ಕೊರೋನಾ ವ್ಯಾಕ್ಸಿನೇಷನ್‌ ಟ್ರಯಲ್‌ಗೊಳಗಾದವರು ಏನಂತಾರೆ ಕೇಳಿ

Suvarna News   | Asianet News
Published : Jan 05, 2021, 11:54 AM IST
ಕೊರೋನಾ ವ್ಯಾಕ್ಸಿನೇಷನ್‌ ಟ್ರಯಲ್‌ಗೊಳಗಾದವರು ಏನಂತಾರೆ ಕೇಳಿ

ಸಾರಾಂಶ

ಕೊರೊನಾ ವ್ಯಾಕ್ಸಿನೇಷನ್‌ ಅಂದ್ರೆ ಭಯ ಇದೆಯಾ..? ವ್ಯಾಕ್ಸಿನೇಷನ್‌ ಟ್ರಯಲ್‌ಗೆ ಒಳಗಾದವರ ಅನುಭವದ ಮಾತುಗಳಿವು.. ಇಲ್ಲಿ ಓದಿ

ಬೆಂಗಳೂರು(ಜ.05): ಸಾಯುವವರಿದ್ದರೆ ನಾಯಿ ಕಚ್ಚಿಯೂ ಸಾಯುತ್ತಾರೆ. ಕೊರೊನಾ ವ್ಯಾಕ್ಸಿನೇಷನ್‌ ತೆಗೆದುಕೊಳ್ಳಲು ಭಯ ಬೇಡ ಎಂದು ವ್ಯಾಕ್ಸಿನೇಷನ್‌ ಟ್ರಯಲ್‌ಗೆ ಒಳಗಾದವರು ಹೇಳಿದ್ದಾರೆ.

ಈಗಾಗಲೇ ಕೊರೋನಾ ವಾಕ್ಸಿನೇಷನ್ ಬಗ್ಗೆ ಬಹಳಷ್ಟು ಜನರಲ್ಲಿ ಮಾಹಿತಿ ಕೊರತೆ, ಭಯ, ಗೊಂದಲಗಳಿರುವ ಹಿನ್ನೆಲೆಯಲ್ಲಿ ಈ ಮಾತು ಮಹತ್ವ ಪಡೆದಿದೆ. ಕೊರೊನಾಗಿಂತ ವ್ಯಾಕ್ಸಿನೇಷನ್‌ ಕೆಟ್ಟದಲ್ಲ ಎಂದು ವ್ಯಾಕ್ಸಿನೇಷನ್‌ ಟ್ರಯಲ್‌ಗೆ ಒಳಗಾದವರು ಅನುಭವದ ಹಂಚಿಕೊಂಡಿದ್ದಾರೆ.

ಗ್ರಾಪಂ ಚುನಾವಣಾ ವೈಷಮ್ಯಕ್ಕೆ ಗೆದ್ದ ಅಭ್ಯರ್ಥಿಯ ಸಂಬಂಧಿ ಬಲಿ

ವಾಕ್ಸಿನೇಷನ್‌ಗೆ ಒಳಗಾದ ಖಾಸಗಿ ಆಸ್ಪತ್ರೆ ಅಕೌಂಟೆಂಟ್ ಶರತ್ ಮಾತನಾಡಿದ್ದು, 28 ಅಕ್ಟೋಬರ್ 2020ರಲ್ಲಿ ಮೊದಲ ಡೋಸೇಜ್, ನವೆಂಬರ್ 27 ಎರಡನೇ ಡೋಸೇಜ್ ತೆಗೆದುಕೊಂಡೆವು. ಯಾವುದೇ ರೀತಿಯ ತೊಂದರೆ ಆಗಲಿಲ್ಲ ಎಂದಿದ್ದಾರೆ.

ಪ್ರತಿ ಡೋಸೇಜ್ ನಂತರ 7 ದಿನಗಳ ನಿಗಾ ಇತ್ತು. ಜ್ವರ, ಹೂತ, ವಾಂತಿ, ಭೇದಿ ಹೀಗೆ ಯಾವುದೇ ತೊಂದರೆ ಬಗ್ಗೆಯೂ  ವಹಿಸಿದ್ದರು. ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಮೂರು ತಿಂಗಳಿಂದ ಸದಾ ನಿಗಾ ವಹಿಸುತ್ತಲೇ ಇದ್ದಾರೆ ಎಂದಿದ್ದಾರೆ.

ಬ್ರಿಟನ್‌ ರಿಟರ್ನ್ಡ್ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆ

ವ್ಯಾಕ್ಸಿನೇಷನ್‌ ಟ್ರಯಲ್ ನಲ್ಲಿ ನನಗೆ ಯಾವುದೇ ತೊಂದರೆ ಆಗಿಲ್ಲ. ಜನರು ಯಾವುದೇ ಭಯ ಇಲ್ಲದೆ ವ್ಯಾಕ್ಸಿನ್ ಪಡೆಯಬಹುದು ಎಂದು ಹೇಳಿರುವ ಶರತ್ ವ್ಯಾಕ್ಸಿನ್ ಕುರಿತು ಭಯಪಡುವಂತದ್ದೇನೂ ಇಲ್ಲ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!