
ಭಟ್ಕಳ (ಮೇ.24) ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ಮುಳುಗಿ ಮೃತಪಟ್ಟ ಘಟನೆ ರಾಜ್ಯದ ಜನತೆಗೆ ಶಾಕ್ ನೀಡಿದೆ. ಒಂದೇ ಕುಟುಂಬದ 10 ಜನರು ಸಾವು ಕಂಡಿದ್ದಾರೆ. ಆರಂಭದಲ್ಲಿ 8 ಮಂದಿ ಮೃತಪಟ್ಟಿದ್ದರು. ಇನ್ನುಳಿದವರು ನಾಪತ್ತೆಯಾಗಿದ್ದರು. ತೀವ್ರ ಶೋಧಕಾರ್ಯದ ಬಳಿಕ ಇತರರ ಮೃತದೇಹ ಪತ್ತೆಯಾಗಿದೆ. ತಟ್ಟೆಹಕ್ಕಲು ನದಿ ದುರಂತ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಗಂಗೊಳ್ಳಿ ರಕ್ಷಣಾ ತಂಡ ಘಟನೆಗೆ ಕಾರಣ ಬಿಚ್ಚಿಟ್ಟಿದ್ದಾರೆ.
ಕಪ್ಪೆ ಚಿಪ್ಪು ಹೆಕ್ಕಲು ಒಂದೇ ಕುಟುಂಬದ ಸದಸ್ಯರೆಲ್ಲರು ನದಿಗೆ ಇಳಿದಿದ್ದಾರೆ. ಸಮುದ್ರಕ್ಕೆ ಸೇರುವ ನೀರಿನ ಏರಿಳಿತದ ಅನುಭವ ಯಾರೊಬ್ಬರಿಗೂ ಇರಲಿಲ್ಲ.ದುರಂತಕ್ಕೆ ಮುಖ್ಯ ಎರಡು ಕಾರಣಗಳಲ್ಲಿ ಪ್ರಮುಖ ಕಾರಣ ನದಿಯ ಏರಿಳಿತದ ಅನುಭವ ಇರಲಿಲ್ಲ ಎಂದು ಕುಂದಾಪುರದ ಗಂಗೊಳ್ಳಿಯ ದಿನೇಶ್ ಖಾರ್ವಿ ನೇತೃತ್ವದ ರಕ್ಷಣಾ ತಂಡ ಹೇಳಿದೆ. ನದಿಯ ಇಳಿತದ ಸಂದರ್ಭದಲ್ಲಿ ಕಪ್ಪೆ ಚಿಪ್ಪು ಹೆಕ್ಕಲು ನದಿಗೆ ಇಳಿದಿದ್ದಾರೆ. ಆದರೆ ಕೆಲ ಹೊತ್ತಲ್ಲೇ ನದಿ ಉಬ್ಬರಗೊಂಡಿದೆ. ನೀರಿನ ಪ್ರಮಾಣ ಏಕಾಏಕಿ ಏರಿಕೆಯಾಗಿದೆ. ಹಿಂದಿರುಗುವ ದಾರಿ ತಪ್ಪಿ ಆಳಕ್ಕೆ ತೆರಳಿದ್ದಾರೆ. ಇದು ದುರಂತದ ಮೊದಲ ಕಾರಣ ಎಂದಿದ್ದಾರೆ.
ದಿನೇಶ್ ಖಾರ್ವಿ ತಂಡದ ಪ್ರಕಾರ ಒಬ್ಬರಿಗೆ ಈಜು ಬಂದರೆ ಸಾಕಿತ್ತು. ಎಲ್ಲರನ್ನು ರಕ್ಷಣೆ ಮಾಡಬಹುದಿತ್ತು. ಆದರೆ ಈ ಕುಟುಂಬ ಸದಸ್ಯರು ನೀರು ತಗ್ಗಿದ್ದಾಗ ತೆರಳಿದ್ದಾರೆ. ಉಬ್ಬರ ಹೆಚ್ಚಾದಾಗ ಮರಳುವ ದಾರಿ ತಪ್ಪಿದೆ. ಇತ್ತ ಈಜಲು ಬಂದಿಲ್ಲ. ಹೀಗಾಗಿ ದುರಂತಕ್ಕೆ ಸುಲಿಕಿದ್ದಾರೆ ಎಂದು ದಿನೇಶ್ ಖಾರ್ವಿ ಹೇಳಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ದಿನೇಶ್ ಖಾರ್ವಿ ರಕ್ಷಣಾ ತಂಡ ಸ್ವಯಂ ಸೇವಕರಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಸ್ಥಳೀಯ ರಕ್ಷಣಾ ತಂಡದ ಜೊತೆ ಸೇರಿ ಶೋಧ ಕಾರ್ಯ ನಡೆಸಿತ್ತು.
ಭಟ್ಕಳ ದುರಂತದಲ್ಲಿ ನಾಪತ್ತೆಯಾಗಿದ್ದವರ ಇಬ್ಬರ ಪೈಕಿ ನಾಗರತ್ನಾ ನಾಯ್ಕ ಮೃತದೇಹ ಪತ್ತೆಯಾಗಿದೆ. ತಟ್ಟೆಹಕ್ಕಲು ನದಿಯಲ್ಲೆ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮತ್ತೊರ್ವರಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ