ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ: ಜಗ್ಗೇಶ್

ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ: ಜಗ್ಗೇಶ್

Published : Apr 23, 2022, 04:31 PM ISTUpdated : Apr 23, 2022, 05:46 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಬರೀ ಕನ್ನಡ ಚಿತ್ರರಂಗದ ನಟ ಮಾತ್ರ ಅಲ್ಲ. ಕನ್ನಡದ ಕಂಪನ್ನ ದೇಶಾದ್ಯಂತ ಪಸರಿಸಿರೋ ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಕಿಚ್ಚ. ಭಾರತೀಯ ಚಿತ್ರರಂಗ ಆರಡಿ ಕಟೌಟ್ ಅಂತಲೇ ಫೇಮಸ್ ಆಗಿರೋ ಸುದೀಪ್ ರನ್ನ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಂದಿ ಕೊಂಡಾಡ್ತಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಬರೀ ಕನ್ನಡ ಚಿತ್ರರಂಗದ ನಟ ಮಾತ್ರ ಅಲ್ಲ. ಕನ್ನಡದ ಕಂಪನ್ನ ದೇಶಾದ್ಯಂತ ಪಸರಿಸಿರೋ ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಕಿಚ್ಚ. ಭಾರತೀಯ ಚಿತ್ರರಂಗ ಆರಡಿ ಕಟೌಟ್ ಅಂತಲೇ ಫೇಮಸ್ ಆಗಿರೋ ಸುದೀಪ್ ರನ್ನ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಂದಿ ಕೊಂಡಾಡ್ತಾರೆ. ಬಿಗ್ ಬಿ ಅಮಿತಾಬ್ ಬಚ್ಚನ್‌ರಿಂದ (Amitabh Bacchan) ಹಿಡಿದು ಭಾರತೀಯ ಚಿತ್ರರಂಗದ ಟಾಪ್ ಒನ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳಲ್ಲೂ ನಟಿಸಿದ್ದಾರೆ ಸುದೀಪ್. ಹೀಗಾಗಿ ನವರಸ ನಾಯಕ ಜಗ್ಗೇಶ್ (Jaggesh) ಕಿಚ್ಚನನ್ನ ತಮ್ಮದೇ ಸ್ಟೈಲ್ನಲ್ಲಿ ಮನದುಂಬಿ ಕೊಂಡಾಡಿದ್ದಾರೆ. ಕನ್ನಡ ಚಿತ್ರರಂಗವನ್ನ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲಿಗ ಕಿಚ್ಚ ಸುದೀಪ್ ಎಂದಿರೋ ಜಗ್ಗೇಶ್, ತಮ್ಮ ಕಲ್ಲನ್ನ ತಾವೇ ಕೆತ್ತಿಕೊಂಡು ಮೂರ್ತಿಯಾದ ಹುಡುಗ ಎಂದಿದ್ದಾರೆ. 

ಸುದೀಪ್ ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅನ್ನೋ ಪಾಲಿಸಿಯವರು. ಕಿಚ್ಚ ಎಂದೂ ಯಾರಿಗು ತೊಂದರೆ ಕೊಟ್ಟವರಲ್ಲ. ಗೆದ್ದವರನ್ನ ಬೆನ್ನು ತಟ್ಟಿ, ಸೋತವರನ್ನ ಕೈ ಹಿಡಿದು ಮೇಲೆತ್ತೋ ಸ್ವಭಾವ ಕಿಚ್ಚನಿಗೆ ಹುಟ್ಟಿನಿಂದಲೇ ಬಂದಿದೆ. ಆದ್ರೆ ಅದ್ಯಾಕೋ ಗೊತ್ತಿಲ್ಲ ಕಿಚ್ಚನನ್ನ ಕೆಲ ಕಿಡಿಗೇಡಿಗಳು ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದಾರೆ. ಹೀಗಾಗಿ ಕಿಚ್ಚನಿಗೆ ಜಗ್ಗಣ್ಣ ಸಲಹೆ ಕೊಟ್ಟಿದ್ದು, ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ ಎಂದಿದ್ದಾರೆ ಜಗ್ಗೇಶ್.

ಜಗ್ಗೇಶ್ರ ತೋತಾಪುರಿ (Totapuri) ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಚೀಫ್ ಗೆಸ್ಟ್ ಆಗಿ ಬಂದಿದ್ರು. ತನ್ನ ಬಗ್ಗೆ ನವರಸ ನಾಯಕ ಆಡಿದ ಮಾತುಗಳನ್ನ ಆಲಿಸಿಕೊಂಡ ಹೆಬ್ಬುಲಿ ಕಿಚ್ಚ, ಜಗ್ಗೇಶ್ ಸಲಹೆಗಳಿಗೆ ಉತ್ತರ ಕೊಟ್ಟಿದ್ದಾರೆ. ನಾನು ಏನೇ ಮಾಡಿದ್ರು ಸುದ್ದಿಯಲ್ಲಿರುತ್ತೇನೆ, ಕನ್ನಡ ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ರು ಸುದ್ದಿಯಾಗ್ತೇನೆ ಮಾಡದೇ ಇದ್ರೂನು ಸುದ್ದಿಯಾಗುತ್ತೇನೆ. ನಾನು ಅಡುಗೆ ಇದ್ದಂತೆ. ನಿಮ್ಮ ನಾಲಿಗೆಗೆ ಯಾವ ತರದ ರುಚಿ ಸಿಗುತ್ತೋ ಅದನ್ನ ಆನಂದಿಸಿ' ಎಂದಿದ್ದಾರೆ. 
 

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
Read more