ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

Published : Sep 03, 2024, 11:04 AM IST

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್​ಗೆ ಒಂದ್​ ರೀತಿ ಎಕ್ಸ್ಟ್ರಾ ಕೇರ್​. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು. 
 

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್​ಗೆ ಒಂದ್​ ರೀತಿ ಎಕ್ಸ್ಟ್ರಾ ಕೇರ್​. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು. ತನ್ನೂರಲ್ಲೇ ಸಿನಿಮಾ ಶೂಟಿಂಗ್ ಮಾಡೋದು. ಇದೀಗ ರಿಷಬ್​ ತನ್ನ ಸ್ನೇಹಿತ ತೆಲುಗು ಸ್ಟಾರ್​ ಜ್ಯೂನಿಯರ್​ ಎನ್​ಟಿಆರ್​​ಗೆ ಕೆರಾಡಿಯ ಊರು ಕೇರಿ, ದೇವಸ್ಥಾನದ ಪರಿಚಯ ಮಾಡಿಸಿದ್ದಾರೆ. ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯ ಕುವರ ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಕೆರಾಡಿಯಲ್ಲಿ ಎಂತೆಂಥಾ ಅದ್ಭುತಗಳಿವೆ ಅನ್ನೋ ವಿಚಾರ ಏನಾದ್ರು ನಿಮಗೆ ಗೊತ್ತಾ.? 

ಆ ಒಂದು ದೊಡ್ಡ ಅದ್ಭುತವನ್ನ, ಪವಾಡದ ಜಾಗವನ್ನ ರಿಷಬ್​ ಶೆಟ್ಟಿ ಈಗ ತನ್ನ ಗೆಳೆಯ ಜ್ಯೂನಿಯರ್ ಎನ್​ಟಿಆರ್​ ಹಾಗು ನಿರ್ದೇಶಕ ರಿಷಬ್ ಶೆಟ್ಟಿಗೆ ಪರಿಚಯಿಸಿದ್ದಾರೆ. ಈ ವೀಡಿಯೋ ನೋಡಿದ್ರೆ ನಿಜಕ್ಕೂ ಥ್ರಿಲ್ ಆಗುತ್ತೆ. ರಿಷಬ್ ಶೆಟ್ಟಿಯ ಕೆರಾಡಿ ಗ್ರಾಮದಲ್ಲಿ ಇಂತಹ ಅದ್ಭುತ ದೇವವಸ್ಥಾನ ಒಂದಿದೆಯಾ ಅಂತನ್ನಿಸುತ್ತೆ. ಹೌದು, ಕುಂದಾಪುರದ ಅದ್ಭುತ ತಾಣಗಳಲ್ಲಿ ಕೆರಾಡಿ ಊರು ಕೂಡ ಒಂದು. ಇಲ್ಲಿ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ದೊಡ್ಡ ಇತಿಹಾಸ ಇದೆ. ಈ ದೇವಸ್ಥಾನಕ್ಕೆ ಜ್ಯೂನಿಯರ್ ಎನ್​ಟಿಆರ್​ ಹಾಗು ಪ್ರಶಾಂತ್ ನೀಲ್​ರನ್ನ ಕರೆದುಕೊಂಡು ಹೋಗಿದ್ದಾರ ರಿಷಬ್.

ಜ್ಯೂನಿಯರ್ ಎನ್​ಟಿಆರ್ ಕುಟುಂಬ, ರಿಷಬ್ ಫ್ಯಾಮಿಲಿ, ಹಾಗು ಪ್ರಾಶಾಂತ್ ನೀಲ್ ದಂಪತಿ ಕರಾವಳಿಯ ಕಾನನದೊಳಗಿರೋ ಈ ದೇವಸ್ಥಾನಕ್ಕೆ ಬೆಟ್ಟ ಹತ್ತಿ ಹೋಗಿ ಬಂದಿದ್ದಾರೆ. ರಿಷಬ್ ಜ್ಯೂಎನ್​ಟಿಆರ್​ ಪ್ರಶಾಂತ್ ನೀಲ್​​​​ ಬೆಟ್ಟದ ತಪ್ಪಲಿನಲ್ಲಿ ಓಡಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಮ್ಮನ ಆಸೆ ಈಡೇರಿಸಲು ಜೂನಿಯರ್ ಎನ್​ಟಿಆರ್  ಉಡುಪಿಯ ಕೃಷ್ಣ ಮಠಕ್ಕೆ ಬಂದಿದ್ರು. ಅವರನ್ನ ಏರ್​​​ಪೋರ್ಟ್​ನಲ್ಲಿ ರಿಸೀವ್ ಮಾಡಿದಾಗಿನಿಂದ ಹಿಡಿದು ತನ್ನೂರನ್ನ ಪರಿಚಯಿಸೋ ವರೆಗೂ ನಟ ರಿಷಬ್ ಶೆಟ್ಟಿ ಎಲ್ಲಾ ಜವಾಬ್ಧಾರಿ ವಹಿಸಿಕೊಂಡು ಜೊತೆ ನಿಂತಿದ್ದು ವಿಶೇಷ. ಒಟ್ನಲ್ಲಿ ರಿಷಬ್ ಜ್ಯೂನಿಯರ್​ ಸ್ನೇಹಕ್ಕೆ ಈ ವೀಡಿಯೋ ಕೂಡ ಒಂದು ಸಾಕ್ಷಿ.

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more