
ಬೆಂಗಳೂರು(ಮೇ.23): ಲಾಕ್ಡೌನ್ ಸಡಿಲಗೊಂಡು ಸಾರ್ವಜನಿಕ ಸಾರಿಗೆ ಸಂಚಾರ ಆರಂಭವಾದ ನಾಲ್ಕನೇ ದಿನವಾದ ಶುಕ್ರವಾರ ಬಿಎಂಟಿಸಿ ಬಸ್ಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.
ಬೆಳಗ್ಗೆ ಮೆಜೆಸ್ಟಿಕ್ನ ಬಿಎಂಟಿಸಿ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ನಿಲ್ದಾಣದಿಂದ ತೆರಳಿದ ಕೆಲ ಬಸ್ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜನ ಸಂಚರಿಸಿದರು. ಜೊತೆಗೆ, ಪ್ರಯಾಣಿಕರು ಬಸ್ ಹತ್ತುವಾಗ ಮತ್ತು ಇಳಿಯುವಾಗ ಗುಂಪು ಗೂಡಿದ್ದರು.
ಬಣಗುಡುತ್ತಿದೆ BMTC ಬಸ್ ನಿಲ್ದಾಣ, ಆದ್ರೆ KSRTC ಫುಲ್ ರಶ್..!
ಬಸ್ಗಳಲ್ಲಿ ಸೀಟುಗಳಲ್ಲಿ ಅಂಟಿಕೊಂಡು ಕುಳಿತು ಪ್ರಯಾಣಿಸಿದರು. ನಿಲ್ದಾಣದ ಅಧಿಕಾರಿಗಳು ನೋಡಿಯೂ ನೋಡದಂತೆ ವರ್ತಿಸಿದರು. ಪ್ರಯಾಣಿಕರಿಗೆ ಥರ್ಮಲ್ಸ್ಕ್ರೀನಿಂಗ್ ಸಹ ಮಾಡುತ್ತಿರಲಿಲ್ಲ. ಶುಕ್ರವಾದ ಅತ್ಯಂತ ವಿರಳ ಸಂಖ್ಯೆಯಲ್ಲಿ ಜನ ಇದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತಿತ್ತು.
ಬಿಎಂಟಿಸಿ ನಿಗಮವು ಗುರುವಾರ 1,350 ಬಸ್ ಕಾರ್ಯಾಚರಣೆ ಮಾಡಿದ್ದು, 67,400 ಪಾಸ್ ಮಾರಾಟ ಮಾಡಿದೆ. ಇದರಿಂದ 77 ಲಕ್ಷ ಆದಾಯ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ