
ಮೈಸೂರು : ನಾನು ನಾರಾಯಣ ಮೂರ್ತಿ ಇಬ್ಬರೂ ಸರಳವಾಗಿ ವಿವಾಹವಾದೆವು ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಹೇಳಿದ್ದಾರೆ.
800 ರುಪಾಯಿ ಮಾತ್ರವೇ ಖರ್ಚು ಮಾಡಿ ವಿವಾಹವಾಗಿದ್ದಾಗಿ ಹೇಳಿದರು. ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ನಾವು ಅನಾವಶ್ಯಕವಾಗಿ ವೆಚ್ಚ ಮಾಡದೆ ಸರಳ ವಿವಾಹವಾಗಲು ನಿರ್ಧರಿಸಿದ್ದೆವು.
ಆತ್ಮೀಯ ಬಂಧುಗಳ ಜೊತೆಗೆ 1978ರ ಫೆ.10 ರಂದು ಸರಳವಾಗಿ ವಿವಾಹವಾದೆವು. ಈ ಮದುವೆಗೆ 800 ರು. ವ್ಯಯ ಮಾಡಿದ್ದೆವು ಎಂದರು.
ಇಬ್ಬರು ತಲಾ 400 ರು.ಗಳನ್ನು ಹಾಕಿ ವಿವಾಹದ ಖರ್ಚು ನೋಡಿಕೊಂಡೆವು. ಇಳಕಲ್ ಸೀರೆ, ಕರಿಮಣಿ ಸರ ಮಾತ್ರವೇ ನಮ್ಮ ಮದುವೆಗೆ ಕೊಂಡಿದ್ದೆವು . ಅಲ್ಲದೇ ಸರಳ ಮದುವೆಯಿಂದ ಅನಾವಶ್ಯಕ ಖರ್ಚು ವೆಚ್ಚ ಉಳಿಸುವುದು ಅಗತ್ಯವೆಂದು ಸುಧಾಮೂರ್ತಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ