Sushma Hegde | Published: Jan 30, 2025, 4:41 PM IST
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಎ-1 ಆರೋಪಿಯಾಗಿ ಜೈಲು ಸೇರಿದ್ದ ಪವಿತ್ರಾ ಗೌಡ ಬೇಲ್ ಪಡೆದು ಆಚೆ ಬಂದಿದ್ದಾಳೆ. ತನ್ನ ರೆಡ್ ಕಾರ್ಪೆಟ್ ಸ್ಟುಡಿಯೋ ಬೊಟಿಕ್ನೂ ಮರುಪ್ರಾರಂಭ ಮಾಡಿದ್ದಾಳೆ. ಈ ನಡುವೆ ಪವಿತ್ರಾ ತನ್ನ ವಿರುದ್ದ ಕುತಂತ್ರ ಮಾಡುವವರ ವಿರುದ್ದ ಕುಟುಕಿದ್ದಾಳೆ. ಪವಿತ್ರಾ ಭರ್ತಿ 6 ತಿಂಗಳು ಪರಪ್ಪನ ಅಗ್ರಹಾರದಲ್ಲಿ ಮಹಿಳಾ ಬ್ಯಾರಕ್ನಲ್ಲಿ ಕಣ್ಣೀರು ಸುರಿಸಿದ್ದಳು. ಈ ಕೇಸ್ನಲ್ಲಿ ದರ್ಶನ್ ಮಾಡಿದ ಕುಕೃತ್ಯಕ್ಕೆ ಪವಿತ್ರಾಳೇ ಕಾರಣ ಅಂತ ಎಲ್ಲರೂ ಈಕೆಗೆ ಶಾಪ ಹಾಕ್ತಾ ಇದ್ರು. ಮೈಮೇಲೆ ಬಂದ ಕೊಲೆ ಆರೋಪ, ಜನರ ನಿಂದನೆಗಳ ಶರಪಂಜರದಲ್ಲಿ ಸಿಲುಕಿ ಪವಿತ್ರಾ ನಲುಗಿ ಹೋಗಿದ್ದಳು.