
ಗಂಗಾವತಿ(ಡಿ.02): ಒಂದು ಹುಡುಗ, ಒಂದು ಹುಡುಗಿ, ಇಬ್ಬರ ನಡುವಿನ ಪ್ರೇಮಕ್ಕೆ ಬೆಂಬಲ ನೀಡಲು ಅತಿರಥ ಮಹಾರಥರ ದಂಡು. ಇವರಿಬ್ಬರ ಪವಿತ್ರ ಪ್ರೇಮಕ್ಕೆ ಕರ್ನಾಟಕ ಸರ್ಕಾರ, ತೆಲಂಗಾಣ ರಾಜ್ಯಪಾಲರೇ ತಲೆಬಾಗಿದ್ದಾರೆ.
ಹೌದು ಗಂಗಾವತಿಯ ವಿದ್ಯಾ ನಗರದಲ್ಲಿ ಇಂದು ವಿಶಿಷ್ಟವಾದ ಮದುವೆಯೊಂದು ನಡೆದಿದೆ. ಹುಡುಗ 7th ಸ್ಟಾರ್ ಹೋಟೆಲ್ ನಲ್ಲಿ ಶೆಫ್, ಹುಡುಗಿ ಬೆಂಗಳೂರಿನಲ್ಲಿರುವ ಅಮೆರಿಕನ್ ವೆಲ್ಸ್ ಫಾರ್ಗೋ ಬ್ಯಾಂಕ್ ಉದ್ಯೋಗಿ.
ವಧು ನಿರಂಜನಿ ಗಂಗಾವತಿಯ ಸಿದ್ದಾಪುರ ಗ್ರಾಮದ ಯುವತಿ. ಮತ್ತು ವರ ವೆಂಕಟ್ ಭಾರ್ಗವ್ ಗಂಗಾವತಿಯ ಉಳೇನೂರು ಗ್ರಾಮದ ಯುವಕ. ಕಳೆದ 8 ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದು, ಇವರ ಮದುವೆಗೆ ಮನೆಯವರಿಂದ ಕಡು ವಿರೋಧ ವ್ಯಕ್ತವಾಗಿತ್ತು.
ಅಲ್ಲದೇ ವೆಂಕಟ್ ಭಾರ್ಗವ್ ನನ್ನು ಮರೆತು ಬಿಡುವಂತೆ ನಿರಂಜನಿಗೆ ಆಕೆಯ ಕುಟುಂಬಸ್ಥರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿರಂಜಿನಿ ಅಲ್ ಇಂಡಿಯಾ ಡೆಮೋಕ್ರೋಟಿಕ್ ಅಸೋಷಿಯನ್ ಮೊರೆ ಹೋಗಿದ್ದಳು.
ಅದರಂತೆ AIDO ಸಂಘಟನೆ ಕೂಡಲೇ ತೆಲಂಗಾಣ ರಾಜ್ಯಪಾಲ್ ಇ.ಎಸ್.ಎಲ್ ನರಸಿಂಹನ್ ಅವರಿಗೆ ಪತ್ರ ಬರೆದು ಜೋಡಿಗೆ ಸಹಾಯ ಮಾಡುವಂತೆ ಮನವಿ ಮಾಡಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ತೆಲೆಗಾಂಣ ರಾಜ್ಯಪಾಲರು, ಕೂಡಲೇ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಇಬ್ಬರ ಮದುವೆ ಮಾಡಿಸುವಂತೆ ಆದೇಶ ನೀಡಿದ್ದರು.
"
ಅದರಂತೆ ಇಂದು ವಿದ್ಯಾನಗರದ ರಾಮ ಮಂದಿರದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ನಿರಂಜನಿ ಮತ್ತು ವೆಂಕಟ್ ಭಾರ್ಗವ್ ಮದುವೆಯಾಗಿ ಹೊಸ ಜೀವನಕಕೆ ಕಾಲಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ