ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

Published : Sep 03, 2024, 11:04 AM IST

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್​ಗೆ ಒಂದ್​ ರೀತಿ ಎಕ್ಸ್ಟ್ರಾ ಕೇರ್​. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು. 
 

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್​ಗೆ ಒಂದ್​ ರೀತಿ ಎಕ್ಸ್ಟ್ರಾ ಕೇರ್​. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು. ತನ್ನೂರಲ್ಲೇ ಸಿನಿಮಾ ಶೂಟಿಂಗ್ ಮಾಡೋದು. ಇದೀಗ ರಿಷಬ್​ ತನ್ನ ಸ್ನೇಹಿತ ತೆಲುಗು ಸ್ಟಾರ್​ ಜ್ಯೂನಿಯರ್​ ಎನ್​ಟಿಆರ್​​ಗೆ ಕೆರಾಡಿಯ ಊರು ಕೇರಿ, ದೇವಸ್ಥಾನದ ಪರಿಚಯ ಮಾಡಿಸಿದ್ದಾರೆ. ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯ ಕುವರ ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಕೆರಾಡಿಯಲ್ಲಿ ಎಂತೆಂಥಾ ಅದ್ಭುತಗಳಿವೆ ಅನ್ನೋ ವಿಚಾರ ಏನಾದ್ರು ನಿಮಗೆ ಗೊತ್ತಾ.? 

ಆ ಒಂದು ದೊಡ್ಡ ಅದ್ಭುತವನ್ನ, ಪವಾಡದ ಜಾಗವನ್ನ ರಿಷಬ್​ ಶೆಟ್ಟಿ ಈಗ ತನ್ನ ಗೆಳೆಯ ಜ್ಯೂನಿಯರ್ ಎನ್​ಟಿಆರ್​ ಹಾಗು ನಿರ್ದೇಶಕ ರಿಷಬ್ ಶೆಟ್ಟಿಗೆ ಪರಿಚಯಿಸಿದ್ದಾರೆ. ಈ ವೀಡಿಯೋ ನೋಡಿದ್ರೆ ನಿಜಕ್ಕೂ ಥ್ರಿಲ್ ಆಗುತ್ತೆ. ರಿಷಬ್ ಶೆಟ್ಟಿಯ ಕೆರಾಡಿ ಗ್ರಾಮದಲ್ಲಿ ಇಂತಹ ಅದ್ಭುತ ದೇವವಸ್ಥಾನ ಒಂದಿದೆಯಾ ಅಂತನ್ನಿಸುತ್ತೆ. ಹೌದು, ಕುಂದಾಪುರದ ಅದ್ಭುತ ತಾಣಗಳಲ್ಲಿ ಕೆರಾಡಿ ಊರು ಕೂಡ ಒಂದು. ಇಲ್ಲಿ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ದೊಡ್ಡ ಇತಿಹಾಸ ಇದೆ. ಈ ದೇವಸ್ಥಾನಕ್ಕೆ ಜ್ಯೂನಿಯರ್ ಎನ್​ಟಿಆರ್​ ಹಾಗು ಪ್ರಶಾಂತ್ ನೀಲ್​ರನ್ನ ಕರೆದುಕೊಂಡು ಹೋಗಿದ್ದಾರ ರಿಷಬ್.

ಜ್ಯೂನಿಯರ್ ಎನ್​ಟಿಆರ್ ಕುಟುಂಬ, ರಿಷಬ್ ಫ್ಯಾಮಿಲಿ, ಹಾಗು ಪ್ರಾಶಾಂತ್ ನೀಲ್ ದಂಪತಿ ಕರಾವಳಿಯ ಕಾನನದೊಳಗಿರೋ ಈ ದೇವಸ್ಥಾನಕ್ಕೆ ಬೆಟ್ಟ ಹತ್ತಿ ಹೋಗಿ ಬಂದಿದ್ದಾರೆ. ರಿಷಬ್ ಜ್ಯೂಎನ್​ಟಿಆರ್​ ಪ್ರಶಾಂತ್ ನೀಲ್​​​​ ಬೆಟ್ಟದ ತಪ್ಪಲಿನಲ್ಲಿ ಓಡಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಮ್ಮನ ಆಸೆ ಈಡೇರಿಸಲು ಜೂನಿಯರ್ ಎನ್​ಟಿಆರ್  ಉಡುಪಿಯ ಕೃಷ್ಣ ಮಠಕ್ಕೆ ಬಂದಿದ್ರು. ಅವರನ್ನ ಏರ್​​​ಪೋರ್ಟ್​ನಲ್ಲಿ ರಿಸೀವ್ ಮಾಡಿದಾಗಿನಿಂದ ಹಿಡಿದು ತನ್ನೂರನ್ನ ಪರಿಚಯಿಸೋ ವರೆಗೂ ನಟ ರಿಷಬ್ ಶೆಟ್ಟಿ ಎಲ್ಲಾ ಜವಾಬ್ಧಾರಿ ವಹಿಸಿಕೊಂಡು ಜೊತೆ ನಿಂತಿದ್ದು ವಿಶೇಷ. ಒಟ್ನಲ್ಲಿ ರಿಷಬ್ ಜ್ಯೂನಿಯರ್​ ಸ್ನೇಹಕ್ಕೆ ಈ ವೀಡಿಯೋ ಕೂಡ ಒಂದು ಸಾಕ್ಷಿ.

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more