
ತುಮಕೂರು : ಮಿತ ಆಹಾರ, ಒಳ್ಳೆ ಚಿಂತನೆಯಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ನಂಬಿದ್ದ ಶ್ರೀಗಳು ಕೊನೇವರೆಗೂ ಅದನ್ನು ಪಾಲಿಸಿದರು, ತಮ್ಮ ನಂಬಿಕೆಯನ್ನು ನಿಜ ಎಂದು ಸಾಬೀತು ಮಾಡಿ ತೋರಿಸಿದರು.
ಇದಕ್ಕೆ ಅವರು ಕಡೇ ತನಕ ಕನ್ನಡಕವನ್ನೂ ಹಾಕಿರಲಿಲ್ಲ ಎಂಬುದೇ ಸಾಕ್ಷಿ. ಪ್ರತಿ ದಿನ ಸುಮಾರು 20 ಗಂಟೆ ಕಾಲ ಮಠದ ಏಳಿಗೆಗಾಗಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರೀಗಳು ದುಡಿದಿದ್ದರು. ಪ್ರತಿ ದಿನ ಕನಿಷ್ಠ 2 ಗಂಟೆಗಳ ಕಾಲ ಅಧ್ಯಯನದಲ್ಲಿ ತೊಡಗುವುದು, ಸುಮಾರು 1 ಗಂಟೆ ಕಾಲ ಬರಿಯುವಾಗಲೂ ಶ್ರೀಗಳು ಕನ್ನಡಕ ಧರಿಸುತ್ತಿರಲಿಲ್ಲ.
ಉತ್ಸಾಹದ ಚಿಲುಮೆಯಾಗಿದ್ದ ಶ್ರೀಗಳು ತಮ್ಮ ಹಳೆಮಠದಿಂದ ಆಡಳಿತ ಕಚೇರಿಗೆ, ಅಲ್ಲಿಂದ ಗದ್ದುಗೆಗೆ, ಬಳಿಕ ಊಟದ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದರು. ಶ್ರೀಗಳು ಸ್ಟೆಂಟ್ ಅಳವಡಿಸಿಕೊಳ್ಳುವ ತನಕ ಸಲೀಸಾಗಿ ಮಠದ ತುಂಬೆಲ್ಲಾ ಓಡಾಡುತ್ತಲೇ ಸ್ಫೂರ್ತಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ