ಡಾ ರಾಜ್‌ಕುಮಾರ್ ಅಪಹರಣ: ಆ 108 ದಿನಗಳು, ಹೇಗಿತ್ತು ಸಿ.ಎಂ ಕೃಷ್ಣ ಹೋರಾಟ?

ಡಾ ರಾಜ್‌ಕುಮಾರ್ ಅಪಹರಣ: ಆ 108 ದಿನಗಳು, ಹೇಗಿತ್ತು ಸಿ.ಎಂ ಕೃಷ್ಣ ಹೋರಾಟ?

Published : Dec 11, 2024, 11:43 AM IST

ಡಾ. ರಾಜ್‌ಕುಮಾರ್ ಅವರ ಅಪಹರಣದ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಎದುರಿಸಿದ ಸವಾಲುಗಳನ್ನು ಈ ಲೇಖನವು ವಿವರಿಸುತ್ತದೆ. ಕೃಷ್ಣ ಅವರು ಜನರ ಆಕ್ರೋಶ ಮತ್ತು ವೀರಪ್ಪನ್‌ನಿಂದ ರಾಜ್‌ಕುಮಾರ್ ಅವರನ್ನು ಬಿಡಿಸಿಕೊಳ್ಳುವ ಒತ್ತಡವನ್ನು ಹೇಗೆ ನಿಭಾಯಿಸಿದರು ಎಂಬುದನ್ನು ಒಳಗೊಂಡಿದೆ.

ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (SM Krishna) ಕರುನಾಡಿಗೆ ಹಲವು ಕೊಡುಗೆಗಳನ್ನ ಕೊಟ್ಟಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಕೂಡ ಕೃಷ್ಣರಿಂದ ಒಂದು ಬಹುಮುಖ್ಯವಾದ ಕೊಡುಗೆ ಇದೆ.  ವರನಟ ಡಾ.ರಾಜ್​ಕುಮಾರ್​ರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದಾಗ, ಎಸ್.ಎಂ ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ರು. ಅಣ್ಣಾವ್ರನ್ನ ನರಹಂತಕನ ಕೈಯಿಂದ ಬಚಾವ್ ಮಾಡಿ ತರುವ ಗುರುತರ ಜವಾಬ್ದಾರಿ ಕೃಷ್ಣ ಮೇಲಿತ್ತು.. ಆ ಸವಾಲನ್ನ ಕೃಷ್ಣ ಎದುರಿಸಿದ್ದು ಹೇಗೆ..? ಆ 108 ದಿನಗಳ ಕಾಲ ಏನೆಲ್ಲಾ ನಡೀತು..? ರಜನಿಕಾಂತ್ , ಅಂಬರೀಷ್ ಜೊತೆ ಎಸ್.ಎಂ ಕೃಷ್ಣ ಮಾಡಿಕೊಂಡ ಒಪ್ಪಂದ ಏನಿತ್ತು..? ಆ ಕುರಿತ ಅಪರೂಪದ ಸ್ಟೋರಿ ಇಲ್ಲಿದೆ ನೋಡಿ.

ಹೌದು, ನಮ್ಮನ್ನಗಲಿರೋ ಧೀಮಂತ ರಾಜಕಾರಣಿ ಎಸ್.ಎಂ. ಕೃಷ್ಣ, ಅವರ ರಾಜಕೀಯ ಜೀವನದಲ್ಲಿ ಹಲವು ಸವಾಲು ಎದುರಿಸಿದ್ದಾರೆ. ಆದ್ರೆ ಖುದ್ದು ಕೃಷ್ಣ ಹೇಳಿಕೊಂಡ ಪ್ರಕಾರ ಅವರ ಬದುಕಿನಲ್ಲಿ ಎದುರಿಸಿದ ಅತಿದೊಡ್ಡ, ಆತಂಕ ಸವಾಲು ಅಂದ್ರೆ ಡಾ.ರಾಜ್​ಕುಮಾರ್ ಅಪಹರಣದ ಎಪಿಸೋಡ್. 2000ನೇ ಇಸವಿಯಲ್ಲಿ ಕಾಡುಗಳ್ಳ ವೀರಪ್ಪನ್ ಕರ್ನಾಟಕ ರತ್ನ ರಾಜ್​ಕುಮಾರ್​ರನ್ನ ಕಿಡ್ನಾಪ್ ಮಾಡಿದಾಗ ಇದೇ ಎಸ್.ಎಂ ಕೃಷ್ಣ ಸಿಎಂ ಆಗಿದ್ರು. 

ಡಾ.ರಾಜ್​ಕುಮಾರ್ ಕಿಡ್ನಾಪ್ ಸುದ್ದಿ ಕೇಳಿ ರೊಚ್ಚಿಗೆದ್ದಿದ್ದ ಜನತೆಯನ್ನ ನಿಭಾಯಿಸೋ ಸವಾಲು, ಅಂಥಾ ನರಹಂತಕನ ಕಪಿಮುಷ್ಠಿಯಿಂದ ಅಣ್ಣಾವ್ರನ್ನ ಮರಳಿ ಕರೆತರುವ ಸವಾಲು ಕೃಷ್ಣ ಎದುರಿಗಿದ್ವು. ಆ 108 ದಿನಗಳ ಕಾಲ ಕೃಷ್ಣ ಅಕ್ಷರಶಃ ನಿದ್ದೆಯಿಲ್ಲದೇ ಕಳೆದಿದ್ರು. ಬಹುಶಃ ಯಾವ ಮುಖ್ಯಮಂತ್ರಿ ಕೂಡ ಎದುರಿಸದ ಕಠಿಣ ಸವಾಲೊಂದನ್ನ ಕೃಷ್ಣ ಎದುರಿಸಿದ್ರು. ಎಲ್ಲ ಮಾಹಿತಿಗಾಗಿ ವಿಡಿಯೋ ನೋಡಿ.. 

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more