
ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಡಿಸೆಂಬರ್ 11ರಂದು ದರ್ಶನ್ ಸರ್ಜರಿಗೆ ಒಳಗಾಗ್ತಾರೆ ಅಂತ ಹೇಳಿದ್ರು. ಆದ್ರೆ ಡಿಸೆಂಬರ್ 11ರಂದು ಕೂಡ ಸರ್ಜರಿ ನಡೆದಿಲ್ಲ.
ಹೈಕೋರ್ಟ್ ಎದುರು ಡಿಸೆಂಬರ್ 11ರಂದು ದರ್ಶನ್ ಸರ್ಜರಿ ಮಾಡಿಸಿಕೊಳ್ತಾರೆ ಅಂತ ವಕೀಲರು ಮಾಹಿತಿ ಕೊಟ್ಟಿದ್ರು. ಆದ್ರೆ ಆಸ್ಪತ್ರೆ ಮೂಲಗಳ ಪ್ರಕಾರ ಇನ್ನೂ ಸರ್ಜರಿ ನಡೆದಿಲ್ಲ. ಹಾಗಾದ್ರೆ ವೈದ್ಯರು ಯಾಕೆ ಸರ್ಜರಿ ಮಾಡಲಿಲ್ಲ..? ಈ ಬೆನ್ನು ನೋವಿನ ಎಪಿಸೋಡೇ ಒಂದು ನಾಟಕನಾ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ. ಯೆಸ್ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಡಿಸೆಂಬರ್ 11ರಂದು ದರ್ಶನ್ ಸರ್ಜರಿಗೆ ಒಳಗಾಗ್ತಾರೆ ಅಂತ ಹೇಳಿದ್ರು. ಆದ್ರೆ ಡಿಸೆಂಬರ್ 11ರಂದು ಕೂಡ ಸರ್ಜರಿ ನಡೆದಿಲ್ಲ. ದರ್ಶನ್ ಫಿಸಿಯೋಥೆರಪಿ ಮಾಡಿಸಿಕೊಂಡು , ಜೈಲ್ ಬೆಡ್ ಮೇಲೆ ಆರಾಮಾಗೇ ಮಲಗಿದ್ದಾನೆ.
ಅಸಲಿಗೆ ಹೈಕೋರ್ಟ್ ದರ್ಶನ್ಗೆ ಮಧ್ಯಂತರ ಜಾಮೀನು ನೀಡಿದ್ದೇ ಬೆನ್ನು ನೋವಿನ ಸರ್ಜರಿಗಾಗಿ. ಬೇಲ್ ಸಿಕ್ರೆ ನಾಳೆನೇ ಸರ್ಜರಿ ಅಂದಿದ್ದ ದರ್ಶನ್, ಬೇಲ್ ಪಡೆದು 6 ವಾರ ಮಾಡಿದ್ದು ಅಕ್ಷರಶಃ ಕಾಲಹರಣ. ದರ್ಶನ್ ರಿಲೀಸ್ ಆಗಿದ್ದು ಅಕ್ಟೋಬರ್ 30ಕ್ಕೆ ಆದ್ರೆ ಡಿಸೆಂಬರ್ 12ರ ವರೆಗೂ ದರ್ಶನ್ ಸರ್ಜರಿ ಮಾಡಿಸಿಕೊಂಡಿಲ್ಲ. ವೈದ್ಯರು ದರ್ಶನ್ ಬಿಪಿಯಲ್ಲಿ ವೇರಿಯೇಷನ್ ಇರೋದ್ರಿಂದ ಸರ್ಜರಿ ಮಾಡ್ತಿಲ್ಲ ಅನ್ನೋ ಉತ್ತರ ಕೊಟ್ಟಿದ್ದಾರೆ. ಆದ್ರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪಬ್ಲಿಕ್ ಪ್ರ್ಯಾಸಿಕ್ಯೂಟರ್ ಈ ಸರ್ಜರಿ ವಿಚಾರವೇ ಒಂದು ಬಿಗ್ ಡ್ರಾಮಾ ಅಂತ ಹೈಕೋರ್ಟ್ನಲ್ಲಿ ವಾದ ಮಾಡಿದ್ರು. ಎಂತೆಂಥಾ ಸರ್ಜರಿಗಳನ್ನ ತ್ವರಿತವಾಗಿ ಮಾಡ್ತಾರೆ.
ಆದ್ರೆ ಬೆನ್ನುನೋವಿಗೆ ಆಗಬೇಕಿರೋ ಚಿಕ್ಕ ಸರ್ಜರಿಗೆ ಬಿಪಿ ನೆಪ ಹೇಳಿ ವಿಳಂಬ ಮಾಡ್ತಿರೋದು ಪಕ್ಕಾ ಡ್ರಾಮಾ ಅಂತ ಆರೋಪ ಮಾಡಿದ್ರು. ಇನ್ನೂ ದರ್ಶನ್ ಮೆಡಿಕಲ್ ಬೇಲ್ನ ರದ್ದು ಮಾಡಿ ಅಂತ ಸುಪ್ರೀಂ ಕೋರ್ಟ್ನಲ್ಲೂ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ನಡುವೆ ಹೈಕೋರ್ಟ್ಗೆ ತಿಳಿಸಿದ ದಿನಾಂಕದಂದೂ ಸರ್ಜರಿ ಮಾಡಿಸಿಲ್ಲ. ಅಸಲಿಗೆ ಸರ್ಜರಿಯನ್ನ ವಿಳಂಬ ಮಾಡಿಕೊಂಡು , ಮಧ್ಯಂತರ ಬೇಲ್ ಅವಧಿ ಮುಗಿಯೋವರೆಗೂ ಕಾಲಹರಣ ಮಾಡಿ, ಅಷ್ಟೊತ್ತಿಗೆ ರೆಗ್ಯೂಲರ್ ಬೇಲ್ ಪಡದುಕೊಳ್ಳಬಹುದು ಅಂತ ದರ್ಶನ್ ಲೆಕ್ಕಾಚಾರವಾಗಿತ್ತು. ಇಲ್ಲಿವರೆಗೂ ಅವರ ಲೆಕ್ಕಂದತೆಯೇ ನಡೆದಿದೆ. ಆದ್ರೆ ರೆಗ್ಯೂಲರ್ ಬೇಲ್ ವಿಚಾರದಲ್ಲಿ ಹೈಕೋರ್ಟ್ ಏನ್ ತೀರ್ಮಾನ ಕೊಡುತ್ತೆ ಅನ್ನೋದ್ರ ಮೇಲೆ ದರ್ಶನ್ ಭವಿಷ್ಯ ನಿಂತುಕೊಂಡಿದೆ.