Published : May 22, 2025, 06:58 AM IST

Karnataka News Live: ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯೆ ಮೇಲೆ ಪ್ರಾಸಿಕ್ಯೂಷನ್? ಇಂದು ಕ್ಯಾಬಿನೆಟ್‌ ಸಭೆ

ಸಾರಾಂಶ

ಬೆಂಗಳೂರು: ಜಾತಿವಾರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಅನುಷ್ಠಾನ ಕುರಿತು ಲಿಂಗಾಯತ ಸಚಿವರು ಪತ್ರದ ಮೂಲಕ ಸಲ್ಲಿಸಿದ್ದ ಒಗ್ಗಟ್ಟಿನ ಅಭಿಪ್ರಾಯ ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಅಭಿಪ್ರಾಯ ಮಂಡಿಸುವಂತೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೂ ಜಾತಿಗಣತಿ ವರದಿ ಅನುಷ್ಠಾನದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.

Karnataka News Live: ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯೆ ಮೇಲೆ ಪ್ರಾಸಿಕ್ಯೂಷನ್? ಇಂದು ಕ್ಯಾಬಿನೆಟ್‌ ಸಭೆ

07:19 AM (IST) May 22

ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯೆ ಮೇಲೆ ಪ್ರಾಸಿಕ್ಯೂಷನ್? ಇಂದು ಕ್ಯಾಬಿನೆಟ್‌ ಸಭೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ಎಸಗಿದ್ದ ಅಂದಿನ ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಎಂಟು ಮಂದಿ ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ ನಡೆಸುವ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುವ ಸಾಧ್ಯತೆಯಿದೆ. 
 

ಪೂರ್ತಿ ಓದಿ

07:12 AM (IST) May 22

ಕ್ಯಾಬ್‌ ಬುಕಿಂಗ್‌ ಮೊದಲೇ ಅಡ್ವಾನ್ಸ್‌ ಟಿಪ್ಸ್‌: ಉಬರ್‌ ಕಂಪನಿಗೆ ನೋಟಿಸ್‌

ರಿಕ್ಷಾ, ಕ್ಯಾಬ್‌ ಬುಕಿಂಗ್‌ ವೇಳೆ ‘ಅಡ್ವಾನ್ಸ್‌ ಟಿಪ್ಸ್‌’ ಮೂಲಕ ಗ್ರಾಹಕರಿಂದ ಹೆಚ್ಚಿನ ಹಣ ಸಂಗ್ರಹಕ್ಕೆ ಒತ್ತಾಯಿಸುತ್ತಿದ್ದ ಉಬರ್‌ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್‌ ನೀಡಿದೆ.

ಪೂರ್ತಿ ಓದಿ

More Trending News