ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ: ಜಗ್ಗೇಶ್

ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ: ಜಗ್ಗೇಶ್

Published : Apr 23, 2022, 04:31 PM ISTUpdated : Apr 23, 2022, 05:46 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಬರೀ ಕನ್ನಡ ಚಿತ್ರರಂಗದ ನಟ ಮಾತ್ರ ಅಲ್ಲ. ಕನ್ನಡದ ಕಂಪನ್ನ ದೇಶಾದ್ಯಂತ ಪಸರಿಸಿರೋ ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಕಿಚ್ಚ. ಭಾರತೀಯ ಚಿತ್ರರಂಗ ಆರಡಿ ಕಟೌಟ್ ಅಂತಲೇ ಫೇಮಸ್ ಆಗಿರೋ ಸುದೀಪ್ ರನ್ನ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಂದಿ ಕೊಂಡಾಡ್ತಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಬರೀ ಕನ್ನಡ ಚಿತ್ರರಂಗದ ನಟ ಮಾತ್ರ ಅಲ್ಲ. ಕನ್ನಡದ ಕಂಪನ್ನ ದೇಶಾದ್ಯಂತ ಪಸರಿಸಿರೋ ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಕಿಚ್ಚ. ಭಾರತೀಯ ಚಿತ್ರರಂಗ ಆರಡಿ ಕಟೌಟ್ ಅಂತಲೇ ಫೇಮಸ್ ಆಗಿರೋ ಸುದೀಪ್ ರನ್ನ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಂದಿ ಕೊಂಡಾಡ್ತಾರೆ. ಬಿಗ್ ಬಿ ಅಮಿತಾಬ್ ಬಚ್ಚನ್‌ರಿಂದ (Amitabh Bacchan) ಹಿಡಿದು ಭಾರತೀಯ ಚಿತ್ರರಂಗದ ಟಾಪ್ ಒನ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳಲ್ಲೂ ನಟಿಸಿದ್ದಾರೆ ಸುದೀಪ್. ಹೀಗಾಗಿ ನವರಸ ನಾಯಕ ಜಗ್ಗೇಶ್ (Jaggesh) ಕಿಚ್ಚನನ್ನ ತಮ್ಮದೇ ಸ್ಟೈಲ್ನಲ್ಲಿ ಮನದುಂಬಿ ಕೊಂಡಾಡಿದ್ದಾರೆ. ಕನ್ನಡ ಚಿತ್ರರಂಗವನ್ನ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲಿಗ ಕಿಚ್ಚ ಸುದೀಪ್ ಎಂದಿರೋ ಜಗ್ಗೇಶ್, ತಮ್ಮ ಕಲ್ಲನ್ನ ತಾವೇ ಕೆತ್ತಿಕೊಂಡು ಮೂರ್ತಿಯಾದ ಹುಡುಗ ಎಂದಿದ್ದಾರೆ. 

ಸುದೀಪ್ ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅನ್ನೋ ಪಾಲಿಸಿಯವರು. ಕಿಚ್ಚ ಎಂದೂ ಯಾರಿಗು ತೊಂದರೆ ಕೊಟ್ಟವರಲ್ಲ. ಗೆದ್ದವರನ್ನ ಬೆನ್ನು ತಟ್ಟಿ, ಸೋತವರನ್ನ ಕೈ ಹಿಡಿದು ಮೇಲೆತ್ತೋ ಸ್ವಭಾವ ಕಿಚ್ಚನಿಗೆ ಹುಟ್ಟಿನಿಂದಲೇ ಬಂದಿದೆ. ಆದ್ರೆ ಅದ್ಯಾಕೋ ಗೊತ್ತಿಲ್ಲ ಕಿಚ್ಚನನ್ನ ಕೆಲ ಕಿಡಿಗೇಡಿಗಳು ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದಾರೆ. ಹೀಗಾಗಿ ಕಿಚ್ಚನಿಗೆ ಜಗ್ಗಣ್ಣ ಸಲಹೆ ಕೊಟ್ಟಿದ್ದು, ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ ಎಂದಿದ್ದಾರೆ ಜಗ್ಗೇಶ್.

ಜಗ್ಗೇಶ್ರ ತೋತಾಪುರಿ (Totapuri) ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಚೀಫ್ ಗೆಸ್ಟ್ ಆಗಿ ಬಂದಿದ್ರು. ತನ್ನ ಬಗ್ಗೆ ನವರಸ ನಾಯಕ ಆಡಿದ ಮಾತುಗಳನ್ನ ಆಲಿಸಿಕೊಂಡ ಹೆಬ್ಬುಲಿ ಕಿಚ್ಚ, ಜಗ್ಗೇಶ್ ಸಲಹೆಗಳಿಗೆ ಉತ್ತರ ಕೊಟ್ಟಿದ್ದಾರೆ. ನಾನು ಏನೇ ಮಾಡಿದ್ರು ಸುದ್ದಿಯಲ್ಲಿರುತ್ತೇನೆ, ಕನ್ನಡ ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ರು ಸುದ್ದಿಯಾಗ್ತೇನೆ ಮಾಡದೇ ಇದ್ರೂನು ಸುದ್ದಿಯಾಗುತ್ತೇನೆ. ನಾನು ಅಡುಗೆ ಇದ್ದಂತೆ. ನಿಮ್ಮ ನಾಲಿಗೆಗೆ ಯಾವ ತರದ ರುಚಿ ಸಿಗುತ್ತೋ ಅದನ್ನ ಆನಂದಿಸಿ' ಎಂದಿದ್ದಾರೆ. 
 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!