ ಹೆಗ್ಡೆ ವಾಯ್ಸ್!

Published : Dec 30, 2024, 04:00 PM IST

ಮುಂಗಾರುಮಳೆ ಚಿತ್ರದ ನಿರ್ಮಾಪಕ ಈ.ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಒಂದಾಗಿ 'ಮನದ ಕಡಲು' ಚಿತ್ರ ನಿರ್ಮಿಸಿದ್ದಾರೆ. ಮುಂಗಾರುಮಳೆ ಬಿಡುಗಡೆಯಾದ ದಿನವೇ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮನ ಗೆದ್ದಿದೆ.

ಸ್ಯಾಂಡಲ್​ವುಡ್​ನಲ್ಲಿ ಮುಂಗಾರುಮಳೆ ಸುರಿಸಿದ ನಿರ್ಮಾಪಕ ಮತ್ತು ನಿರ್ದೇಶಕರು ಮತ್ತೆ ಒಂದಾಗಿದ್ದಾರೆ. ಈ.ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮನದ ಕಡಲು ಅನ್ನೋ ಸಿನಿಮಾ ಸಿದ್ದವಾಗಿದ್ದು, ಸದ್ಯ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಮುಂಗಾರು ಮಳೆ ಬಿಡುಗಡೆಯಾದ ದಿನವೇ ರಿಲೀಸ್ ಆಗಿರೋ ಆ ಹಾಡು ಮೋಡಿ ಮಾಡ್ತಾ ಇದೆ. ಮುಂಗಾರುಮಳೆ.. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಸಿನಿಮಾ. 2006ರ ಡಿಸೆಂಬರ್ 29ರಂದು ರಿಲೀಸ್ ಆದ ಸಿನಿಮಾ ಬಾಕ್ಸ್​ಆಫೀಸ್​ ನಲ್ಲಿ ಹಣದ ಹೊಳೆಯನ್ನೇ ಹರಿಸಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸತನವನ್ನ ತಂದ ಚಿತ್ರ ಅನ್ನೋ ಹೆಗ್ಗಳಿಕೆ ಭಟ್ಟರ ಮುಂಗಾರುಮಳೆಯದ್ದು.

ಸದ್ಯ ಮುಂಗಾರುಮಳೆ ನಿರ್ಮಾಪಕ ಈ.ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್​ ಭಟ್ ಒಂದಾಗಿ ಮನದ ಕಡಲು ಅನ್ನೋ ಮತ್ತೊಂದು ಹೊಸತನದ ಸಿನಿಮಾದೊಂದಿಗೆ ಬಂದಿದ್ದಾರೆ. ಮುಂಗಾರುಮಳೆ ಬಿಡುಗೆಯಾದ ದಿನವೇ ಮನದ ಕಡಲು ಮೂವಿಯ ಮೊದಲ ಹಾಡನ್ನ ರಿಲೀಸ್ ಮಾಡಿದ್ದಾರೆ. ಹರಿಕೃಷ್ಣ ಮ್ಯೂಸಿಕ್, ಯೋಗರಾಜ್ ಭಟ್ಟರ ಲಿರಿಕ್ಸ್ , ಸಂಜಿತ್ ಹೆಗಡೆ ವಾಯ್ಸ್​ನಲ್ಲಿ ಮೂಡಿಬಂದಿರೋ ಈ ಸಾಂಗ್ ಮೋಡಿ ಮಾಡ್ತಾ ಇದೆ. ಯುವಜೋಡಿ ಸುಮುಖ್ & ರಾಶಿಕಾ ಈ ಹಾಡಲ್ಲಿ ಹೆಜ್ಜೆ ಹಾಕಿದ್ದು ಇಬ್ಬರ ಕೆಮೆಸ್ಟ್ರಿ ಸಖತ್ ಆಗಿ ಮೂಡಿಬಂದಿದೆ. ಮನದ ಕಡಲಿನ ಹಾಡಿನ ಮೋಡಿ ನೋಡ್ತಾ ಇದ್ರೆ ಮತ್ತೊಂದು ಮುಂಗಾರುಮಳೆ ಆಗೋ ಎಲ್ಲಾ ಲಕ್ಷಣಗಳೂ ಕಾಣ್ತಾ ಇವೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!