ಮನದ ಕಡಲು ಚಿತ್ರದ ಮೊದಲ ಹಾಡು ರಿಲೀಸ್‌,  ಭಟ್ಟರ ಲಿರಿಕ್ಸ್-ಹರಿಕೃಷ್ಣ ಮ್ಯೂಸಿಕ್-ಸಂಜಿತ್ ಹೆಗ್ಡೆ ವಾಯ್ಸ್!

ಮನದ ಕಡಲು ಚಿತ್ರದ ಮೊದಲ ಹಾಡು ರಿಲೀಸ್‌, ಭಟ್ಟರ ಲಿರಿಕ್ಸ್-ಹರಿಕೃಷ್ಣ ಮ್ಯೂಸಿಕ್-ಸಂಜಿತ್ ಹೆಗ್ಡೆ ವಾಯ್ಸ್!

Published : Dec 30, 2024, 04:00 PM IST

ಮುಂಗಾರುಮಳೆ ಚಿತ್ರದ ನಿರ್ಮಾಪಕ ಈ.ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಒಂದಾಗಿ 'ಮನದ ಕಡಲು' ಚಿತ್ರ ನಿರ್ಮಿಸಿದ್ದಾರೆ. ಮುಂಗಾರುಮಳೆ ಬಿಡುಗಡೆಯಾದ ದಿನವೇ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮನ ಗೆದ್ದಿದೆ.

ಸ್ಯಾಂಡಲ್​ವುಡ್​ನಲ್ಲಿ ಮುಂಗಾರುಮಳೆ ಸುರಿಸಿದ ನಿರ್ಮಾಪಕ ಮತ್ತು ನಿರ್ದೇಶಕರು ಮತ್ತೆ ಒಂದಾಗಿದ್ದಾರೆ. ಈ.ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮನದ ಕಡಲು ಅನ್ನೋ ಸಿನಿಮಾ ಸಿದ್ದವಾಗಿದ್ದು, ಸದ್ಯ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಮುಂಗಾರು ಮಳೆ ಬಿಡುಗಡೆಯಾದ ದಿನವೇ ರಿಲೀಸ್ ಆಗಿರೋ ಆ ಹಾಡು ಮೋಡಿ ಮಾಡ್ತಾ ಇದೆ. ಮುಂಗಾರುಮಳೆ.. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಸಿನಿಮಾ. 2006ರ ಡಿಸೆಂಬರ್ 29ರಂದು ರಿಲೀಸ್ ಆದ ಸಿನಿಮಾ ಬಾಕ್ಸ್​ಆಫೀಸ್​ ನಲ್ಲಿ ಹಣದ ಹೊಳೆಯನ್ನೇ ಹರಿಸಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸತನವನ್ನ ತಂದ ಚಿತ್ರ ಅನ್ನೋ ಹೆಗ್ಗಳಿಕೆ ಭಟ್ಟರ ಮುಂಗಾರುಮಳೆಯದ್ದು.

ಸದ್ಯ ಮುಂಗಾರುಮಳೆ ನಿರ್ಮಾಪಕ ಈ.ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್​ ಭಟ್ ಒಂದಾಗಿ ಮನದ ಕಡಲು ಅನ್ನೋ ಮತ್ತೊಂದು ಹೊಸತನದ ಸಿನಿಮಾದೊಂದಿಗೆ ಬಂದಿದ್ದಾರೆ. ಮುಂಗಾರುಮಳೆ ಬಿಡುಗೆಯಾದ ದಿನವೇ ಮನದ ಕಡಲು ಮೂವಿಯ ಮೊದಲ ಹಾಡನ್ನ ರಿಲೀಸ್ ಮಾಡಿದ್ದಾರೆ. ಹರಿಕೃಷ್ಣ ಮ್ಯೂಸಿಕ್, ಯೋಗರಾಜ್ ಭಟ್ಟರ ಲಿರಿಕ್ಸ್ , ಸಂಜಿತ್ ಹೆಗಡೆ ವಾಯ್ಸ್​ನಲ್ಲಿ ಮೂಡಿಬಂದಿರೋ ಈ ಸಾಂಗ್ ಮೋಡಿ ಮಾಡ್ತಾ ಇದೆ. ಯುವಜೋಡಿ ಸುಮುಖ್ & ರಾಶಿಕಾ ಈ ಹಾಡಲ್ಲಿ ಹೆಜ್ಜೆ ಹಾಕಿದ್ದು ಇಬ್ಬರ ಕೆಮೆಸ್ಟ್ರಿ ಸಖತ್ ಆಗಿ ಮೂಡಿಬಂದಿದೆ. ಮನದ ಕಡಲಿನ ಹಾಡಿನ ಮೋಡಿ ನೋಡ್ತಾ ಇದ್ರೆ ಮತ್ತೊಂದು ಮುಂಗಾರುಮಳೆ ಆಗೋ ಎಲ್ಲಾ ಲಕ್ಷಣಗಳೂ ಕಾಣ್ತಾ ಇವೆ.

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್