
ನವದೆಹಲಿ(ಏ.06): ಪಂಚರಾಜ್ಯ ಚುನಾವಣೆ ಕುತೂಹಲದ ಘಟ್ಟತಲುಪಿದ್ದು ಮಂಗಳವಾರದಂದು ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದೇ ಹಂತದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನೆರವೇರಲಿದೆ. ಇನ್ನು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದ ಚುನಾವಣೆ ನೆರವೇರಲಿದೆ. ಈ ಮೂಲಕ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಳ್ಳಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ತಮಿಳುನಾಡು:
234: ಒಟ್ಟು ಸ್ಥಾನ
3998: ಕಣದಲ್ಲಿರುವ ಅಭ್ಯರ್ಥಿಗಳು
6.28 ಕೋಟಿ: ಮತದಾರರ ಸಂಖ್ಯೆ
ಹಣಾಹಣಿ: ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟ/ ಡಿಎಂಕೆ- ಕಾಂಗ್ರೆಸ್ ಮೈತ್ರಿಕೂಟ.
ಏನೇನು ವಶ: ಪ್ರಚಾರದ ವೇಳೆ ವಿವಿಧ ಪಕ್ಷಗಳಿಗೆ ಸೇರಿದ 225 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ 176.11 ಕೋಟಿ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳ:
140: ಒಟ್ಟು ಸ್ಥಾನ
957: ಕಣದಲ್ಲಿರುವ ಅಭ್ಯರ್ಥಿಗಳು
2.74 ಕೋಟಿ: ಮತದಾರರ ಸಂಖ್ಯೆ
ಹಣಾಹಣಿ: ಸಿಪಿಎಂ ನೇತೃತ್ವದ ಎಲ್ಡಿಎಫ್/ ಕಾಂಗ್ರೆಸ್ ನೇತೃತ್ವದ ಯುಡಿಎಫ್/ ಬಿಜೆಪಿ
ಪುದುಚೇರಿ
30: ಒಟ್ಟು ಸ್ಥಾನ
324: ಕಣದಲ್ಲಿರುವ ಅಭ್ಯರ್ಥಿಗಳು
10.04 ಲಕ್ಷ: ಅರ್ಹ ಮತದಾರರು
ಹಣಾಹಣಿ: ಕಾಂಗ್ರೆಸ್ ಮತ್ತು ಡಿಎಂಕ / ಬಿಜೆಪಿ ಮತ್ತು ಎಐಎಡಿಎಂಕೆ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಪಶ್ಚಿಮ ಬಂಗಾಳ 3ನೇ ಹಂತ:
31: ಒಟ್ಟು ಕ್ಷೇತ್ರ
205: ಕಣದಲ್ಲಿರುವ ಅಭ್ಯರ್ಥಿಗಳು
78 ಲಕ್ಷ: ಅರ್ಹ ಮತದಾರರ ಸಂಖ್ಯೆ
ಹಣಾಹಣಿ: ಟಿಎಂಸಿ/ ಬಿಜೆಪಿ/ ಕಾಂಗ್ರೆಸ್ ಮತ್ತು ಎಡಪಕ್ಷ
ಅಸ್ಸಾಂ 3ನೇ ಹಂತ:
40: ಒಟ್ಟು ಸ್ಥಾನ
337: ಕಣದಲ್ಲಿರುವ ಅಭ್ಯರ್ಥಿಗಳು
79.19 ಲಕ್ಷ: ಮತದಾರರ ಸಂಖ್ಯೆ
ಹಣಾಹಣಿ: ಬಿಜೆಪಿ/ ಕಾಂಗ್ರೆಸ್/ ಎಐಯುಡಿಎಫ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ