ರಕ್ಷಿತ್ ಶೆಟ್ಟಿ ಮಾತಿಗೆ 'ಹೌದೋ ಹುಲಿಯಾ' ಎಂದ ಅಭಿಮಾನಿ; ಇಲ್ಲಿದೆ ನೋಡಿ ವಿಡಿಯೋ!

Jan 6, 2020, 5:29 PM IST

ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮವನ್ನು ಆಚರಿಸಲು ಬೆಳಗಾವಿಗೆ ಆಗಮಿಸಿದ್ದರು.

ಆಗ ಅಭಿಮಾನಿಗಳ ಜೊತೆ ಮಾತನಾಡುತ್ತಾ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮಾತನಾಡುತ್ತಾ, ಭಾಷಾ ವಿವಾದಗಳನ್ನು ಎಳೆದು ತರಬಾರದು ಎಂದು ಹೇಳುತ್ತಾರೆ.

ಉತ್ತರ ಕರ್ನಾಟಕದಲ್ಲಿ 'ಅವನೇ ಶ್ರೀಮನ್ನಾರಾಯಣ'ನಿಗೆ ಭರ್ಜರಿ ರೆಸ್ಪಾನ್ಸ್!

ಆಗ ಅಲ್ಲಿಯೇ ಪಕ್ಕದಲ್ಲಿದ್ದ ಅಭಿಮಾನಿಯೊಬ್ಬರ ಸಿದ್ದರಾಮಯ್ಯ ಡೈಲಾಗ್ 'ಹೌದ್ದೋ ಹುಲಿಯಾ' ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಆ ತಮಾಷೆಯ ಘಟನೆ ಇಲ್ಲಿದೆ ನೋಡಿ.