ಶೇ.15ರವರೆಗೆ ನಕ್ಷೆ ಉಲ್ಲಂಘಿಸಿದ ಕಟ್ಟಡಗಳ ಸಕ್ರಮಕ್ಕೆ ದಂಡ ಸ್ಕೀಂ

Kannadaprabha News   | Kannada Prabha
Published : Nov 01, 2025, 05:31 AM IST
Karnataka Govt

ಸಾರಾಂಶ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆದು ಬಳಿಕ ಪರವಾನಗಿ ಷರತ್ತು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳಿಗೆ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆದು ಬಳಿಕ ಪರವಾನಗಿ ಷರತ್ತು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳಿಗೆ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶಿಸಿದೆ.

ನಿಗದಿತ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ಮಂಜೂರು

ಕಟ್ಟಡ ಪರವಾನಗಿ ಪಡೆದು ಸೆಟ್‌ಬ್ಯಾಕ್‌ಗಳಲ್ಲಿ ಶೇ.15ರ ಮಿತಿಯೊಳಗೆ ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ಕಟ್ಟಡಗಳಿಗೆ ನಗರ ಸ್ಥಳೀಯ ಸಂಸ್ಥೆವಾರು ನಿಗದಿತ ದಂಡ ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ಮಂಜೂರು ಮಾಡಲು ಸೂಚಿಸಲಾಗಿದೆ. ಅದರಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡಕ್ಕೆ ಪ್ರತಿ ಚದರ ಮೀಟರ್‌ಗೆ 1 ಸಾವಿರ ರು. ವಾಣಿಜ್ಯ ಕಟ್ಟಡಕ್ಕೆ 1,500 ರು., ಪುರಸಭೆ ವ್ಯಾಪ್ತಿಯಲ್ಲಿ ಕ್ರಮವಾಗಿ 1,200 ರು. ಮತ್ತು 1,800 ರು, ನಗರ ಸಭೆಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 1,500 ರು. ಮತ್ತು 2,250 ರು., ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 2 ಸಾವಿರ ರು. ಮತ್ತು 3 ಸಾವಿರ ರು. ದಂಡ ನಿಗದಿಗೊಳಿಸಲಾಗಿದೆ.

ಕಟ್ಟಡ ಪರವಾನಗಿ ಪಡೆದು ಪ್ಲೋರ್‌ ಏರಿಯಾ ರೇಶ್ಯೂ(ಎಫ್‌ಎಆರ್‌) ಮತ್ತು ಕಾರ್‌ ಪಾರ್ಕಿಂಗ್‌ ಪ್ರದೇಶಗಳ ಉಲ್ಲಂಘನೆ ಪ್ರಕರಣಗಳಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರು ಪಾರ್ಕಿಂಗ್‌ ಉಲ್ಲಂಘನೆಗೆ 5 ಸಾವಿರ ರು. ಮತ್ತು ಎಫ್‌ಎಆರ್‌ ಉಲ್ಲಂಘನೆ(ಚದರ ಮೀಟರ್‌) ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡಗಳಿಗೆ 1 ಸಾವಿರ ರು. ಮತ್ತು ವಾಣಿಜ್ಯ ಕಟ್ಟಡಗಳಿಗೆ 1,500 ರು, ಪುರಸಭೆ ವ್ಯಾಪ್ತಿಯಲ್ಲಿ ಕಾರ್‌ ಪಾರ್ಕಿಂಗ್‌ ಉಲ್ಲಂಘನೆಗೆ 5 ಸಾವಿರ ರು, ವಸತಿ, ಕೈಗಾರಿಕೆ, ಇತರೆ ಉದ್ದೇಶದ ಕಟ್ಟಡಗಳಿಗೆ 1,200 ರು. ಮತ್ತು ವಾಣಿಜ್ಯ ಕಟ್ಟಡಗಳಿಗೆ 1,800 ರು, ನಗರ ಸಭೆಗಳ ವ್ಯಾಪ್ತಿಯಲ್ಲಿ ಎಫ್‌ಎಆರ್‌ ಉಲ್ಲಂಘನೆಗೆ 1,500 ರು. ಮತ್ತು ವಾಣಿಜ್ಯ ಕಟ್ಟಡಗಳಿಗೆ 2,250 ರು. ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎಫ್‌ಎಆರ್‌ ಉಲ್ಲಂಘನೆಗೆ 2 ಸಾವಿರ ರು. ಮತ್ತು ವಾಣಿಜ್ಯ ಕಟ್ಟಡಗಳಿಗೆ 3 ಸಾವಿರ ರು. ದಂಡ ವಿಧಿಸಿ ಸರ್ಕಾರ ಆದೇಶಿದೆ.

ದಂಡ ಎಷ್ಟು?

ಪಟ್ಟಣ ಪಂಚಾಯಿತಿ ವಸತಿ, ಕೈಗಾರಿಕೆ, ಇತರೆ ಕಟ್ಟಡ ವಾಣಿಜ್ಯ ಉದ್ದೇಶದ ಕಟ್ಟಡ

₹1000 ₹1500

ಪುರಸಭೆ

₹1200 ₹1800

ನಗರಸಭೆ

₹1500 ₹2250

ಮಹಾನಗರಪಾಲಿಕೆ

₹2000 ₹3000

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Namma Metro Update: ಕೆಂಗೇರಿ ಮೆಟ್ರೋ ದುರಂತ; ಮೃತರ ಗುರುತು ಪತ್ತೆ, ಸಂಚಾರ ಸಹಜ ಸ್ಥಿತಿಗೆ!
ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!