ಡಾ. ರಾಜ್​ ಕಿಡ್ನಾಪ್ ಕೇಸ್: ಎಸ್ಎಂ ಕೃಷ್ಣ, ಅಂಬಿ &  ರಜನಿ ನಡುವೆ ನಡೆದಿತ್ತು ರಹಸ್ಯ ಒಪ್ಪಂದ !

ಡಾ. ರಾಜ್​ ಕಿಡ್ನಾಪ್ ಕೇಸ್: ಎಸ್ಎಂ ಕೃಷ್ಣ, ಅಂಬಿ & ರಜನಿ ನಡುವೆ ನಡೆದಿತ್ತು ರಹಸ್ಯ ಒಪ್ಪಂದ !

Published : Dec 11, 2024, 12:09 PM ISTUpdated : Dec 11, 2024, 12:18 PM IST

ಕರುನಾಡಿನ ಜನತೆ ವೀರಪ್ಪನ್ ಭಯದಲ್ಲಿ ಮುಳುಗಿದ್ದ ದಿನಗಳಲ್ಲಿ ರಾಜ್‌ಕುಮಾರ್ ಅವರ ಬಿಡುಗಡೆಗೆ ಎಸ್.ಎಂ. ಕೃಷ್ಣ ಅವರು ರಹಸ್ಯ ವ್ಯೂಹ ರೂಪಿಸಿದ್ದರು. ಗೋವಿಂದರಾಜು ಬಿಡುಗಡೆಯ ನಂತರ, ರಾಜ್‌ಕುಮಾರ್ ಅವರ ಆರೋಗ್ಯ ಹದಗೆಡುತ್ತಿರುವ ಸುದ್ದಿ ಆತಂಕ ಹೆಚ್ಚಿಸಿತ್ತು. ಕೇಂದ್ರ ಸರ್ಕಾರದ ಒಪ್ಪಿಗೆಯ ಹೊರತಾಗಿಯೂ ಕೋರ್ಟ್ ವೀರಪ್ಪನ್ ಸಹಚರರ ಬಿಡುಗಡೆಗೆ ಅವಕಾಶ ನೀಡಲಿಲ್ಲ.

ಅವು ಅದೆಂಥಾ ಅತಂಕದ ದಿನಗಳು ಅಂದ್ರೆ, ಕರುನಾಡಿನ ಜನತೆ ಪ್ರತಿದಿನವೂ ಏನಾಗಿಬಿಡುತ್ತೋ ಅನ್ನೋ ಭಯದಲ್ಲಿ ಮುಳುಗಿದ್ರು. ನರಹಂತಕ ವೀರಪ್ಪನ್, ರಾಜ್​ಕುಮಾರ್​ಗೆ ಏನು ಮಾಡಿಬಿಡ್ತಾನೋ ಅನ್ನೋ ಆತಂಕದಲ್ಲಿ ದಿನದೂಡ್ತಾ ಇದ್ರು. ಅಣ್ಣಾವ್ರಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಇಡೀ ಕರ್ನಾಟಕ ಹೊತ್ತಿ ಉರಿಯುತ್ತೆ ಅನ್ನೋ ವಿಚಾರ ಮುಖ್ಯಮಂತ್ರಿ ಎಸ್,ಎಂ ಕೃಷ್ಣಗಿತ್ತು. ಇಂಥಾ ಸಮಯದಲ್ಲಿ ಯಾರು ತಾನೇ ನೆಮ್ಮದಿಯಿಂದ ನಿದ್ರಿಸೋಕೆ ಸಾಧ್ಯ..?

ಎಸ್.ಎಂ ಕೃಷ್ಣ - ತಮಿಳುನಾಡು ಸರ್ಕಾರದ ಜೊತೆಗೂಡಿ ಸಂಧಾನಕಾರರನ್ನ ಕಳುಹಿಸಿ, ರಾಜ್ ಬಿಡುಗಡೆಗೆ ಅವಿರತ ಪ್ರಯತ್ನ ಮಾಡ್ತಾ ಇದ್ರು. ನೆಡುಮಾರನ್ ಸಂಧಾನಕಾರನಾಗಿ ಎಂಟ್ರಿ ಕೊಟ್ಟ ಮೇಲೆ ತಕ್ಕ ಮಟ್ಟಿಗೆ ಸಂಧಾನ ಫಲಪೃದವಾಯ್ತು. ಮೊದಲ ಹಂತದಲ್ಲಿ ರಾಜ್​ಕುಮಾರ್ ಅಳಿಯ ಗೋವಿಂದರಾಜು ರಿಲೀಸ್ ಅದ್ರು. ಗೋವಿಂದ್​ರಾಜುರನ್ನ ಕೂರಿಸಿಕೊಂಡು ಅಲ್ಲಿನ ಸಕಲ ವಿಷಯ ತಿಳಿದುಕೊಂಡು ಮುಂದಿನ ಹೆಜ್ಜೆ ಇಟ್ರು ಎಸ್.ಎಂ ಕೃಷ್ಣ.

ಒಂದು ಹಂತದಲ್ಲಿ ಕೇಂದ್ರ ಸರ್ಕಾರವೇ ವೀರಪ್ಪನ್ ಸಹಚರರ ಬಿಡುಗಡೆಗೆ ಒಪ್ಪಿಗೆ ಕೊಟ್ರೂ, ಕೋರ್ಟ್ ಇದಕ್ಕೆ ಅವಕಾಶ ಕೊಡಲಿಲ್ಲ. ಅರಣ್ಯದಲ್ಲಿದ್ದ ಡಾ.ರಾಜ್​ಕುಮಾರ್ ಆರೋಗ್ಯ ಕೂಡ ಹದಗೆಡ್ತಾ ಇದೆ ಅನ್ನೋ ಸುದ್ದಿ ಮತ್ತಷ್ಟು ಆತಂಕ ಸೃಷ್ಟಿಮಾಡ್ತಾ ಇತ್ತು. ಆ ಹಂತದಲ್ಲೇ ಹಲವಾರು ರಹಸ್ಯ ಮಾತುಕಥೆಗಳನ್ನ ಮಾಡಿ, ಕೊನೆಗೂ ಅಣ್ಣಾವ್ರ ರಿಲೀಸ್​ಗೆ ಕೃಷ್ಣ ಒಂದು ವ್ಯೂಹವನ್ನ ರೂಪಿಸಿದ್ರು. ಅಂಬರೀಷ್ ರಜಿನಿಕಾಂತ್ ಮತ್ತು ಕೃಷ್ಣ ಬಿಟ್ರೆ ಆ ವಿಚಾರ ಯಾರಿಗೂ ತಿಳಿದಿರಲಿಲ್ಲ... ಅದೇನು ಅಂತ ವಿಡಿಯೋ ನೋಡಿ... 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more