
ಶಿವಮೊಗ್ಗ (ಫೆ.27): ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ತಮ್ಮ 79ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿರುವ ಬಿಎಸ್ವೈ ಅನೇಕ ರೀತಿಯ ಏರಿಳಿತಗಳನ್ನು ಕಂಡಿದ್ದಾರೆ. ಕರ್ನಾಟಕದಲ್ಲಿ ರಾಜಾಹುಲಿ ಎನಿಸಿಕೊಳ್ಳುವ ಈ ನಾಯಕನ ಕೆಲವು ಖಾಸಗಿ ಬದುಕಿನ ಕುತೂಹಲದ ಸಂಗತಿಗಳು ಇಲ್ಲಿವೆ.
ರಾಜಕಾರಣಕ್ಕೂ ಮೊದಲು ರೈಸ್ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ಬಿಎಸ್ವೈ ಬಳಿಕ ರೈತ ನಾಯಕನಾಗಿ ಬೆಳೆದರು. ಮಂಡ್ಯದಲ್ಲಿ ಹುಟ್ಟಿ ಶಿಕಾರಿಪುರದಲ್ಲಿ ಜೀವನ ಕಟ್ಟಿಕೊಂಡು ರಾಜ್ಯದ ರಾಜಕೀಯದ ಧೀಮಂತ ನಾಯಕನಾಗಿ ಬೆಳೆದರು.
ಮುಖ್ಯಮಂತ್ರಿ ಯಡಿಯೂರಪ್ಪಗೆ 79ರ ಹುಟ್ಟುಹಬ್ಬ : ಗಣ್ಯರಿಂದ ಸಿಎಂಗೆ ಶುಭ ಹಾರೈಕೆ ..
ಬೆಳ್ಳಿ ಮೋಡ ಇಷ್ಟದ ಸಿನಿಮಾ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬೆಳ್ಳಿಮೋಡ ಅತ್ಯಂತ ಮೆಚ್ಚಿನ ಸಿನಿಮಾ . ಸಿನಿಮಾ ನೋಡುವ ಹವ್ಯಾಸ ಇರಿಸಿಕೊಮಡಿದ್ದ ಅಚರಯಯ ಬಿಡುವಿದ್ದಾಗ ಪತ್ನಿ ಮೈತ್ರಾದೇವಿ ಅವರ ಜೊತೆ ಸದ್ದಿಲ್ಲದೇ ಚಿತ್ರಮಂದಿರಕ್ಕೆ ಹೊರಟುಬಿಡುತ್ತಿದ್ದರು.
ಡೈಲಾಗ್ ಉರುಹೊಡೆಯದೇ ನಾಟಕದಲ್ಲಿ ಪಾತ್ರ ಮಾಡಿದ್ದರು. ಕಾಲೇಜಿನಲ್ಲಿ ಓದುವಾಗ ಸಖತ್ ಆಕ್ಟಿಂಗ್ ಮಾಡುತ್ತಿದ್ದರು.
ದೇಶದ ಇತಿಹಾಸದಲ್ಲೇ ಒಂದು ರಾಜ್ಯದ ಮುಖ್ಯಮಂತ್ರಿ ಒಂದು ವಾರದಲ್ಲಿ ಎರಡು ಬಾರು ವಿಶ್ವಾಸ ಮತ ಗೆದ್ದ ಉದಾಹರಣೆಗೆ ಬಿಎಸ್ವೈ ಮಾತ್ರ.
ಚಿಕ್ಕಣ್ಣ ಜೋಯಿಸ್ ಎಂಬುವವರು ಬಿಎಸ್ವೈ ಕಾರಿಗೆ ಕೆಲ ಕಾಲ ಸಾರಥಿಯಾಗಿದ್ದರು. ಆಗ ಎಲ್ಲಿಗೆ ಹೊರಟರೂ 80-90 ಕಿಮೀ ವೇಗದಕ್ಕೇ ಹೋಗಬೇಕಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ