ಇಂದು ಪಂಚರಾಜ್ಯದಲ್ಲೂ ಚುನಾವಣೆ| ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಏಕಹಂತ| ಪ. ಬಂಗಾಳ, ಅಸ್ಸಾಂನಲ್ಲಿ 3ನೇ ಹಂತದ ಮತದಾನ
ನವದೆಹಲಿ(ಏ.06): ಪಂಚರಾಜ್ಯ ಚುನಾವಣೆ ಕುತೂಹಲದ ಘಟ್ಟತಲುಪಿದ್ದು ಮಂಗಳವಾರದಂದು ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದೇ ಹಂತದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನೆರವೇರಲಿದೆ. ಇನ್ನು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದ ಚುನಾವಣೆ ನೆರವೇರಲಿದೆ. ಈ ಮೂಲಕ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಳ್ಳಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ತಮಿಳುನಾಡು:
234: ಒಟ್ಟು ಸ್ಥಾನ
3998: ಕಣದಲ್ಲಿರುವ ಅಭ್ಯರ್ಥಿಗಳು
6.28 ಕೋಟಿ: ಮತದಾರರ ಸಂಖ್ಯೆ
ಹಣಾಹಣಿ: ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟ/ ಡಿಎಂಕೆ- ಕಾಂಗ್ರೆಸ್ ಮೈತ್ರಿಕೂಟ.
ಏನೇನು ವಶ: ಪ್ರಚಾರದ ವೇಳೆ ವಿವಿಧ ಪಕ್ಷಗಳಿಗೆ ಸೇರಿದ 225 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ 176.11 ಕೋಟಿ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳ:
140: ಒಟ್ಟು ಸ್ಥಾನ
957: ಕಣದಲ್ಲಿರುವ ಅಭ್ಯರ್ಥಿಗಳು
2.74 ಕೋಟಿ: ಮತದಾರರ ಸಂಖ್ಯೆ
ಹಣಾಹಣಿ: ಸಿಪಿಎಂ ನೇತೃತ್ವದ ಎಲ್ಡಿಎಫ್/ ಕಾಂಗ್ರೆಸ್ ನೇತೃತ್ವದ ಯುಡಿಎಫ್/ ಬಿಜೆಪಿ
ಪುದುಚೇರಿ
30: ಒಟ್ಟು ಸ್ಥಾನ
324: ಕಣದಲ್ಲಿರುವ ಅಭ್ಯರ್ಥಿಗಳು
10.04 ಲಕ್ಷ: ಅರ್ಹ ಮತದಾರರು
ಹಣಾಹಣಿ: ಕಾಂಗ್ರೆಸ್ ಮತ್ತು ಡಿಎಂಕ / ಬಿಜೆಪಿ ಮತ್ತು ಎಐಎಡಿಎಂಕೆ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಪಶ್ಚಿಮ ಬಂಗಾಳ 3ನೇ ಹಂತ:
31: ಒಟ್ಟು ಕ್ಷೇತ್ರ
205: ಕಣದಲ್ಲಿರುವ ಅಭ್ಯರ್ಥಿಗಳು
78 ಲಕ್ಷ: ಅರ್ಹ ಮತದಾರರ ಸಂಖ್ಯೆ
ಹಣಾಹಣಿ: ಟಿಎಂಸಿ/ ಬಿಜೆಪಿ/ ಕಾಂಗ್ರೆಸ್ ಮತ್ತು ಎಡಪಕ್ಷ
ಅಸ್ಸಾಂ 3ನೇ ಹಂತ:
40: ಒಟ್ಟು ಸ್ಥಾನ
337: ಕಣದಲ್ಲಿರುವ ಅಭ್ಯರ್ಥಿಗಳು
79.19 ಲಕ್ಷ: ಮತದಾರರ ಸಂಖ್ಯೆ
ಹಣಾಹಣಿ: ಬಿಜೆಪಿ/ ಕಾಂಗ್ರೆಸ್/ ಎಐಯುಡಿಎಫ್