ಬೆಳಗಾವಿಯಲ್ಲಿ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸಾವು; ದುರಂತ ತಪ್ಪಿಸಲು ಈ ನಿಯಮ ಪಾಲಿಸಿ!

Published : May 11, 2025, 06:07 PM ISTUpdated : May 11, 2025, 06:13 PM IST
 ಬೆಳಗಾವಿಯಲ್ಲಿ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸಾವು; ದುರಂತ ತಪ್ಪಿಸಲು ಈ ನಿಯಮ ಪಾಲಿಸಿ!

ಸಾರಾಂಶ

ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶನಿವಾರ (ಮೇ 11, 2025) ದುರಂತ ಸಂಭವಿಸಿದೆ. ಜಮೀನಿನಲ್ಲಿ ಮೇವು ತೆಗೆದುಕೊಂಡು ವಾಪಸ್ ಬರುವಾಗ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗವ್ವ ಜೀರಗಿವಾಡ ಮತ್ತು ಕಲಾವತಿ ಜೀರಗಿವಾಡ ಎಂದು ಗುರುತಿಸಲಾಗಿದೆ.

ಬೆಳಗಾವಿ (ಮೇ.11): ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶನಿವಾರ (ಮೇ 11, 2025) ದುರಂತ ಸಂಭವಿಸಿದೆ. ಜಮೀನಿನಲ್ಲಿ ಮೇವು ತೆಗೆದುಕೊಂಡು ವಾಪಸ್ ಬರುವಾಗ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗವ್ವ ಜೀರಗಿವಾಡ ಮತ್ತು ಕಲಾವತಿ ಜೀರಗಿವಾಡ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
 
ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಮುಂಗಾರುಪೂರ್ವ ಮಳೆ ಶುರುವಾಗಿದೆ ಗುಡುಗು ಸಿಡಲಿನೊಂದಿಗೆ ಕೆಲವಡೆ ಮಳೆಯಾಗುತ್ತಿದೆ. ಈ ವೇಳೆ ಹೊಲದಲ್ಲಿ ದುಡಿಯುವ ರೈತಾಪಿ ಕುಟುಂಬಗಳು ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಬೇಕಿದೆ.

ಇದನ್ನೂ ಓದಿ: ಕಾರು, ಬೈಕ್‌ಗೆ ಲೈಸೆನ್ಸ್ ಬೇಕು, ಟ್ರ್ಯಾಕ್ಟರ್ ಚಾಲನೆಗೆ ಡಿಎಲ್ ಇರಬೇಕಾ?

ಸಿಡಿಲಿನಿಂದ ಸುರಕ್ಷಿತವಾಗಿರಲು ಈ ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಿ:
30-30 ನಿಯಮ: ಮಿಂಚು ಕಂಡ ನಂತರ 30 ಸೆಕೆಂಡುಗಳ ಒಳಗೆ ಗುಡುಗು ಕೇಳಿದರೆ, ಸಿಡಿಲಿನ ಅಪಾಯವಿದೆ. ತಕ್ಷಣ ಆಶ್ರಯ ಪಡೆಯಿರಿ.

ಒಳಾಂಗಣ ಆಶ್ರಯ: ಕಾಂಕ್ರೀಟ್ ಕಟ್ಟಡ ಅಥವಾ ಲೋಹದ ಛಾವಣಿಯ ಕಾರಿನೊಳಗೆ ಆಶ್ರಯ ಪಡೆಯಿರಿ. ತೆರೆದ ಸ್ಥಳಗಳನ್ನು ತಪ್ಪಿಸಿ. ಒಂದು ವೇಳೆ
ತೆರೆದ ಪ್ರದೇಶದಲ್ಲಿ ಇದ್ದರೆ ಎತ್ತರದ ಮರಗಳು, ದೊಡ್ಡ ಕಂಬಗಳು ಅಥವಾ ಲೋಹದ ವಸ್ತುಗಳಿಂದ ದೂರವಿರಿ. ಎದ್ದು ನಿಲ್ಲಬೇಡಿ. ಎತ್ತರದ ಸ್ಥಳದಲ್ಲಿ ನಿಲ್ಲಬೇಡಿ. ಕೈ ಕಾಲುಗಳ ನಡುವೆ ತಲೆ ಬಾಗಿಸಿ ಕುಳಿತುಕೊಳ್ಳಿ.

ನೀರಿನಿಂದ ದೂರ: ಸಿಡಿಲಿನ ಸಮಯದಲ್ಲಿ ಈಜಾಡಬೇಡಿ ಅಥವಾ ನೀರಿನ ಸಂಪರ್ಕದಲ್ಲಿರಬೇಡಿ.

ಲೋಹದ ವಸ್ತುಗಳನ್ನು ತಪ್ಪಿಸಿ: ಲೋಹದ ವಸ್ತುಗಳು (ಕೃಷಿ ಉಪಕರಣಗಳು, ಬೈಸಿಕಲ್) ಸಿಡಿಲನ್ನು ಆಕರ್ಷಿಸಬಹುದು.

ಗುಂಪಿನಿಂದ ದೂರ: ಗುಂಪಾಗಿ ನಿಂತರೆ ಸಿಡಿಲು ಬಡಿದಾಗ ಹೆಚ್ಚಿನ ಹಾನಿಯಾಗಬಹುದು. ಒಂಟಿಯಾಗಿರಿ. ಸಿಡಿಲಿನ ಸಮಯದಲ್ಲಿ ವೈರ್‌ಲೆಸ್ ಫೋನ್‌ಗಳ ಬಳಕೆ ಸುರಕ್ಷಿತ, ಆದರೆ ಕಾರ್ಡ್‌ಲೆಸ್ ಫೋನ್‌ಗಳನ್ನು ತಪ್ಪಿಸಿ ಸಿಡಿಲಿನ ಸಮಯದಲ್ಲಿ ಮಿಂಚು ಕಂಡರೆ ಒಳಗೆ ಹೋಗಿ ಎಂಬ ಮಾತನ್ನು ಅನುಸರಿಸಿ. ಹೊರಗಡೆ ಚಟುವಟಿಕೆಗಳನ್ನು ಮಳೆಗಾಲದಲ್ಲಿ ಸಾಧ್ಯವಾದಷ್ಟು ತಪ್ಪಿಸಿ.

ಗಮನಿಸಿ: ಸಿಡಿಲಿನ ಸುರಕ್ಷತಾ ಮಾಹಿತಿಯನ್ನು ಸಾಮಾನ್ಯ ಜ್ಞಾನ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಒದಗಿಸಲಾದ ಪ್ರಾಥಮಿಕ ಮಾಹಿತಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌