ದರ್ಶನ್​ ಬೆನ್ನುಬಿದ್ದಿರೋ ಬೆನ್ನುನೋವಿನ ಬೇತಾಳ, ದಶಕದ ಹಿಂದಿನ ಆ ಯಡವಟ್ಟು!

Oct 27, 2024, 3:56 PM IST

ಬಳ್ಳಾರಿ ಜೈಲಿನಲ್ಲರೋ ದರ್ಶನ್ ಬೆನ್ನು ನೋವಿನಿಂದ ಚಿತ್ರಹಿಂಸೆ ಪಡ್ತಾ ಇರೋ ಸಂಗತಿ ನಿಮಗೆ ಗೊತ್ತೇ ಇದೆ. ಈಗಾಗ್ಲೇ MRI ಸ್ಕ್ಯಾನಿಂಗ್ ಮಾಡಿ ಸರ್ಜರಿ ಮಾಡಿಸುವಂತೆ ಸೂಚನೆ ಕೊಟ್ಟಿದ್ದಾರೆ ವೈದ್ಯರು. ಹಾಗಾದ್ರೆ ಈ ಬೆನ್ನುನೋವು ದರ್ಶನ್ ಬೆನ್ನು ಬಿದ್ದಿದ್ಹೇಗೆ..? ಸಿನಿಮಾದಲ್ಲಿ ಅಷ್ಟೆಲ್ಲಾ ಸಾಹಸ ಮಾಡೋ ದರ್ಶನ್, ಇವತ್ತು ಎರಡೇ ಎರಡು ಬ್ಯಾಗ್ ಎತ್ತೋಕೆ ಪರದಾಡುವ ಸ್ಥಿತಿ ತಲುಪಿದ್ದು ಹೇಗೆ..? ಆ ಕುರಿತ ಎಕ್ಸ್​​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ದರ್ಶನ್​ಗೆ ದಿನೇ ದಿನೇ ಬೆನ್ನು ನೋವು ಹೆಚ್ಚಾಗ್ತಾನೇ ಇದೆ. ಬಳ್ಳಾರಿಯ ಜೈಲಿನ ಒಂಟಿ ಕೋಣೆಯಲ್ಲಿ ದರ್ಶನ್ ರಾತ್ರಿಯಿಡಿ ನಿದ್ದೆಯಿಲ್ಲದೇ ಚಿತ್ರಹಿಂಸೆ ಪಡ್ತಾ ಇದ್ದಾರೆ. ಈಗಾಗ್ಲೈ ವೈದ್ಯರ ಸೂಚನೆ ಮೇರೆಗೆ ದರ್ಶನ್​ಗೆ ಮೆಡಿಕಲ್ ಕಾಟ್, ಬೆಡ್, ದಿಂಬು ಕೊಡಲಾಗಿದೆ. ಆದ್ರೂ ದರ್ಶನ್​ಗೆ ನೆಮ್ಮದಿಯಾಗಿ ನಿದ್ದೆ ಮಾಡಲಾಗ್ತಿಲ್ಲ..

ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ ಅಂತ ವೈದ್ಯರು ಸೂಚನೆ ನೀಡಿದ್ದಾರೆ. ಕೋರ್ಟ್​​ನಲ್ಲಿ ಅನುಮತಿ ಪಡೆದು ಬೆಂಗಳೂರಿನಲ್ಲಿ ಸರ್ಜರಿ ಮಾಡಿಸಿಕೊಳ್ಳೋ ಪ್ಲ್ಯಾನ್​ನಲ್ಲಿ ದರ್ಶನ್ ಇದ್ದಾರೆ. ಆದ್ರೆ ಇದಕ್ಕೆ ಕೋರ್ಟ್ ಒಪ್ಪಿಗೆ ಕೊಡುತ್ತಾ..? ದರ್ಶನ್ ಬೆನ್ನು ನೋವಿನ ಚಿತ್ರಹಿಂಸೆಗೆ ಮುಕ್ತಿ ಸಿಗುತ್ತಾ ಕಾದುನೋಡಬೇಕು.