ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಜೊತೆಗಿನ ಕಿರಿಕ್ ಕಥೆ ತೆರೆದಿಟ್ಟ ಕಿಚ್ಚ ಸುದೀಪ್!

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಜೊತೆಗಿನ ಕಿರಿಕ್ ಕಥೆ ತೆರೆದಿಟ್ಟ ಕಿಚ್ಚ ಸುದೀಪ್!

Published : Jan 07, 2025, 01:27 PM ISTUpdated : Jan 07, 2025, 04:47 PM IST

ರಂಗ SSLC ಸಿನಿಮಾ ಶೂಟಿಂಗ್ ವೇಳೆ ಸುದೀಪ್ ಮತ್ತು ರಮ್ಯಾ ನಡುವೆ ದೊಡ್ಡ ಜಗಳ ನಡೆದಿತ್ತು. ರೊಮ್ಯಾಂಟಿಕ್ ಹಾಡಿನ ಶೂಟಿಂಗ್ ವೇಳೆ ಮುದ್ದು ಮಾಡಬೇಕಾದ ಜೋಡಿ, ಕಟ್ ಅಂದ ಕೂಡಲೇ ಕಿತ್ತಾಡುತ್ತಿತ್ತು.

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಂಗ SSLCನಿಂದ ಕಿಚ್ಚ ಹುಚ್ಚ ವರೆಗೂ 4 ಹಿಟ್ ಸಿನಿಮಾಗಳನ್ನ ಕೊಟ್ಟಿದೆ ಈ ಜೋಡಿ. ಇವತ್ತಿಗೂ ಸುದೀಪ್  ಮತ್ತು  ರಮ್ಯಾ ನಡುವೆ ಒಳ್ಳೆ ದೋಸ್ತಿ ಇದೆ. ಆದ್ರೆ ದಶಕಗಳ ಹಿಂದೆ ಇವರ ನಡುವೆ ಅದೆಂಥಾ ಕುಸ್ತಿ ನಡೆದಿತ್ತು ಗೊತ್ತಾ..?
 
ತೆರೆ ಮೇಲೆ ಮುದ್ದು ಮುದ್ದಾಗಿ ರೊಮ್ಯಾನ್ಸ್ ಮಾಡೋ ನಟ-ನಟಿಯರನ್ನ ಕಂಡು ಫ್ಯಾನ್ಸ್ ಆಹಾ ಎಂಥಾ ಜೋಡಿ ಅಂತ ಖುಷಿ ಪಡ್ತಾರೆ. ಆದ್ರೆ ನಿಜಕ್ಕೂ ಆ ಜೋಡಿ ನಡುವೆ ರೊಮ್ಯಾಂಟಿಕ್ ಮೂಡ್ ಇರುತ್ತಾ? ಕಿಚ್ಚ ಇತ್ತೀಚಿಗೆ ಹೇಳಿರೋ ಒಂದು ಫ್ಲ್ಯಾಶ್ ಬ್ಯಾಕ್ ಕಥೆ ಕೇಳಿದ್ರೆ ನೀವು ದಂಗಾಗೋದು ಫಿಕ್ಸ್. ಸರಿಗಮಪ ಶೋಗೆ ಅತಿಥಿಯಾಗಿ ಬಂದಿದ್ದ ಸುದೀಪ್ ಎದುರು ಸ್ಪರ್ಧಿಗಳಿಬ್ರು ಮನಸೇ ಮನಸೇ ಹಾಡನ್ನ ಹಾಡಿದ್ರು.

ಈ ಹಾಡು ಮುಗೀತಾ ಇದ್ದ ಹಾಗೇನೇ ಕಿಚ್ಚ, ಇದರ ಹಿಂದಿನ ಇನ್​ಟ್ರೆಸ್ಟಿಂಗ್ ಕಥೆಯನ್ನ ತೆರೆದಿಟ್ರು. ಅಸಲಿಗೆ ಇದು ರಂಗ sslc ಸಿನಿಮಾದ ರೊಮ್ಯಾಂಟಿಕ್ ಹಾಡು. ರಾಜೇಶ್ ಕೃಷ್ಣನ್ ಚಿತ್ರಾ ಸಿಹಿದನಿಯಲ್ಲಿರೋ ಈ ಹಾಡಿಗೆ ಸುದೀಪ್ ಌಂಡ್ ರಮ್ಯಾ ಹೆಜ್ಜೆ ಹಾಕಿದ್ದಾರೆ.

ಅಸಲಿಗೆ ಈ ಹಾಡಿನ ಶೂಟ್ ವೇಳೆ ರಮ್ಯಾಗೂ ಕಿಚ್ಚನಿಗೆ ದೊಡ್ಡ ಜಗಳ ಆಗಿತ್ತು. ಒಬ್ಬರ ಮುಖ ಒಬ್ಬರು ನೋಡ್ತಾ ಇರ್ಲಿಲ್ಲ. ಆದ್ರೆ ರೊಮ್ಯಾಂಟಿಕ್ ಸಾಂಗ್ ಶೂಟ್ ವೇಳೆ ಮುದ್ದು ಮಾಡಲೇಬೇಕು.. ಡೈರೆಕ್ಟರ್ ಌಕ್ಷನ್ ಅಂತ ಹೇಳ್ತಾನೇ ಮುದ್ದಾಟವಾಡ್ತಿದ್ದ ಇವರು ಕಟ್ ಅಂತಿದ್ದ ಹಾಗೇ ಕಿತ್ತಾಟವಾಡ್ತಾ ಇದ್ದರಂತೆ. 

ಹೌದು ರಮ್ಯಾ  ಮತ್ತು ಸುದೀಪ್ ಆರಂಭಿಕ ದಿನಗಳಲ್ಲಿ ಹಾವು ಮುಂಗಸಿ ತರಹ ಇದ್ರು. ರಂಗ sslc ರಮ್ಯಾಳ ಎರಡನೇ ಸಿನಿಮಾ. ಆದ್ರೆ ರಮ್ಯಾಗೆ ಸಿಕ್ಕಾಪಟ್ಟೆ ಜಂಬದ ಹುಡುಗಿ ಅನ್ನೋ ಬಿರುದು ಅಂಟಿಕೊಂಡಿತ್ತು. ಕಿಚ್ಚ ಕೂಡ ಆವಾಗ ಸಿಕ್ಕಾಪಟ್ಟೆ ಮುಂಗೋಪಿ. ಸೋ ಇಬ್ಬರನ್ನೂ ಕಾಸ್ಟ್ ಮಾಡಿಕೊಂಡು ರಂಗ ಎಸ್.ಎಸ್ಎಸ್ ಸಿ ಸಿನಿಮಾ ಮುಗಿಸೋವಷ್ಟರಲ್ಲಿ ನಿರ್ದೇಶಕ ಯೋಗರಾಜ್ ಭಟ್ ಪರದಾಡಿ ಹೋಗಿದ್ರು.
 
ಆದ್ರೆ ಕಿಚ್ಚ ಮತ್ತು ರಮ್ಯಾ ನಡುವಿನ ಈ ಕುಸ್ತಿ ಬಹುಬೇಗ ಮುಕ್ತಾಯ ಆಯ್ತು. ಮುಂದೆ ಇಬ್ಬರೂ ಒಳ್ಳೆ ದೋಸ್ತಿಗಳಾದ್ರು. ಸುದೀಪ್ ತಮ್ಮ ನಿರ್ದೇಶನದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾಗೆ ರಮ್ಯಾಳನ್ನೇ ನಾಯಕಿಯಾಗಿ ಹಾಕಿಕೊಂಡ್ರು. ಇಬ್ಬರು ಮುಂದೆ ಒಟ್ಟಾಗಿ 4 ಸಿನಿಮಾಗಳನ್ನ ಮಾಡಿದ್ರು. 

ಸುದೀಪ್ ಮತ್ತು ರಮ್ಯಾ ಅಂದ್ರೆ ಸ್ಯಾಂಡಲ್​ವುಡ್​ ನ ಯಶಸ್ವಿ ಜೋಡಿ ಅನ್ನಿಸಿಕೊಂಡಿದೆ. ಇವತ್ತಿಗೆ ರಮ್ಯಾ ಸಿನಿರಂಗದಿಂದ ದೂರ ಇದ್ರು ಕಿಚ್ಚನ ಜೊತೆಗೆ ಒಳ್ಳೆ ಬಾಂಧವ್ಯ ಇದೆ. ಆದ್ರೆ ರಂಗ sslc ಟೈಂನಲ್ಲಿ ಇವರನ್ನ ನೋಡಿದವರು ಮಾತ್ರ ಇವರ ಕಿತ್ತಾಟದ ಕಥೆಗಳನ್ನ ರಸವತ್ತಾಗಿ ಹೇಳ್ತಾರೆ.
 

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more