ರಾಜ್ಯ ಸರ್ಕಾರದಿಂದ ಮೇಡ್‌ ಇನ್‌ ಕರ್ನಾಟಕ ಕಂಪ್ಯೂಟರ್‌ ಅಭಿವೃದ್ಧಿ, ಇಂದು ಬಿಡುಗಡೆ

Kannadaprabha News   | Kannada Prabha
Published : Nov 18, 2025, 06:10 AM IST
Priyank kharge

ಸಾರಾಂಶ

ಐಟಿ-ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ಕರ್ನಾಟಕದ ಸ್ಟಾರ್ಟಪ್‌ಗಳು ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ‘ಕಿಯೋ’ (ಕೆಇಒ) ಹೆಸರಿನ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರು ಟೆಕ್ ಸಮ್ಮಿಟ್‌-2025ರ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಬೆಂಗಳೂರು : ಐಟಿ-ಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ಕರ್ನಾಟಕದ ಸ್ಟಾರ್ಟಪ್‌ಗಳು ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ‘ಕಿಯೋ’ (ಕೆಇಒ) ಹೆಸರಿನ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರು ಟೆಕ್ ಸಮ್ಮಿಟ್‌-2025ರ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದು ಸರ್ಕಾರವೇ ಅಭಿವೃದ್ಧಿಪಡಿಸಿದ ಮೊದಲ ಎಐ ಪರ್ಸನಲ್‌ ಕಂಪ್ಯೂಟರ್‌ ಆಗಿದೆ. ಇಂಥ ಪ್ರಯತ್ನ ವಿಶ್ವದಲ್ಲೇ ಮೊದಲು ಎನ್ನಲಾಗಿದೆ.

ಮಾಹಿತಿ ಹಂಚಿಕೊಂಡ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ಕೆಇಒ’ ಅಂದರೆ ಜ್ಞಾನ ಆಧಾರಿತ, ಕಡಿಮೆ ಖರ್ಚಿನ, ಓಪನ್ ಸೋರ್ಸ್‌ ರಿಸ್ಕ್‌-ವಿ ಪ್ರೊಸೆಸರ್‌ ಆಧಾರಿತ ಎಐ ಕಂಪ್ಯೂಟರ್‌ ಎಂದರ್ಥ. ಚಿಪ್ ಸೇರಿ ಎಲ್ಲವನ್ನೂ ಸಂಪೂರ್ಣವಾಗಿ ಕರ್ನಾಟಕದಲ್ಲಿ ಅಭಿವೃದ್ಧಿಪಡಿಸಿ ನಿರ್ಮಿಸಲಾಗಿದೆ. ಅಲ್ಲದೆ, ಇದು ಕೈಗೆಟುಕುವ ದರದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ನ.18ರಿಂದ ಕಿಯೋನೆಕ್ಸ್ಟ್‌ಪೋರ್ಟಲ್‌ ಅಲ್ಲಿ ಪ್ರೀಬುಕ್ಕಿಂಗ್ ಲಭ್ಯವಿದೆ. 2 ತಿಂಗಳ ನಂತರ ಡೆಲಿವರಿ ಆರಂಭವಾಗುತ್ತದೆ ಎಂದು ತಿಳಿಸಿದರು.

ಲೀನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಿಯೋ, ಕಂಪ್ಯೂಟಿಂಗ್‌ನ ನೈಜ ಅನುಭವ ನೀಡುತ್ತದೆ. 4ಜಿ, ವೈ-ಫೈ, ಎಥರ್‌ನೆಟ್‌, ಯುಎಸ್‌ಬಿ-ಎ ಮತ್ತು ಯುಎಸ್‌ಬಿ-ಸಿ ಪೋರ್ಟ್, ಎಚ್‌ಡಿಎಂಐ ಮತ್ತು ಆಡಿಯೋ ಜಾಕ್ ಕೂಡ ಕಿಯೋ ಹೊಂದಿರಲಿದೆ. ಇದರಲ್ಲಿ ಕಲಿಕೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳು, ಪ್ರೋಗ್ರಾಮ್‌ಗಳು ಮತ್ತು ಪ್ರೊಡಕ್ಟಿವಿಟಿ ಟೂಲ್ಸ್ ಇರುತ್ತವೆ ಎಂದು ಸಚಿವರು ತಿಳಿಸಿದರು.

ರಾಜ್ಯ ಪಠ್ಯಕ್ರಮದ ಪಠ್ಯವೂ ಕಂಪ್ಯೂಟರ್‌ನಲ್ಲಿ ಲಭ್ಯವಾಗಲಿದೆ. ಬುದ್ಧ ಹೆಸರಿನ ಎಐ ಏಜೆಂಟ್‌ ಸಾಫ್ಟ್‌ವೇರ್‌ ಈ ಪಠ್ಯವನ್ನು ಓದಲು, ಅರ್ಥೈಸಿಕೊಳ್ಳಲು ನೆರವಾಗುತ್ತದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಕಂಪ್ಯೂಟರ್‌ನಲ್ಲಿ ಏನೇನಿದೆ?

ಲೀನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಿಯೋ, ಕಂಪ್ಯೂಟಿಂಗ್‌ನ ನೈಜ ಅನುಭವ ನೀಡುತ್ತದೆ. 4ಜಿ, ವೈ-ಫೈ, ಎಥರ್‌ನೆಟ್‌, ಯುಎಸ್‌ಬಿ-ಎ ಮತ್ತು ಯುಎಸ್‌ಬಿ-ಸಿ ಪೋರ್ಟ್, ಎಚ್‌ಡಿಎಂಐ ಮತ್ತು ಆಡಿಯೋ ಜಾಕ್ ಕೂಡ ಕಿಯೋ ಹೊಂದಿರಲಿದೆ. ಇದರಲ್ಲಿ ಕಲಿಕೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳು, ಪ್ರೋಗ್ರಾಮ್‌ಗಳು ಮತ್ತು ಪ್ರೊಡಕ್ಟಿವಿಟಿ ಟೂಲ್ಸ್ ಒಳಗೊಂಡಿದೆ.

ರಾಜ್ಯದ ಪಠ್ಯವೂ ಇದರಲ್ಲಿ ಲಭ್ಯ

ರಾಜ್ಯ ಪಠ್ಯಕ್ರಮದ ಪಠ್ಯವೂ ಕಂಪ್ಯೂಟರ್‌ನಲ್ಲಿ ಲಭ್ಯವಾಗಲಿದೆ. ಬುದ್ಧ ಹೆಸರಿನ ಎಐ ಏಜೆಂಟ್‌ ಸಾಫ್ಟ್‌ವೇರ್‌ ಈ ಪಠ್ಯವನ್ನು ಓದಲು, ಅರ್ಥೈಸಿಕೊಳ್ಳಲು ನೆರವಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!