ಬಯಸಿದ್ದು ಎರಡು, ಪಡೆದಿದ್ದು ಒಂದು: ಏನಾಯ್ತು ಆ ದಿನ..? ನಟಿ ಭಾವನಾ ಬಿಚ್ಚಿಟ್ಟ ಕರಾಳ ಕಥೆ!

ಬಯಸಿದ್ದು ಎರಡು, ಪಡೆದಿದ್ದು ಒಂದು: ಏನಾಯ್ತು ಆ ದಿನ..? ನಟಿ ಭಾವನಾ ಬಿಚ್ಚಿಟ್ಟ ಕರಾಳ ಕಥೆ!

Published : Sep 09, 2025, 11:57 AM IST
ಐವಿಎಫ್ ಮೂಲಕ ಅವಳಿ ಮಕ್ಕಳನ್ನು ಪಡೆಯಲು ಸಜ್ಜಾಗಿದ್ದ ಭಾವನಾ ರಾಮಣ್ಣ ಅವರಿಗೆ ಒಂದು ಮಗು ಮಡಿಲು ಸೇರಿದರೆ, ಇನ್ನೊಂದು ಮಗು ತೀರಿಹೋಗಿದೆ. ಸೀಮಂತದ ನಂತರ ಹಠಾತ್ ರಕ್ತಸ್ರಾವದಿಂದಾಗಿ ಆಸ್ಪತ್ರೆಗೆ ದಾಖಲಾದ ಭಾವನಾ ಅವರಿಗೆ ಒಂದು ಮಗುವನ್ನು ಕಳೆದುಕೊಳ್ಳುವ ನೋವುಂಟಾಗಿದೆ.

ಸ್ಯಾಂಡಲ್​ವುಡ್ ನಟಿ ಭಾವನಾಗೆ ತಾಯ್ತನ ಒಂದು ಕಡೆ ಸಂತಸವನ್ನ ತಂದ್ರೆ, ಮತ್ತೊಂದು ಕಡೆ ಭರಿಸಲಾಗದ ನೋವನ್ನ ತಂದಿದೆ. ಅವಳಿ ಮಕ್ಕಳಲ್ಲಿ ಒಂದು ಮಗು ಮಡಿಲು ಸೇರಿದ್ರೆ, ಇನ್ನೊಂದು ಮಗು ತೀರಿಹೋಗಿದ್ದು, ಖುಷಿ-ದುಃಖ ಒಟ್ಟೊಟ್ಟಿಗೆ ಬಂದಿವೆ. ಅಷ್ಟಕ್ಕೂ ಆ ದಿನ ಏನಾಯ್ತು..? ಭಾವನಾ ಹೇಳಿದ ಆ ಕರಾಳ ಕಥೆ ಇಲ್ಲಿದೆ ನೋಡಿ.

ಸ್ಯಾಂಡಲ್​ವುಡ್ ನಟಿ ಭಾವನಾ ರಾಮಣ್ಣ IVF ಮೂಲಕ ಅವಳಿ ಮಕ್ಕಳನ್ನ ಪಡೆಯೋದಕ್ಕೆ ಸಜ್ಜಾಗಿದ್ದ ವಿಷ್ಯ ಭಾರಿ ಸದ್ದು ಮಾಡಿತ್ತು. ಮದುವೆಯೇ ಆಗದ ಭಾವನಾ ಮಕ್ಕಳನ್ನ ಪಡೆಯೋದಕ್ಕೆ ಹೊರಟಿದ್ದರ ಬಗ್ಗೆ ಸಮಾಜದಲ್ಲಿ ಮೀಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಕೆಲವರು ಇದೇನು ಸಂಸ್ಕ್ರತಿ ಅಂತ ಮೂಗು ಮುರಿದರೇ ಮತ್ತೆ ಕೆಲವರು ಭಾವನಾದು ಬೋಲ್ಡ್ ನಡೆ ಅಂತ ಅಭಿನಂದಿಸಿದ್ರು. ಈ ವಾದ-ವಿವಾದಗಳ ನಡುವೆಯೇ ಭಾವನಾ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ರು. ಅವಳಿ ಮಕ್ಕಳನ್ನ ಸ್ವಾಗತಿಸೋದಕ್ಕೆ ಸಜ್ಜಾಗಿ ನಿಂತಿದ್ರು. ಆದ್ರೆ ವಿಧಿ ಭಾವನಾ ಬದುಕಲ್ಲಿ ವಿಚಿತ್ರ ತಿರುವನ್ನ ತಂದೊಡ್ಡಿದೆ. ಅವಳಿ ಮಕ್ಕಳ ಪೈಕಿ ಒಂದು ಮಗು ತೀರಿ ಹೋಗಿದ್ದು, ಇನ್ನೊಂದು ಭಾವನಾ ಮಡಿಲು ಸೇರಿದೆ.

ಸೀಮಂತ ಮುಗಿದ ಬಳಿಕ ಭಾವನಾಗೆ ಹೆಚ್ಚು ಹೊತ್ತು ಕೂರಲಿಕ್ಕೆ ಸಾಧ್ಯವಾಗಲಿಲ್ಲವಂತೆ. ಹಠಾತ್ ರಕ್ತಸ್ರಾವ ಶುರುವಾಗಿದ್ದರಿಂದ ಹತ್ತಿರದ ಆಸ್ಪತ್ರೆಗೆ ಹೋದ್ರು. ಅಲ್ಲಿ ವೈದ್ಯರು ನೀವು ಟೈಮ್ ಬಾಂಬ್ ಕುಳಿತಿದ್ದೀರಿ ಅಂದಿದ್ರಂತೆ. ಒಂದು ಮಗು ಆರೋಗ್ಯವಾಗಿತ್ತು. ಆದರೆ ಆ ಮಗುವಿನ ತೂಕ ಕಡಿಮೆ ಇದೆ ಅಂತ ಗೊತ್ತಾಗಿ ದೇವರ ಬಳಿ ಪ್ರಾರ್ಥನೆ ಮಾಡಿದ್ವಿ. ಆದರೆ ಆರೋಗ್ಯ ಸುಧಾರಿಸದೆ ಆಪರೇಶನ್‌ ಮಾಡಬೇಕಾಯ್ತು. ಮಾನಿಟರ್‌ನಲ್ಲಿ ಒಂದು ಮಗುವಿನ ಹಾರ್ಟ್‌ಬೀಟ್‌ ಕುಸಿಯುತ್ತಿರೋದನ್ನ ನೋಡಿದೆ, ಆಗ ಆದ ಆಘಾತವನ್ನು ಹೇಗೆ ಹೇಳಲಿ? ಅಂತ ಭಾವನಾ ಭಾವುಕರಾಗಿದ್ದಾರೆ. ಈ ನೋವಿನ ನಡುವೆಯೂ ಮಡಿಲು ಸೇರಿದ ಹೆಣ್ಣುಮಗುವನ್ನ ಪ್ರೀತಿಯಿಂದ ಆರೈಕೆ ಮಾಡ್ತಾ ಇದ್ದಾರೆ. ತನ್ನ ಅಜ್ಜಿ ರುಕ್ಮಿಣಿಯವರ ಹೆಸರನ್ನೇ ಮಗಳಿಗೆ ಇಡೋದಕ್ಕೆ ಸಜ್ಜಾಗಿದ್ದಾರೆ. ಒಟ್ನಲ್ಲಿ ಭಾವನಾ ಬದುಕಲ್ಲಿ ಒಂಥರಾ ಸಿಹಿ-ಕಹಿ ಅನುಭವಗಳು ಒಟ್ಟಿಗೆ ಬಂದಿವೆ. ಇದನ್ನ ಎದುರಿಸಿ ದಿಟ್ಟವಾಗಿ ನಡೀತಿದ್ದಾರೆ ಚಂದ್ರಮುಖಿ ಭಾವನಾ...!

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more