ಕರ್ನಾಟಕದಲ್ಲಿ 2024ರ ಲೋಕಸಭಾ ಚುನಾವಣೆ ಎರಡು ಹಂತದಲ್ಲಿ ನಡೆದಿತ್ತು. ಏಪ್ರಿಲ್ 26ಕ್ಕೆ ದಕ್ಷಿಣ ಕರ್ನಾಟಕ ಹಾಗೂ ಮೇ 7ಕ್ಕೆ ಉತ್ತರ ಕರ್ನಾಟಕದಲ್ಲಿ ಎಲೆಕ್ಷನ್ ನಡೆದಿತ್ತು. ಒಟ್ಟು 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಮೈತ್ರಿ ಪಕ್ಷ ಜೆಡಿಎಸ್ಗೆ ಕೋಲಾರ, ಹಾಸನ ಹಾಗೂ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟಿತ್ತು. ಗ್ಯಾರಂಟಿಯ ಬಲದಲ್ಲಿ 20 ಸ್ಥಾನಗಳ ಗುರಿ ಇರಿಸಿಕೊಂಡಿರುವ ಕಾಂಗ್ರೆಸ್ ಎಲ್ಲಾ 28 ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದೆ. ಎರಡೂ ಹಂತಗಳಲ್ಲಿ ಒಟ್ಟಾರೆ 70.64ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಅವರ ಕದನ ಕುತೂಹಲ ಕೆರಳಿಸಿದೆ. ಅದರೊಂದಿಗೆ ಬೆಂಗಳೂರು ದಕ್ಷಿಣದಲ್ಲಿ ಸೌಮ್ಯ ರೆಡ್ಡಿ, ಹಾಸನದಲ್ಲಿ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ, ಮಂಡ್ಯದಲ್ಲಿ ಎಚ್ಡಿ ಕುಮಾರಸ್ವಾಮಿ, ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ, ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ರಿಸಲ್ಟ್ ಬಗ್ಗೆ ಎಲ್ಲರ ಗಮನ ಇರಲಿದೆ. ಎಕ್ಸಿಟ್ ಪೋಲ್ನಲ್ಲಿ ಬಿಜೆಪಿ ಪರವಾಗಿ ಒಲವು ವ್ಯಕ್ತವಾಗಿದ್ದರೂ, ಕಾಂಗ್ರೆಸ್ ಕನಿಷ್ಠ 14-15 ಸೀಟ್ ಗೆಲ್ಲುವ ನಿರೀಕ್ಷೆಯಲ್ಲಿದೆ.

05:28 PM (IST) Jun 04
ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಲ್ಲಿ 5 ಕ್ಷೇತ್ರ ಗೆಲ್ಲಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರು ಸೋತರೂ ಚಾಮರಾಜನಗರ ಗೆಲ್ಲಿಸಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಬೆಂಗಳೂರಿನ ಜುಟ್ಟು ಹಿಡಿದುಕೊಂಡರೂ ತಮ್ಮನನ್ನು ಮೇಲೆತ್ತಿಕೊಳ್ಳದೇ ಸೋಲಪ್ಪಿದ್ದಾರೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
05:06 PM (IST) Jun 04
ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ನೂತನ ಸಂಸದ ಗೋವಿಂದ ಕಾರಜೋಳ ಅವರು, ಮಂತ್ರಿ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ನಾಯಕರ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದು ತಿಳಿಸಿದ ನೂತನ ಸಂಸದ ಗೋವಿಂದ ಕಾರಜೋಳ.
ಕಾಂಗ್ರೆಸ್ಗೆ ಸರಕಾರ ರಚಿಸಲು ಆಗೋಲ್ಲ: ಗೋವಿಂದ ಕಾರಜೋಳ
05:00 PM (IST) Jun 04
ಸದಾ ಮೋದಿಯನ್ನು ವಿರೋಧಿಸಿ ಟ್ವೀಟ್ ಮಾಡುವ ನಟ ಪ್ರಕಾಶ್ ರೈ ಇದೀಗ ಬಿಜೆಪಿ ಸರಕಾರ ರಚಿಸಲು ಬಹುಮತ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಇದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
04:38 PM (IST) Jun 04
ಪ್ರತಿಷ್ಠೆಯ ಕಣ ಎನಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಹೀನಾಯ ಸೋಲು ಕಂಡಿದ್ದಾರೆ. ಆದ್ರೆ ಈಗ ಡಿಕೆ ಶಿವಕುಮಾರ್ ಚನ್ನಪಟ್ಟಣದ ಮೇಲೆ ಕಣ್ಣಿಟ್ಟಿದ್ದಾರೆ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
02:13 PM (IST) Jun 04
ಕರ್ನಾಟಕ ಗೆಲುವಿನ ಲೆಕ್ಕಾಚಾರ ಹೀಗಿದೆ, 1 ರಿಂದ 10ಕ್ಕೆ ಏರಿದ ಕಾಂಗ್ರೆಸ್ ಸಾಧನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರಿನಲ್ಲಿ ಕಾಂಗ್ರೆಸ್ ಸೋಲು. ಆಪ್ತನನ್ನು ಗೆಲ್ಲಿಸಲು ವಿಫಲವಾದ ಸಿಎಂ ಸಿದ್ದರಾಮಯ್ಯ. ಸಿಎಂ ನಾಯಕತ್ವದ ಬಗ್ಗೆ ಮೂಡಿದ ಸಹಜ ಪ್ರಶ್ನೆ.
ಸಹೋದರನ ಸೋಲಿನಿಂದ ಕಂಗೆಟ್ಟ ಕೆಪಿಸಿಸಿ ಅಧ್ಯಕ್ಷ ಡಿಕೆಶಿ. ತವರು ಕ್ಷೇತ್ರದಲ್ಲಿ ಮುಖಭಂಗ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖರ್ಗೆ ಕಮಾಲ್. ಆಪ್ತರ ಪಡೆ ಗೆಲ್ಲಿಸಿಕೊಂಡ ಎಐಸಿಸಿ ಅಧ್ಯಕ್ಷ..
ಕಾಂಗ್ರೆಸ್ ನಾಯಕನಿಗೆ ಒಲಿದ ಅದೃಷ್ಟ.
ಮಗಳನ್ನು ಗೆಲ್ಲಿಸಿಕೊಂಡ ಸತೀಶ್ ಜಾರಕಿಹೊಳಿ.. ಡಿಸಿಎಂ ಹುದ್ದೆಗೆ ಕಣ್ಣಿಟ್ಟ ಬೆಳಗಾವಿ ಸಾಹುಕಾರ. ಅಧ್ಯಕ್ಷರಾದ ಬಳಿಕ ಎದುರಿಸಿದ ಮೊದಲ ಚುನಾವಣೆಯಲ್ಲಿ ವಿಜಯೇಂದ್ರಗೆ ಮಿಶ್ರ ಫಲ. ದೋಸ್ತಿ ಕೈಹಿಡಿದ ಕಾರಣಕ್ಕೆ ನಂಬರ್ ಉಳಿಸಿಕೊಂಡ ಬಿಜೆಪಿ ನಂಬರ್.
02:01 PM (IST) Jun 04
ತೀರ್ವ ಕುತೂಹಲ ಕೆರಳಿಸಿದ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಕಲಬುರಗಿಯಲ್ಲಿ ಬಿಜೆಪಿಯ ಹಾಲಿ ಸಸಂದ ಉಮೇಶ್ ಜಾದವ್ ವಿರುದ್ಧ ಎಐಸಿಸಿ ಅಧ್ಯಕ್ಷ ಡಾ.ರಾಧಕೃಷ್ಣ ದೊಡ್ಡಮನಿ ಸ್ಪರ್ಧಿಸಿದ್ದು, ಗೆಲವು ಸಾಧಿಸಿದ್ದಾರೆ.
01:48 PM (IST) Jun 04
ದಾವಣಗೆರೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಸಿದ್ದೇಶ್ವರ್ ಪತ್ನಿ ಹಾಗೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧಿಸಿದ್ದು, ಕಾಂಗ್ರೆಸ್ ಗೆದ್ದು ಬೀಗಿದೆ. ಆ ಮೂಲಕ ಜಿಲ್ಲಗೆ ಇದೇ ಮೊದಲ ಬಾರಿಗೆ ಮೊದಲ ಮಹಿಳಾ ಸಂಸದೆ ಸಿಕ್ಕಂತಾಗಿದೆ.
01:15 PM (IST) Jun 04
ನಮ್ಮ ಕೆಲವು ತಪ್ಪುಗಳಿಂದ ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನಗಳು ಸಿಕ್ಕಿವೆ. ಗ್ಯಾರಂಟಿ ಯೋಜನೆಯಿಂದ ಎಂದು ಹೇಳುವುದಿಲ್ಲ. ಮೋದಿಯೊಂದಿಗೆ ಚರ್ಚಿಸಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕರ್ನಾಟಕದ ಜನರು ನೀಡಿರುವ ಆಶೀರ್ವಾದವಿದು. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಸಲ್ಲಿಸಿದ ವೈದ್ಯಕೀಯ ಸೇವೆ ಸೇರಿ ಹಲವು ಕಾರಣಗಳಿಂದ ಬಿಜೆಪಿ ಗೆದ್ದಿದೆ, ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.
01:12 PM (IST) Jun 04
ಖಾದೂರ್ ಸಾಹಿಬ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತಪಾಲ್ ಸಿಂಗ್ ಆರಂಭಿಕ ಟ್ರೆಂಡ್ಗಳಲ್ಲಿ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
01:00 PM (IST) Jun 04
Assaduddin Owaisi vs madhavi lathaL ಅಸಾದುದ್ದೀನ್ ಓವೈಸಿ 57,810 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಓವೈಸಿ 2,28,577 ಮತ್ತು ಮಾಧವಿ ಲತಾ 1,70,787 ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ವಲಿಲುಲ್ಹಾ ಸಮೀರ್ 24,515 ಮತಗಳನ್ನು ಪಡೆದುಕೊಂಡಿದ್ದಾರೆ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
12:59 PM (IST) Jun 04
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಬರೋಬ್ಬರಿ 42 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ
12:52 PM (IST) Jun 04
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲುವಿಗೆ ಮುನ್ನವೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಸಂಸದರ ನಾಮಫಲಕ ಸಿದ್ಧಪಡಿಸಿ ಚಾಮುಂಡೇಶ್ವರಿ ದೇವಿ ಮುಂದಿಟ್ಟು ಪೂಜೆ ಸಲ್ಲಿಸಲಾಗಿದೆ.
12:32 PM (IST) Jun 04
ಹಾಸನ ಛ ಹಾಸನದಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ. ಅಧಿಕೃತ ಘೋಷಣೆ ಒಂದೇ ಬಾಕಿ. ಎರಡು ದಶಕಗಳ ಬಳಿಕ ಸಂಸತ್ ಸ್ಥಾನ ಗೆದ್ದ ಕಾಂಗ್ರೆಸ್. ಮೈತ್ರಿ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ ಕೈ ಪಡೆ. ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್.
11:59 AM (IST) Jun 04
ಪೆನ್ ಡ್ರೈವ್ ಹಗರಣದಲ್ಲಿ ಸಿಕ್ಕಾಕಿಕೊಂಡ ಎಂಪಿ ಪ್ರಜ್ವಲ್ ರೇವಣ್ಣಗೆ ಹಾಸನದಲ್ಲಿ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲ್ಲೋದು ಬಹುತೇಕ ಖಚಿತವಾಗಿದೆ. ತುಮಕೂರು, ಉಡುಪು ಚಿಕ್ಕಮಗಳೂ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲೋದು ಬಹುತೇಕ ಖಚಿತವಾಗಿದೆ. ಮಂಡ್ಯ ಹಾಗೂ ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಲಕ್ಷಾಂತರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದು ಅಧಿಕೃತವಾಗಿ ಗೆಲವು ಘೋಷಿಸುವುದಷ್ಟೇ ಬಾಕಿ ಇದೆ. ಬೀದರ್ನಲ್ಲಿ ಸಾಗರ್ ಖಂಡ್ರೆ ಗೆಲುವಿನತ್ತ ಮುಖ ಮಾಡಿದ್ದು, ರಾಜ್ಯದಿಂದ ಆಯ್ಕೆಯಾಗುವ ಅತ್ಯಂತ ಕಿರಿಯ ಎಂಪಿ ಆಗೋದರಲ್ಲಿ ಅನುಮಾನವೇ ಇಲ್ಲ.
11:54 AM (IST) Jun 04
ಬೆಳಗಾವಿ
ಬೆಳಗಾವಿ
ಹನ್ನೊಂದನೇ ಸುತ್ತಿನ ಮತ ಎಣಿಕೆ ಮುಕ್ತಾಯ.
ಭಾರಿ ಅಂತರ ಕಾಯ್ದುಕೊಂಡ ಬಿಜೆಪಿ ಜಗದೀಶ್ ಶೆಟ್ಟರ್.
95241ಮತಗಳ ಮುನ್ನಡೆ.
ಬಿಜೆಪಿ ಜಗದೀಶ್ ಶೆಟ್ಟರ್ 456588
ಕಾಂಗ್ರೆಸ್ ಮೃಣಾಲ್ 361347
843137 ಮತಗಳ ಎಣಿಕೆ ಮುಕ್ತಾಯ.
11:45 AM (IST) Jun 04
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆ ಭಾರೀ ಮುನ್ನಡೆ ಹಿನ್ನಲೆಯಲ್ಲಿ ಡಾ.ಮಂಜುನಾಥ್ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ. ಡಾ.ಮಂಜುನಾಥ್ಗೆ ತಿರುಪತಿ ಪ್ರಸಾದ್ ತಿನಿಸಿದ ಕುಟುಂಬಸ್ಥರು. ಪದ್ಮನಾಭ ನಗರದಲ್ಲಿರೋ ಡಾ.ಮಂಜುನಾಥ್ ನಿವಾಸಕ್ಕೆ ಶುಭ ಕೋರಲು ಬರುತ್ತಿರೋ ಬೆಂಬಲಿಗರು, ಅಭಿಮಾನಿಗಳು. ಮೊದಲಿನಿಂದಲೂ ಹಿನ್ನಡೆ ಕಾಯ್ದಕೊಂಡು ಹಾಲಿ ಎಂಪಿ ಡಿ.ಕೆ.ಸುರೇಶ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
11:42 AM (IST) Jun 04
ಬೀದರ್: ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಗೆಲುವು ಬಹುತೇಕ ಖಚಿತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಮನೆ ಮಾಡಿದ ಸಂಭ್ರಮ. ನಗರದ ಸಂಬಂಧಿಕರ ಮನೆಯಲ್ಲಿ ಕುಳಿತು ಫಲಿತಾಂಶ ವೀಕ್ಷಿತ್ತಿರುವ ಸಾಗರ್ ಖಂಡ್ರೆ. ಸಾಗರ್ ಖಂಡ್ರೆಗೆ ಕಾರ್ಯಕರ್ತರು, ಅಭಿಮಾನಿಗಳಿಂದ ಶುಭಾಶಯ. ಭರ್ಜರಿ ವಿಜಯೋತ್ಸವ ತಯಾರಿ ಮಾಡಿಕೊಳ್ಳುತ್ತಿರುವ ಸಾಗರ್ ಖಂಡ್ರೆ ಅಭಿಮಾನಿಗಳು.ಮೊದಲ ಕೆಲವು ಸುತ್ತುಗಳನ್ನು ಹೊರತು ಪಡಿಸಿ, ನಿರಂತರ ಮುನ್ನಡೆ ಕಾಯ್ದಕೊಂಡು ಸಾಗರ್.
11:40 AM (IST) Jun 04
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ಗೆ 1 ಲಕ್ಷಕ್ಕೂ ಅಧಿಕ ಮತಗಳ ಭಾರೀ ಮುನ್ನಡೆ. ಸುನೀಲ್ ಬೋಸ್ ಗೆ 4,62,127 . ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜುಗೆ 3,59,490. 1,02,637 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮುನ್ನಡೆ.
ಕಾರವಾರ, ಉತ್ತರಕನ್ನಡ: ಉತ್ತರಕನ್ನಡದಲ್ಲಿ 1,78,462 ಮತಗಳಿಂದ ಬಿಜೆಪಿ ಮುನ್ನಡೆ. 8ನೇ ಸುತ್ತಿನ ಮತ ಎಣಿಕೆ ಪ್ರಗತಿ. ವಿಶ್ವೇಶ್ವರ ಹೆಗಡೆ ಕಾಗೇರಿ 3,98,078. ಡಾ.ಅಂಜಲಿ ನಿಂಬಾಳ್ಕರ್ 2,19616. 5232 ಮತಗಳು ನೋಟಾ.
ಮಂಡ್ಯ: ಕುಮಾರಸ್ವಾಮಿ 1,82,637 ಮತಗಳ ಮುನ್ನಡೆ. ಕುಮಾರಸ್ವಾಮಿ- 4,82,887 ಮತಗಳು. ಸ್ಟಾರ್ ಚಂದ್ರು- 300250 ಮತಗಳು.
11:36 AM (IST) Jun 04
ಗೆಲುವಿನತ್ತ ಯದುವೀರ್. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ನೂತನ ಸಂಸದರ ನಾಮಫಲಕ.
80 ಸಾವಿರ ಲೀಡ್ ಬರುತ್ತಿದ್ದಂತೆ ನಾಮಫಲಕ ಮಾಡಿಸಿರುವ ಯದುವೀರ್ ಅಭಿಮಾನಿಗಳು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯದುವೀರ್ ನಾಮಫಲಕ.
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಾಮಫಲಕಕ್ಕೆ ಕುಂಕುಮ ಇಟ್ಟು ಪೂಜೆ ಮಾಡಿಸಿರುವ ಅಭಿಮಾನಿಗಳು.
11:35 AM (IST) Jun 04
ಶಿವಮೊಗ್ಗದ ಬಿವೈಆರ್ ನಿವಾಸದ ಮುಂದೆ ಜನಸಾಗರ.
ಶಿವಮೊಗ್ಗದ ವಿನೋಬನಗರದಲ್ಲಿರುವ ಸಂಸದ ಬಿ ವೈ ರಾಘವೇಂದ್ರ.
ರಾಘವೇಂದ್ರ1 ಲಕ್ಷ ಮತಗಳ ಮುನ್ನಡೆ ಪಡೆಯುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ.
ಕೊಬ್ಬರಿ ಹಾರ ಹಾಕಿ ಹೆಗಲ ಮೇಲೆತ್ತಿ ಜೈಕಾರ ಹಾಕಿದ ಕಾರ್ಯಕರ್ತರು.
11:24 AM (IST) Jun 04
ಚಿಕ್ಕಬಳ್ಳಾಪುರ: ಲೋಕಾಸಭಾ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮುನ್ನಡೆ. 57467 ಮತಗಳಿಂದ ಡಾ.ಕೆ.ಸುಧಾಕರ್ 287847 ಮತಗಳು ಎಂ.ಎಸ್.ರಕ್ಷಾರಾಮಯ್ಯ 230380 ಮತಗಳನ್ನು ಪಡೆದಿದ್ದಾರೆ.
ಕೊಪ್ಪಳ: ಬಿಜೆಪಿ: 354081 ಕಾಂಗ್ರೆಸ್:359234, ಕಾಂಗ್ರೆಸ್ ಅಭ್ಯರ್ಥಿ 5153 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
10:30 AM (IST) Jun 04
ಕಾರವಾರ, ಉತ್ತರಕನ್ನಡ
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ - 215686
ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್- 109345
106341 ಮತಗಳ ಅಂತರದಿಂದ ಕಾಗೇರಿ ಮುನ್ನಡೆ
ನೋಟಾ- 2971
10:25 AM (IST) Jun 04
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಡಿ ಕೆ ಸುರೇಶ್ ಗೆ ಭಾರಿ ಹಿನ್ನೆಡೆ. ಸದಾಶಿವ ನಗರದ ನಿವಾಸದಿಂದ ಹೊರ ಬಂದ ಡಿ ಕೆ ಸುರೇಶ್. ಸೋದರ ಡಿ ಕೆ ಶಿವಕುಮಾರ್ ನಿವಾಸಕ್ಕೆ ಬಂದ ಡಿಕೆ ಸುರೇಶ್. ಡಾ ಮಂಜುನಾಥ್ ಎದುರು ಭಾರಿ ಹಿನ್ನೆಡೆಯಲ್ಲಿರೋ ಡಿ ಕೆ ಸುರೇಶ್. ಈ ನಡುವೆ ಡಾ. ಮಂಜುನಾಥ್ ಬೆಂಗಳೂರು ಗ್ರಾಮಾಂತರದಲ್ಲಿ ಸುಮ್ರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಶಾಸಕ ಮುನಿರತ್ನ ಹೇಳಿದ್ದಾರೆ.
10:04 AM (IST) Jun 04
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ:
ಕುಮಾರಸ್ವಾಮಿ - 199595
ಸ್ಟಾರ್ ಚಂದ್ರು - 119256
JDS ಅಭ್ಯರ್ಥಿ ಕುಮಾರಸ್ವಾಮಿ 80339 ಮತಗಳ ಮುನ್ನಡೆ.
ತುಮಕೂರು ಲೋಕಸಭಾ ಕ್ಷೇತ್ರ ಚುನಾವಣಾ ಮತ ಎಣಿಕೆ.
ಬಿಜೆಪಿ ವಿ.ಸೋಮಣ್ಣ: 117215
ಕಾಂಗ್ರೆಸ್ ಮುದ್ದಹನುಮೇಗೌಡ: 92494
ಮುನ್ನಡೆ : 24721
ಬೆ.ಗ್ರಾಮಾಂತರ ಲೋಕಸಭಾ ಕ್ಷೇತ್ರ...
ತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಮುನ್ನಡೆ.
ಮತಗಳ ಮುನ್ನಡೆ - 58,560
ಪಡೆದ ಮತ
ಡಾ.ಸಿ.ಎನ್.ಮಂಜುನಾಥ್ -1,80,959
ಕಾಂಗ್ರೆಸ್ ನ ಡಿ.ಕೆ.ಸುರೇಶ್ - 1,22,399
ಹಾವೇರಿ: 3 ನೇ ಸುತ್ತು
ಕಾಂಗ್ರೆಸ್ 88508
ಬಿಜೆಪಿ 92596
ಲೀಡ್ ಬಿಜೆಪಿ 4088
ವಿಜಯಪುರ ಲೋಕಸಭೆ ಮತಕ್ಷೇತ್ರ (ಜಿಲ್ಲೆಯ ಎಲ್ಲ ಮತಕ್ಷೇತ್ರಗಳು ಸೇರಿ ಮಾಹಿತಿ)
ಬಿಜೆಪಿ- 42553
ಕಾಂಗ್ರೆಸ್- 32452
ಬಿಜೆಪಿ ಮುನ್ನಡೆ- 10101.
10:00 AM (IST) Jun 04
ಉಡುಪಿ ಚಿಕ್ಕಮಗಳೂರು
6ನೇ ಸುತ್ತು
158618 ಬಿಜೆಪಿ - ಕೋಟ ಶ್ರೀನಿವಾಸ ಪೂಜಾರಿ
95524 ಕಾಂಗ್ರೆಸ್ - ಜಯಪ್ರಕಾಶ್ ಹೆಗ್ಡೆ
63094 ಅಂತರ
ಬೆಳಗಾವಿ
ಲೋಕಸಭಾ ಚುನಾವಣೆ 2024: ಬೆಳಗಾವಿ ಮತಕ್ಷೇತ್ರ
ಐದನೇ ಸುತ್ತು ಮುಕ್ತಾಯ: ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮುನ್ನಡೆ.
ಕ್ಷೇತ್ರದಲ್ಲಿ ಒಟ್ಟು 343276 ಮತ ಎಣಿಕೆ ಕಾರ್ಯ ಮುಕ್ತಾಯ.
ಶೆಟ್ಟರ್- 192417
ಮೃಣಾಲ್- 139205
ಕೊಪ್ಪಳ
ಕಾಂಗ್ರೆಸ್ 156912
ಬಿಜೆಪಿ 147490
ಕಾಂಗ್ರೆಸ್ ಮುನ್ನಡೆ 9421
09:44 AM (IST) Jun 04
ಕೊಪ್ಪಳ: ಲೋಕಸಭಾ ಕ್ಷೇತ್ರದ 4 ನೇ ಸುತ್ತಿನ ಮತ ಎಣಿಕೆ ಆರಂಭ. 4 ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಕೆ ರಾಜಶೇಖರ್ ಹಿಟ್ನಾಳ್ ಮುನ್ನಡೆ.
ಚಿಕ್ಕಬಳ್ಳಾಪುರ: ಲೋಕಾಸಭಾ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮುನ್ನಡೆ 13202 ಮತಗಳಿಂದ 9 ನೇ ಸುತ್ತಿನಲ್ಲಿ ಮುನ್ನಡೆ .ಡಾ.ಕೆ.ಸುಧಾಕರ್ 77258 ಮತಗಳು ಎಂ.ಎಸ್.ರಕ್ಷಾ ರಾಮಯ್ಯ 64056 ಮತಗಳನ್ನು ಪಡೆದಿದ್ದಾರೆ.
ರಾಯಚೂರು: 415 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಮುನ್ನಡೆ . ಬಿಜೆಪಿಯ ರಾಜಾ ಅಮರೇಶ್ವರ ನಾಯಕಗೆ 3429 ಮತಗಳು.ಕಾಂಗ್ರೆಸ್ ನ ಜಿ.ಕುಮಾರ ನಾಯಕಗೆ 3844 ಮತಗಳು.
ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮುನ್ನಡೆ. ಜಗದೀಶ್ ಶೆಟ್ಟರ್ 31362 ಮತಗಳ ಮುನ್ನಡೆ. ಕ್ಷೇತ್ರದಲ್ಲಿ 232015 ಮತ ಎಣಿಕೆ ಕಾರ್ಯ ಮುಕ್ತಾಯ.
ಬಿಜೆಪಿ- 124786
ಕಾಂಗ್ರೆಸ್- 93424
ಮುನ್ನಡೆ- 31362
ಬಳ್ಳಾರಿ, ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ಡಡೆ ಕಾಯ್ದುಕೊಂಡಿದ್ದಾರೆ.
ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಮುನ್ನಡೆ ಸಾಧಿಸಿದ್ದಾರೆ.
09:16 AM (IST) Jun 04
ಬೀದರ್ನಲ್ಲಿ ಸಾಗರ್ ಖಂಡ್ರೆ, ಚಾಮರಾಜನಗರದಲ್ಲಿ ಸುನೀಲ್ ಬೋಸ್ ಹಾಗೂ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದು, ಇತರೆಡೆ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
09:09 AM (IST) Jun 04
ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ, ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ, ಕಲಬುರಗಿಯಲ್ಲಿ ಉಮೇಶ್ ಜಾಧವ್, ಬಳ್ಳಾರಿಯಲ್ಲಿ ಶ್ರೀರಾಮುಲ್, ದಕ್ಷಿಣ ಕನ್ನಡದಲ್ಲಿ ಕ್ಯಾ.ಬ್ರಿಜೇಶ್ ಚೌಟಾ, ಧಾರವಾಡದಲ್ಲಿ ಪ್ರಲ್ದಾದ್ ಜೋಶಿ, ಬಾಗಲಕೋಟೆಯಲ್ಲಿ ಮುದ್ದಿಗೌಡರ್, ಬೀದರ್ನಲ್ಲಿ ಕಾಂಗ್ರೆಸ್ ಸಾಗರ್ ಖಂಡ್ರೆ 3,700 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
09:07 AM (IST) Jun 04
ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿರುದ್ಧ ಬಿಜೆಪಿ ತೇಜಸ್ವ ಸೂರ್ಯ ಮುನ್ನಡೆ ಕಾಯ್ದುಕೊಂಡಿದ್ದು, ಕಲಬುರಗಿಯಲ್ಲಿ ಬಿಜೆಯ ಡಾ.ಉಮೇಶ್ ಜಾಧವ್ ವಿರುದ್ಧ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಕೃಷ್ಣ ದೊಡ್ಡಮನಿಯವರು ಮುನ್ನಡೆ ಸಾಧಿಸಿದ್ದಾರೆ. ಬಳ್ಳಾರಿಯಲ್ಲಿ ಶ್ರೀರಾಮುಲು ಮುನ್ನಡೆ ಕಾಯ್ದುಕೊಂಡಿದ್ದಾರೆ. ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ಮುನ್ನಡೆ ಸಾಧಿಸಿದ್ದಾರೆ.
08:53 AM (IST) Jun 04
ಉತ್ತರ ಪ್ರದೇಶo 80ರಲ್ಲಿ 35 ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಮುನ್ನಡೆ ಕಾಯ್ದಕೊಂಡರೆ, ಇಂಡಿ ಒಕ್ಟೂಟದ 17 ಹಾಗೂ ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿ 16 ಎನ್ಡಿಎ ಹಾಗೂ 16 ಇಂಡಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಬಿಹಾರದ 40 ಕ್ಷೇತ್ರಗಳಲ್ಲಿ 21 NDA ಹಾಗೂ 3 ಇಂಡಿ ಹಾಗೂ ಇತರೆ 3 ಅಭ್ಯರ್ಥಿಗಳು ಮುನ್ನಡೆ ಕಾಯ್ದಕೊಂಡಿದ್ದಾರೆ.
ತಮಿಳುನಾಡಿನ 39 ಕ್ಷೇತ್ರಗಳಲ್ಲಿ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮುಂದಿದ್ದು, ಉಳಿದು ಕ್ಷೇತ್ರಘಲಲ್ಲಿ ಇಂಡಿ ಒಕ್ಕೂಟದ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ.
ಕರ್ನಾಟಕದ 28 ಕ್ಷೇತ್ರಗಳಲ್ಲಿ 22 ಬಿಜೆಪಿ ಹಾಗೂ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
08:46 AM (IST) Jun 04
ಬಳ್ಳಾರಿ: ಬಳ್ಳಾರಿ ಮೊದಲ ಸುತ್ತಿನ ಮತ ಎಣಿಕೆೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ೆಬಿಜೆಪಿ. ಅಲ್ಪ ಮುನ್ನಡೆಯತ್ತ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು. ಮತ್ತೊಂದೆಡೆ ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಿನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ.
08:29 AM (IST) Jun 04
ಧಾರವಾಡ: ಮತ ಏಣಿಕೆ ಕೇಂದ್ರದ ಒಳಗೆ ಹೋಗುವ ವಿಚಾರವಾಗಿ ಪೊಲೀಸ್ ಸಿಬ್ಬಂದಿ ಜೊತೆ ಬಿಜೆಪಿ ಕಾರ್ಯಕರ್ತರ ವಾಗ್ವಾದ ನಡೆಯುತ್ತಿದೆ.ಪಾಸ್ ಇದ್ದರೂ ಒಳಗೆ ಬಿಡಲಿಲ್ಲ ಎಂಬ ವಾದ. ಧಾರವಾಡ ಕೃಷಿ ವಿವಿ ಮತ ಏಣಿಕೆ ಕೇಂದ್ರ. ಜಿಲ್ಲಾಧಿಕಾರಿ ಬಳಿ ದೂರು ನೀಡಿದ ಬಿಜೆಪಿ ಮುಖಂಡರು.
08:21 AM (IST) Jun 04
ಅಂಚೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಕರ್ವಾಟಕದ ಬಹುತೇಕ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡ ೆಕಾಯ್ದಕೊಂಡರೆ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
07:53 AM (IST) Jun 04
ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಡೆ ಅಂಚೆ ಮತ ಎಣಿಕೆ ಆರಂಭವಾಗಿದೆ. ದಾವಣಗೆರೆ, ತುಮಕೂರು ಹಾಗೂ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
07:51 AM (IST) Jun 04
ಹಾಸನ: ಹಾಸನದ ಬಿಎಂ ರಸ್ತೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಬೆಳಿಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಂ ಓಪನ್ ಆಗಿದೆ. ಬೆಳಿಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆಗಾಗಿ 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರ ಒಳಗೊಂಡು ಒಟ್ಟು 126 ಟೇಬಲ್ ವ್ಯವಸ್ಥೆ
1. ಶ್ರವಣಬೆಳಗೊಳ ಕ್ಷೇತ್ರ 19 ಸುತ್ತು
2. ಅರಸೀಕೆರೆ ಕ್ಷೇತ್ರ 20 ಸುತ್ತು
3. ಬೇಲೂರು- 20 ಸುತ್ತು
4. ಹಾಸನ-20 ಸುತ್ತು
5. ಹೊಳೆನರಸೀಪುರ-24 ಸುತ್ತು
6.ಅರಕಲಗೂಡು-21
7. ಸಕಲೇಶಪುರ-21
8.ಕಡೂರು-19 ಸುತ್ತಿಗಳಲ್ಲಿ ಮತ ಎಣಿಕೆ
ಹಾಸನ ಲೋಕಸಭಾ ಕ್ಷೇತ್ರದಲ್ಲಿ 15 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಮುಖವಾಗಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ- ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ಅಭ್ಯರ್ಥಿ- ಶ್ರೇಯಸ್ ಪಟೇಲ್ ಕಣದಲ್ಲಿ
ಮತ ಎಣಿಕೆಗಾಗಿ 500 ಸಿಬ್ಬಂದಿ ನಿಯೋಜಿಸಲಾಗಿದೆ.
ಪ್ರತಿ ಟೇಬಲ್ನಲ್ಲಿ ಕೌಂಟಿಂಗ್ ಅಸಿಸ್ಟೆಂಟ್, ಕೌಂಟಿಂಗ್ ಸುಪ್ರವೈಸರ್ ಸೇರಿ ಒಟ್ಟು ನಾಲ್ಕು ಸಿಬ್ಬಂದಿ ನಿಯೋಜನೆ. ಭದ್ರತೆಗಾಗಿ 400 ಸಿಬ್ಬಂದಿ ನಿಯೋಜನೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ-17,36,610
ಹಕ್ಕು ಚಲಾಯಿಸಿದವರು - 13,48,966 ಮತದಾರರು
ಒಟ್ಟು ಮತದಾನ ಶೇಕಡ 77.68 %
07:47 AM (IST) Jun 04
ಲೋಕಸಭಾ ಚುನಾವಣೆ ಹಿನ್ನೆಲೆ- ಅಭ್ಯರ್ಥಿಗಳ ಭವಿಷ್ಯ ನಿರ್ಧಾರದ ಕೌಂಟ್ ಡೌನ್ ಸ್ಟಾರ್ಟ್,
ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
1.) ಡಾ.ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಅಭ್ಯರ್ಥಿ
2.)ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ
ಚುನಾವಣೆಯಲ್ಲಿ ಶೇ.76.53 ರಷ್ಟು ಮತದಾನವಾಗಿದ್ದು, ಒಟ್ಟು 12,56,027 ಮಂದಿ ತಮ್ಮ ಹಕ್ಕು ಚಲಾವಣೆಯಾಗಿದೆ. 6,33,630 ಪುರುಷರು, 6,22,392 ಮಹಿಳೆಯರು ಹಾಗೂ 5 ಮಂದಿ ಇತರರಿಂದ ಮತದಾನ
ಕುಮಟಾದ ಡಾ. ಎ.ವಿ.ಬಾಳಿಗಾ ಕಾಲೇಜಿನಲ್ಲಿ ಇಂದು ಮತ ಏಣಿಕೆ
ಬೆಳಿಗ್ಗೆ 8 ಗಂಟೆಗೆ ಚುನಾವಣಾ ಮತ ಎಣಿಕೆ ಕಾರ್ಯ ಪ್ರಾರಂಭ
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಮತ ಎಣಿಕೆ ಕೊಠಡಿ
ಒಟ್ಟು ಎಂಟು ವಿಧಾನಸಭಾ ಕ್ಷೇತ್ರಕ್ಕೆ ಎಂಟು ಪ್ರತ್ಯೇಕ ಕೊಠಡಿ
ಪ್ರತಿ ವಿಧಾನಸಭಾ ಕ್ಷೇತ್ರದ ಕೊಠಡಿಗೆ 14 ಇವಿಎಂ ಕೌಂಟಿಂಗ್ ಟೇಬಲ್ ವ್ಯವಸ್ಥೆ, ಪೋಸ್ಟಲ್ ಬ್ಯಾಲೆಟ್ ಪೇಪರ್ ಎಣಿಕೆಗೆ ಪ್ರತ್ಯೇಕವಾಗಿ ಒಂದು ಕೊಠಡಿ
ಪೋಸ್ಟಲ್ ಬ್ಯಾಲೆಟ್ ಪೇಪರ್ ಎಣಿಕೆಗೆ 20 ಟೇಬಲ್ ಗಳ ವ್ಯವಸ್ಥೆ, ಖಾನಪುರ ವಿಧಾನಸಭಾ ಕ್ಷೇತ್ರ ಒಟ್ಟು 23 ರೌಂಡ್ಸ್
ಕಿತ್ತೂರು ವಿಧಾನಸಭಾ ಕ್ಷೇತ್ರ ಒಟ್ಟು 17 ರೌಂಡ್ಸ್
ಹಳಿಯಾಳ ವಿಧಾನಸಭಾ ಕ್ಷೇತ್ರ ಒಟ್ಟು 16 ರೌಂಡ್ಸ್
ಕಾರವಾರ ವಿಧಾನಸಭಾ ಕ್ಷೇತ್ರ ಒಟ್ಟು 19 ರೌಂಡ್ಸ್
ಕುಮಟಾ ವಿಧಾನಸಭಾ ಕ್ಷೇತ್ರ ಒಟ್ಟು 16 ರೌಂಡ್ಸ್
ಭಟ್ಕಳ ವಿಧಾನಸಭಾ ಕ್ಷೇತ್ರ ಒಟ್ಟು 18 ರೌಂಡ್ಸ್
ಶಿರಸಿ ವಿಧಾನಸಭಾ ಕ್ಷೇತ್ರ ಒಟ್ಟು 19 ರೌಂಡ್ಸ್
ಯಲ್ಲಾಪುರ ವಿಧಾನಸಭಾ ಕ್ಷೇತ್ರ ಒಟ್ಟು 17 ರೌಂಡ್ಸ್
ಮತ ಎಣಿಕೆಗೆ ಒಟ್ಟು 562 ಅಧಿಕಾರಿ, ಸಿಬ್ಬಂದಿ ನೇಮಕ ಮಾಡಿರುವ ಜಿಲ್ಲಾಡಳಿತ
4 ಡಿವೈಎಸ್ಪಿ, 15 ಸಿಪಿಐ ಗಳು, 40 ಪಿಎಸ್ಐ, 54 ಎ.ಎಸ್.ಐ, 104 ಹೆಡ್ ಕಾನ್ಸ್ಟೇಬಲ್,
170 ಪೊಲೀಸ್ ಕಾನ್ಸ್ಟೇಬಲ್, 38 ಮಹಿಳಾ ಕಾನ್ಸ್ಟೇಬಲ್, 5 ಜಿಲ್ಲಾ ಸಶಸ್ತ್ರ ಮೀಸಲು ಪಡೆ
2 ಕೆ.ಎಸ್.ಆರ್.ಪಿ ಮತ್ತು ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ 1 ತುಕಡಿಗಳ ನಿಯೋಜನೆ
ಮತ ಎಣಿಕಾ ಕೇಂದ್ರದ ಎಲ್ಲೆಡೆ ಸಿಸಿಟಿವಿ ಮೂಲಕ ಹದ್ದಿನಗಣ್ಣು
07:36 AM (IST) Jun 04
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ 29 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿದ್ದು, 13,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ,
07:34 AM (IST) Jun 04
ಇವಿಎಂಗಳು ಮತ್ತು ಅಂಚೆ ಮತಪತ್ರಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಎಣಿಕೆ ಮಾಡಲಾಗುತ್ತದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ತರಬೇತಿ ಕೂಡ ಪೂರ್ಣಗೊಂಡಿದೆ, ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಇವಿಎಂಗಳು ಮತ್ತು ಅಂಚೆ ಮತಪತ್ರಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಈ ಪ್ರತಿಯೊಂದು ಮತ ಎಣಿಕೆ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ (ಕಂಪ್ಯೂಟರ್ಗಳೊಂದಿಗೆ ಮಾಧ್ಯಮ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ.
06:45 AM (IST) Jun 04
ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ.
06:41 AM (IST) Jun 04