ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

Published : Sep 03, 2024, 11:04 AM IST

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್​ಗೆ ಒಂದ್​ ರೀತಿ ಎಕ್ಸ್ಟ್ರಾ ಕೇರ್​. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು. 
 

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್​ಗೆ ಒಂದ್​ ರೀತಿ ಎಕ್ಸ್ಟ್ರಾ ಕೇರ್​. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು. ತನ್ನೂರಲ್ಲೇ ಸಿನಿಮಾ ಶೂಟಿಂಗ್ ಮಾಡೋದು. ಇದೀಗ ರಿಷಬ್​ ತನ್ನ ಸ್ನೇಹಿತ ತೆಲುಗು ಸ್ಟಾರ್​ ಜ್ಯೂನಿಯರ್​ ಎನ್​ಟಿಆರ್​​ಗೆ ಕೆರಾಡಿಯ ಊರು ಕೇರಿ, ದೇವಸ್ಥಾನದ ಪರಿಚಯ ಮಾಡಿಸಿದ್ದಾರೆ. ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯ ಕುವರ ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಕೆರಾಡಿಯಲ್ಲಿ ಎಂತೆಂಥಾ ಅದ್ಭುತಗಳಿವೆ ಅನ್ನೋ ವಿಚಾರ ಏನಾದ್ರು ನಿಮಗೆ ಗೊತ್ತಾ.? 

ಆ ಒಂದು ದೊಡ್ಡ ಅದ್ಭುತವನ್ನ, ಪವಾಡದ ಜಾಗವನ್ನ ರಿಷಬ್​ ಶೆಟ್ಟಿ ಈಗ ತನ್ನ ಗೆಳೆಯ ಜ್ಯೂನಿಯರ್ ಎನ್​ಟಿಆರ್​ ಹಾಗು ನಿರ್ದೇಶಕ ರಿಷಬ್ ಶೆಟ್ಟಿಗೆ ಪರಿಚಯಿಸಿದ್ದಾರೆ. ಈ ವೀಡಿಯೋ ನೋಡಿದ್ರೆ ನಿಜಕ್ಕೂ ಥ್ರಿಲ್ ಆಗುತ್ತೆ. ರಿಷಬ್ ಶೆಟ್ಟಿಯ ಕೆರಾಡಿ ಗ್ರಾಮದಲ್ಲಿ ಇಂತಹ ಅದ್ಭುತ ದೇವವಸ್ಥಾನ ಒಂದಿದೆಯಾ ಅಂತನ್ನಿಸುತ್ತೆ. ಹೌದು, ಕುಂದಾಪುರದ ಅದ್ಭುತ ತಾಣಗಳಲ್ಲಿ ಕೆರಾಡಿ ಊರು ಕೂಡ ಒಂದು. ಇಲ್ಲಿ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ದೊಡ್ಡ ಇತಿಹಾಸ ಇದೆ. ಈ ದೇವಸ್ಥಾನಕ್ಕೆ ಜ್ಯೂನಿಯರ್ ಎನ್​ಟಿಆರ್​ ಹಾಗು ಪ್ರಶಾಂತ್ ನೀಲ್​ರನ್ನ ಕರೆದುಕೊಂಡು ಹೋಗಿದ್ದಾರ ರಿಷಬ್.

ಜ್ಯೂನಿಯರ್ ಎನ್​ಟಿಆರ್ ಕುಟುಂಬ, ರಿಷಬ್ ಫ್ಯಾಮಿಲಿ, ಹಾಗು ಪ್ರಾಶಾಂತ್ ನೀಲ್ ದಂಪತಿ ಕರಾವಳಿಯ ಕಾನನದೊಳಗಿರೋ ಈ ದೇವಸ್ಥಾನಕ್ಕೆ ಬೆಟ್ಟ ಹತ್ತಿ ಹೋಗಿ ಬಂದಿದ್ದಾರೆ. ರಿಷಬ್ ಜ್ಯೂಎನ್​ಟಿಆರ್​ ಪ್ರಶಾಂತ್ ನೀಲ್​​​​ ಬೆಟ್ಟದ ತಪ್ಪಲಿನಲ್ಲಿ ಓಡಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಮ್ಮನ ಆಸೆ ಈಡೇರಿಸಲು ಜೂನಿಯರ್ ಎನ್​ಟಿಆರ್  ಉಡುಪಿಯ ಕೃಷ್ಣ ಮಠಕ್ಕೆ ಬಂದಿದ್ರು. ಅವರನ್ನ ಏರ್​​​ಪೋರ್ಟ್​ನಲ್ಲಿ ರಿಸೀವ್ ಮಾಡಿದಾಗಿನಿಂದ ಹಿಡಿದು ತನ್ನೂರನ್ನ ಪರಿಚಯಿಸೋ ವರೆಗೂ ನಟ ರಿಷಬ್ ಶೆಟ್ಟಿ ಎಲ್ಲಾ ಜವಾಬ್ಧಾರಿ ವಹಿಸಿಕೊಂಡು ಜೊತೆ ನಿಂತಿದ್ದು ವಿಶೇಷ. ಒಟ್ನಲ್ಲಿ ರಿಷಬ್ ಜ್ಯೂನಿಯರ್​ ಸ್ನೇಹಕ್ಕೆ ಈ ವೀಡಿಯೋ ಕೂಡ ಒಂದು ಸಾಕ್ಷಿ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more