ದೇಶಕ್ಕೋಸ್ಕರ ನಾನು ಸೂ ಸೈಡ್ ಬಾ೦ಬರ್ ಆಗಲು ರೆಡಿ; ಪ್ರತಾಪ್ ಸಿಂಹ ಗೆ ಸಚಿವ ಜಮೀರ್ ಸವಾಲೇನು?

Published : May 04, 2025, 08:22 AM IST
ದೇಶಕ್ಕೋಸ್ಕರ ನಾನು ಸೂ ಸೈಡ್ ಬಾ೦ಬರ್ ಆಗಲು ರೆಡಿ; ಪ್ರತಾಪ್ ಸಿಂಹ ಗೆ ಸಚಿವ ಜಮೀರ್ ಸವಾಲೇನು?

ಸಾರಾಂಶ

ನಾನು ದೇಶಕ್ಕೋಸ್ಕರ ಸೂ ಸೈಡ್ ಬಾ0ಬರ್‌ ಆಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಹೋಗುತ್ತೇನೆ. ಪ್ರತಾಪ್ ಸಿಂಹ ಬರ್ತಾರಾ ಕೇಳಿ ಎಂದು ವಸತಿ ಸಚಿವ  ಜಮೀರ್ ಅಹಮದ್ ಖಾನ್‌ ಸವಾಲು ಹಾಕಿದರು.

ಹೊಸಪೇಟೆ (ಮೇ.4): ನಾನು ದೇಶಕ್ಕೋಸ್ಕರ ಸೂ ಸೈಡ್ ಬಾ0ಬರ್‌ ಆಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಹೋಗುತ್ತೇನೆ. ಪ್ರತಾಪ್ ಸಿಂಹ ಬರ್ತಾರಾ ಕೇಳಿ ಎಂದು ವಸತಿ ಸಚಿವ  ಜಮೀರ್ ಅಹಮದ್ ಖಾನ್‌ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಕೆಡಿಪಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೋರ್ವ ಮಂತ್ರಿಯಾಗಿ ದೇಶದ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದೇನೆ. ತ್ಯಾಗ ಮಾಡುತ್ತೇನೆ ಅಂತ ಹೇಳಿದ್ದೇನೆ. ಪಾಕಿಸ್ತಾನ ಸತ್ತೋಗಿದೆ ಬಿಡಿ. ಅಲ್ಲಿ ಏನೂ ಇಲ್ಲ. ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆ ಎಂದು ಪುನರುಚ್ಚರಿಸಿದ ಸಚಿವರು, ನಾನು ನಿಜವಾಗಲು ಹೇಳುತ್ತಿದ್ದೇನೆ. ತಮಾಷೆಗೆ ಹೇಳಿದ್ದಲ್ಲ. ದೇಶಕ್ಕೋಸ್ಕರ ಅಷ್ಟು ತ್ಯಾಗ ಮಾಡದಿದ್ದರೆ ಮತ್ತೇನು ಎಂದು ಪ್ರಶ್ನಿಸಿದರು.

ದೇಶದ ಬಗ್ಗೆ ಅಭಿಮಾನ ಇಟ್ಕೊಂಡು ಹೇಳುತ್ತಿದ್ದೇನೆ. ದೇಶಕ್ಕೋಸ್ಕರ ನಾನು ತ್ಯಾಗ ಮಾಡೋಕೆ ಸಿದ್ಧ. ಪ್ರತಾಪ ಸಿಂಹಗೆ ಹೇಳಿ, ಪ್ರಧಾನಿ ನರೇಂದ್ರ ಮೋದಿಗೆ ಹೇಳಿ, ನನಗೆ ಅವಕಾಶ ಮಾಡಿಕೊಡೋಕೆ. ಅವರು ಬರೀ ಮಾತಾಡುತ್ತಾರೆ. ಆದರೆ, ನಾನು ಹೋಗೋಕೆ ಸಿದ್ಧನಿದ್ದೇನೆ ಎಂದರು.

ಇದನ್ನೂ ಓದಿ: ಉಗ್ರ ಪಾಕ್‌ಗೆ ಮತ್ತೆ ಭಾರತ 3 ನಿರ್ಬಂಧ, ಹೊಸ ನಿರ್ಬಂಧಗಳೇನು?

ಬಿಜೆಪಿಗೆ ಬಹುಮತ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ವಾಚ್‌ಮನ್‌ ಆಗುತ್ತೇನೆ ಎಂದಿದ್ದೆ. ಆದರೆ ಅವರಿಗೆ ಸಂಪೂರ್ಣ ಬಹುಮತ ಬಂತಾ? ಜನ ಆಶೀರ್ವಾದ ಮಾಡಿದರಾ? ಈ ವರೆಗೆ ಬಿಜೆಪಿಗೆ ಜನ ಬಹುಮತ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿಯೇ ಸರ್ಕಾರ ರಚಿಸಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!