ಬನಿಯನ್ ಒಳಗೆ ಕೆಮೆರಾ, ಡಾಂಗಲ್ ಒಯ್ದಿದ್ದ ಪಿಡಿಒ ಅಭ್ಯರ್ಥಿ! ಮೆಟಲ್ ಡಿಟೆಕ್ಟರ್‌ನಲ್ಲೂ ಪತ್ತೆಯಾಗಲಿಲ್ಲ ಅಕ್ರಮ

Published : Dec 10, 2024, 07:35 AM ISTUpdated : Dec 10, 2024, 07:36 AM IST
ಬನಿಯನ್ ಒಳಗೆ ಕೆಮೆರಾ, ಡಾಂಗಲ್ ಒಯ್ದಿದ್ದ ಪಿಡಿಒ ಅಭ್ಯರ್ಥಿ! ಮೆಟಲ್ ಡಿಟೆಕ್ಟರ್‌ನಲ್ಲೂ ಪತ್ತೆಯಾಗಲಿಲ್ಲ ಅಕ್ರಮ

ಸಾರಾಂಶ

ತುಮಕೂರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಉತ್ತರ ಬರೆಯಲು ಯತ್ನಿಸಿದ ಅಭ್ಯರ್ಥಿಯನ್ನು ಬಂಧಿಸಲಾಗಿದೆ. ಬನಿಯನ್ ಒಳಗೆ ಕ್ಯಾಮೆರಾ, ಡಾಂಗಲ್ ಇಟ್ಟುಕೊಂಡು ಪರೀಕ್ಷೆಗೆ ಹಾಜರಾಗಿದ್ದ ಆರೋಪಿ ಮೆಟಲ್ ಡಿಟೆಕ್ಟರ್‌ನಲ್ಲೂ ಸಿಕ್ಕಿಬಿದ್ದಿಲ್ಲ.

ಬೆಂಗಳೂರು: ತುಮಕೂರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ನೇಮಕಾತಿ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ಉತ್ತರ ಬರೆಯಲು ಯತ್ನಿಸುತ್ತಿದ್ದ ಆರೋನು ಧರ್ಮೇ೦ದ್ರ, ಕ್ಯಾಮೆರಾ ಇರುವ ಎಲೆಕ್ಟ್ರಾನಿಕ್ ಸಾಧನ, ವೈಫೈ ಸಹಿತ ಇಂಟರ್ನೆಟ್ ಡಾಂಗಲ್ ಕೇಂದ್ರ ಪ್ರವೇಶಿಸಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ತುಡುಕೂರಿನ ವಿದ್ಯೋದಯ ಕಾನೂನು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆರೋಪಿ ಧರ್ಮೇಂದ್ರ ಆಗಮಿಸಿದ್ದ. ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ರಿನಿಂದ ಸಿಬ್ಬಂದಿ ಮಾಡಿದ್ದಾರೆ.  ಆದರೆ, ಆ ತಪಾಸಣೆಯಲ್ಲೂ ಸಿಕ್ಕಿ ಬೀಳದ ಆತ ತನ್ನ ಕೊಠಡಿಯನ್ನು ಪ್ರವೇಶಿಸಿದ್ದಾನೆ. 

ಪರೀಕ್ಷೆ ಬೆಳಗ್ಗೆ 10 ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಇದರಿಂದ ಅನುಮಾನಗೊಂಡ ಕೊಠಡಿ ಸಂವೀಕ್ಷಕರು ಅಭ್ಯರ್ಥಿ ಬಳಿಗೆ ಹೋಗಿ ಬಟ್ಟೆಯನ್ನು ಪರಿಶೀಲಿಸಿದ್ದಾರೆ. ಆರೋಪಿತ ಅಭ್ಯರ್ಥಿ ಧರ್ಮೇಂದ್ರ, ಧರಿಸಿದ್ದ ಬನಿಯನ್ ಒಳಗೆ ಜೇಬಿದ್ದು, ಅದರೊಳಗೆ ಕ್ಯಾಮೆರಾ ಮತ್ತು ಬ್ಲೂಟೂತ್ ಇರುವ ಎಲೆಕ್ಟ್ರಾನಿಕ್ ಸಾಧನ, ಮಾಸ್ಟರ್‌ ಕಾರ್ಡ್ ಎಂದು ಬರೆದಿರುವ ಮತ್ತೊಂದು ಬರ್‌ಟೆಲ್ ಕಂಪನಿಯ ಡಾಂಗಲ್ ಒಯ್ದಿದ್ದ, ಕೂಡಲೇ ಎಲೆಕ್ಟ್ರಾನಿಕ್ ಸಾಧನ, ಇಂಟರ್ನೆಟ್ ಸಂಪರ್ಕ ಇರುವ 

ಸಂವೀಕ್ಷಕರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲುಮುಂದಾಗಿದ್ದಾರೆ, ಆದರೆ, ಆರೋಪಿಯು ತಳ್ಳಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸಂವಿಕ್ಷಕರು ಕಾಲೇಜಿನ ಮುಖ್ಯ ದ್ವಾರ ಬಂದ್ ಮಾಡುವಂತೆ ಕೂಗಿದ್ದಾರೆ. ಜಾಗೃತರಾದ ಪೊಲೀಸರು ಹಾಗೂ ಸಿಬ್ಬಂದಿ, ತಪ್ಪಿಸಿಕೊಳ್ಳುತ್ತಿದ್ದ ಆತನನ್ನು ಹಿಡಿದಿದ್ದಾರೆ. ಪರಿಶೀಲಿಸಿದಾಗ ಅವರಲ್ಲೂ ಒಂದು ಮೊಬೈಲ್ ಫೋನ್, ಕಪ್ಪು ಬಣ್ಣದ ಒಂದು ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಯಾಗಿದೆ. ಮಂಡ್ಯ ಮೂಲದ ಆರೋಪಿಯ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾಯ್ದೆ ಕಲಂ  3 18 (4)  ವಂಚನೆ, ಕರ್ನಾಟಕ ಶಿಕ್ಷಣ ಕಾಯ್ದೆ 1983 ತಿದ್ದುಪಡಿ ಕಲಂ 24ನ  ಪ್ರಶ್ನೆಪತ್ರಿಕೆ ಸೋರಿಕೆ ನಿಯಂತ್ರಣ ಸೆಕ್ಷನ್ ಗಳ ಅಡಿ ಕೇಸ್ ದಾಖಲಿಸಲಾಗಿದೆ. 

ಅಕ್ರಮ ತಡೆಯಲು ಸೂಕ್ತ ಕ್ರಮ- ಕೆಪಿಎಸ್‌ ಕಾರ್ಯದರ್ಶಿ: ತಪಾಸಣೆ ಇದ್ದರೂ ಬ್ಲೂಟೂತ್ ಹೋಗಲಾಯಿತು ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿದೆ. ಆದರೆ, ಈ ರೀತಿಯ ಆಕ್ರಮಗಳು ಆಗದಂತೆ ಏನೆಲ್ಲಾ ಕ್ರಮಗಳು ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ಹಿಂದೆ ನಡೆದಿರುವ ಅಕ್ರಮಗಳಲ್ಲಿ ಆರೋಪಿತ ಅಭ್ಯರ್ಥಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಈಗ ಸಿಕ್ಕ ಬಿದ್ದಿರುವ ಆರೋಪಿಯ ವಿರುದ್ಧ ಸೂಕ್ತ ಕ್ರಮವನ್ನು ಆಯೋಗ ತೆಗೆದುಕೊಳ್ಳುತ್ತದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ರಮಣದೀಪ್ ಚೌಧರಿ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿಯಿದ್ದ 150 ಪಿಡಿಒ ಹುದ್ದೆಗಳಿಗೆ ಭಾನುವಾರ ರಾಜ್ಯದ ಒಟ್ಟು 1035 ಪರೀಕ್ಷಾ ಕೇಂದ್ರದಲ್ಲಿ ನೇಮಕಾತಿ ಪರಿಕ್ಷೆ ನಡೆಸಲಾಗಿತ್ತು. 

ಇದನ್ನೂ ಓದಿ: ಪಿಡಿಒ ನೇಮಕಾತಿ ಪರೀಕ್ಷೆ: ಬ್ಲೂಟೂತ್ ಬಳಸಿ ಎಕ್ಸಾಂ ಬರೆಯುತ್ತಿದ್ದ ಅಭ್ಯರ್ಥಿ ಪೊಲೀಸರ ವಶಕ್ಕೆ

PREV
Read more Articles on
click me!

Recommended Stories

ಪರಮೇಶ್ವರ್ ಮುಂದಿನ ಸಿಎಂಗೆ ಆಗ್ರಹಿಸಿ ರಕ್ತದಲ್ಲಿ ನೂರಾರು ಜನರಿಂದ ಸಹಿ ಸಂಗ್ರಹ
ಮನ್‌ ಕೀ ಬಾತ್: ಕರ್ನಾಟಕದ ಜೇನು ಕೃಷಿಗೆ ಪ್ರಧಾನಿ ಮೋದಿ ಶ್ಲಾಘನೆ, ಪುತ್ತೂರು ಮತ್ತು ತುಮಕೂರು ಉಲ್ಲೇಖ