ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ: ಜಗ್ಗೇಶ್

ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ: ಜಗ್ಗೇಶ್

Published : Apr 23, 2022, 04:31 PM ISTUpdated : Apr 23, 2022, 05:46 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಬರೀ ಕನ್ನಡ ಚಿತ್ರರಂಗದ ನಟ ಮಾತ್ರ ಅಲ್ಲ. ಕನ್ನಡದ ಕಂಪನ್ನ ದೇಶಾದ್ಯಂತ ಪಸರಿಸಿರೋ ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಕಿಚ್ಚ. ಭಾರತೀಯ ಚಿತ್ರರಂಗ ಆರಡಿ ಕಟೌಟ್ ಅಂತಲೇ ಫೇಮಸ್ ಆಗಿರೋ ಸುದೀಪ್ ರನ್ನ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಂದಿ ಕೊಂಡಾಡ್ತಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಬರೀ ಕನ್ನಡ ಚಿತ್ರರಂಗದ ನಟ ಮಾತ್ರ ಅಲ್ಲ. ಕನ್ನಡದ ಕಂಪನ್ನ ದೇಶಾದ್ಯಂತ ಪಸರಿಸಿರೋ ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಕಿಚ್ಚ. ಭಾರತೀಯ ಚಿತ್ರರಂಗ ಆರಡಿ ಕಟೌಟ್ ಅಂತಲೇ ಫೇಮಸ್ ಆಗಿರೋ ಸುದೀಪ್ ರನ್ನ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಂದಿ ಕೊಂಡಾಡ್ತಾರೆ. ಬಿಗ್ ಬಿ ಅಮಿತಾಬ್ ಬಚ್ಚನ್‌ರಿಂದ (Amitabh Bacchan) ಹಿಡಿದು ಭಾರತೀಯ ಚಿತ್ರರಂಗದ ಟಾಪ್ ಒನ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳಲ್ಲೂ ನಟಿಸಿದ್ದಾರೆ ಸುದೀಪ್. ಹೀಗಾಗಿ ನವರಸ ನಾಯಕ ಜಗ್ಗೇಶ್ (Jaggesh) ಕಿಚ್ಚನನ್ನ ತಮ್ಮದೇ ಸ್ಟೈಲ್ನಲ್ಲಿ ಮನದುಂಬಿ ಕೊಂಡಾಡಿದ್ದಾರೆ. ಕನ್ನಡ ಚಿತ್ರರಂಗವನ್ನ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲಿಗ ಕಿಚ್ಚ ಸುದೀಪ್ ಎಂದಿರೋ ಜಗ್ಗೇಶ್, ತಮ್ಮ ಕಲ್ಲನ್ನ ತಾವೇ ಕೆತ್ತಿಕೊಂಡು ಮೂರ್ತಿಯಾದ ಹುಡುಗ ಎಂದಿದ್ದಾರೆ. 

ಸುದೀಪ್ ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅನ್ನೋ ಪಾಲಿಸಿಯವರು. ಕಿಚ್ಚ ಎಂದೂ ಯಾರಿಗು ತೊಂದರೆ ಕೊಟ್ಟವರಲ್ಲ. ಗೆದ್ದವರನ್ನ ಬೆನ್ನು ತಟ್ಟಿ, ಸೋತವರನ್ನ ಕೈ ಹಿಡಿದು ಮೇಲೆತ್ತೋ ಸ್ವಭಾವ ಕಿಚ್ಚನಿಗೆ ಹುಟ್ಟಿನಿಂದಲೇ ಬಂದಿದೆ. ಆದ್ರೆ ಅದ್ಯಾಕೋ ಗೊತ್ತಿಲ್ಲ ಕಿಚ್ಚನನ್ನ ಕೆಲ ಕಿಡಿಗೇಡಿಗಳು ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದಾರೆ. ಹೀಗಾಗಿ ಕಿಚ್ಚನಿಗೆ ಜಗ್ಗಣ್ಣ ಸಲಹೆ ಕೊಟ್ಟಿದ್ದು, ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ ಎಂದಿದ್ದಾರೆ ಜಗ್ಗೇಶ್.

ಜಗ್ಗೇಶ್ರ ತೋತಾಪುರಿ (Totapuri) ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಚೀಫ್ ಗೆಸ್ಟ್ ಆಗಿ ಬಂದಿದ್ರು. ತನ್ನ ಬಗ್ಗೆ ನವರಸ ನಾಯಕ ಆಡಿದ ಮಾತುಗಳನ್ನ ಆಲಿಸಿಕೊಂಡ ಹೆಬ್ಬುಲಿ ಕಿಚ್ಚ, ಜಗ್ಗೇಶ್ ಸಲಹೆಗಳಿಗೆ ಉತ್ತರ ಕೊಟ್ಟಿದ್ದಾರೆ. ನಾನು ಏನೇ ಮಾಡಿದ್ರು ಸುದ್ದಿಯಲ್ಲಿರುತ್ತೇನೆ, ಕನ್ನಡ ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ರು ಸುದ್ದಿಯಾಗ್ತೇನೆ ಮಾಡದೇ ಇದ್ರೂನು ಸುದ್ದಿಯಾಗುತ್ತೇನೆ. ನಾನು ಅಡುಗೆ ಇದ್ದಂತೆ. ನಿಮ್ಮ ನಾಲಿಗೆಗೆ ಯಾವ ತರದ ರುಚಿ ಸಿಗುತ್ತೋ ಅದನ್ನ ಆನಂದಿಸಿ' ಎಂದಿದ್ದಾರೆ. 
 

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more