
ಮಂಗಳೂರು (ಅ.20): ಹೊರವಲಯದ ನೀರುಮಾರ್ಗ ಮಾಣೂರು ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರತಿನಿತ್ಯ ಬಂದು ನರ್ತಿಸುವ ನವಿಲಿಗೆ ಇಲ್ಲಿನ ಅರ್ಚಕರು ಈಗ ಗೆಜ್ಜೆ ಕಟ್ಟಿದ್ದಾರೆ. ನವಿಲು ಖುಷಿಯಿಂದ ನರ್ತನ ಮಾಡುತ್ತಿದೆ. ನವಿಲಿನ ಗೆಜ್ಜೆ ನರ್ತನದ ವಿಡಿಯೋ ಈಗ ವೈರಲ್ ಆಗಿದೆ. ಹಿಂದೆ ಇದೇ ನವಿಲು ಅರ್ಚಕರ ಮನೆಗೆ ಬಂದು ನಿತ್ಯವೂ ಕುಣಿಯುವ ವಿಡಿಯೋ ವೈರಲ್ ಆಗಿದೆ.
ಗೆಜ್ಜೆ ಕಟ್ಟಿಕೊಂಡು ಗಲ್ ಗಲ್ ಕುಣಿಯುವ ನಾಟ್ಯ ಮಯೂರಿ ನೃತ್ಯ ನೋಡಲೆಂದೇ ದೇವಳದ ಭಕ್ತರು ಕಾದು ಕುಳಿತಿರುತ್ತಾರೆ. ಮಯೂರು ನರ್ತಿಸುತ್ತಿದ್ದರೆ ಗೆಜ್ಜೆ ಸದ್ದಿಗೆ ಭಕ್ತರ ಮೈಮರೆಯುವಂತೆ ಮಾಡುತ್ತೆ. ದೇವಸ್ಥಾನಕ್ಕೆ ಬರುವ ಭಕ್ತರು ನಾಟ್ಯ ಮಯೂರಿ ನೃತ್ಯ ನೋಡಲೆಂದೇ ಬರುತ್ತಾರೆ. ದೇವಸ್ಥಾನದೊಳಗೆ ಬಂದು ನೃತ್ಯ ಮಾಡುವ ಮಯೂರಿ, ಸಂಜೆಯಾಗ್ತಿದ್ದಂತೆ ಅರ್ಚಕರ ಮನೆಗೆ ಹೋಗಿ ಅಲ್ಲಿಯೂ ನೃತ್ಯ ಮಾಡುತ್ತೆ. ಸದ್ಯ ಈ ನಟ್ಯ ಮಯೂರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ಮನಸೋತಿದ್ದಾರೆ.
ಮೊಟ್ಟೆ ಕಳ್ಳಿಯರ ಮೇಲೆ ನವಿಲಿನ ರೋಷಾವೇಷ: ಈ ಜನ್ಮದಲ್ಲಿ ಅವ್ರು ಮೊಟ್ಟೆ ತಿನ್ನಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ