ಬ್ರಿಟನ್‌ ರಿಟರ್ನ್ಡ್: ನಾಪತ್ತೆ ಆದವರ ಪತ್ತೆಗೆ ವಿಶೇಷ ತಂಡ

Kannadaprabha News   | Asianet News
Published : Jan 06, 2021, 10:23 AM ISTUpdated : Jan 06, 2021, 11:18 AM IST
ಬ್ರಿಟನ್‌ ರಿಟರ್ನ್ಡ್: ನಾಪತ್ತೆ ಆದವರ ಪತ್ತೆಗೆ ವಿಶೇಷ ತಂಡ

ಸಾರಾಂಶ

ನಾಪತ್ತೆ ಆದವರ ಪತ್ತೆಗೆ ವಿಶೇಷ ತಂಡ | 121 ಮಂದಿ ಪತ್ತೆಗೆ 8 ವಲಯದಲ್ಲಿ ತಂಡ ರಚನೆ: ಚೋಳನ್‌

ಬೆಂಗಳೂರು(ಜ.06): ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ವಾಪಾಸ್‌ ಆಗಿ ನಾಪತ್ತೆಯಾದ 121 ಮಂದಿ ಪತ್ತೆಗೆ ಬಿಬಿಎಂಪಿಯ ಎಂಟು ವಲಯಗಳಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್‌ ಹೇಳಿದ್ದಾರೆ.

"

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಡಿ.1ರಿಂದ 21ವರೆಗೆ 1,426 ಆಗಮಿಸಿದ್ದರು. ಡಿ.30 ರಂದು 553 ಮಂದಿ, ಡಿ.31 ರಂದು 486 ಮಂದಿ ಆಗಮಿಸಿದ್ದಾರೆ. ಈ ಪೈಕಿ ಡಿ.1ರಿಂದ ಡಿ.21 ವರೆಗೆ ಆಗಮಿಸಿದವರಲ್ಲಿ 79 ಮಂದಿ, ಡಿ.30 ರಂದು ಆಗಮಿಸಿದವರ ಪೈಕಿ 28 ಮಂದಿ ಹಾಗೂ ಡಿ.31 ರಂದು ಆಗಮಿಸಿದವರಲ್ಲಿ 14 ಮಂದಿ ಸೇರಿದಂತೆ ಒಟ್ಟು 121 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗೆ ವಲಯವಾರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಎರಡು ಮೂರು ದಿನದಲ್ಲಿ ಎಲ್ಲರನ್ನು ಪತ್ತೆ ಮಾಡಲಾಗುವುದು ಎಂದು ವಿವರಿಸಿದರು.

ಕೊರೋನಾ ಲಸಿಕೆ ಹಾಕಲು 1,535 ಸ್ಥಳ ಗುರುತು

ನಾಪತ್ತೆಯಾದವರ ಪೈಕಿ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವ ಮಹದೇವಪುರ ಭಾಗದವರು ಹೆಚ್ಚಾಗಿದ್ದಾರೆ. ಬಹುತೇಕ ಉದ್ಯೋಗಿಗಳಾಗಿರಬಹುದು. ಅನೇಕರ ಬ್ರಿಟನ್‌ ಮೊಬೈಲ್‌ ಸಂಖ್ಯೆ ಹಾಗೂ ವಿಳಾಸ ನೀಡಿದ್ದಾರೆ. ವಾಟ್ಸಪ್‌ ಕಾಲ್‌ ಮೂಲಕ ಸಂಪರ್ಕ ಮಾಡುವ ಪ್ರಯತ್ನವನ್ನು ವಿಶೇಷ ತಂಡದ ಅಧಿಕಾರಿಗಳು ಮಾಡುತ್ತಿದ್ದಾರೆ. ಒಂದು ವೇಳೆ ಪತ್ತೆಯಾಗದಿದ್ದಲ್ಲಿ ಅವರ ವಿವರವನ್ನು ಪೊಲೀಸ್‌ ಇಲಾಖೆಗೆ ನೀಡಿ ಪಾಸ್‌ಫೋರ್ಟ್‌ ಅಧಿಕಾರಿಗಳ ಸಹಕಾರದೊಂದಿಗೆ ಪತ್ತೆ ಮಾಡುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿಸಿದರು.

"

288 ಮಂದಿಯ ವರದಿ ಬಾಕಿ

ಬ್ರಿಟ​ನ್‌​ನಿಂದ ಬಂದ​ವ​ರಲ್ಲಿ ಒಟ್ಟು 2,471 ಜನ ಬೆಂಗ​ಳೂ​ರಿಗೆ ಸೇರಿದ್ದು, ಇವ​ರಲ್ಲಿ 1,860 ಜನರನ್ನು ಸೋಂಕು ಪರೀ​ಕ್ಷೆಗೆ ಲಭ್ಯ​ವಿದ್ದು, ಇವ​ರಲ್ಲಿ 1,572 ಜನರನ್ನು ಸೋಂಕು ಪರೀ​ಕ್ಷೆಗೆ ಒಳ​ಪ​ಡಿ​ಸಲಾಗಿದೆ. ಇನ್ನು 288 ಜನ​ರನ್ನು ಸೋಂಕು ಪರೀ​ಕ್ಷೆಗೆ ಒಳ​ಪ​ಡಿ​ಸ​ಬೇ​ಕಿದೆ ಎಂದು ಪಾಲಿಕೆಯ ಆರೋ​ಗ್ಯ ವಿಭಾ​ಗದ ಅಧಿ​ಕಾ​ರಿ​ಗಳು ಮಾಹಿತಿ ನೀಡಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ