
ಸುವರ್ಣ ವಿಧಾನಸಭೆ: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ತಮ್ಮ ಭಾಷಣದ ಕೊನೆಯಲ್ಲಿ ಒಂದು, ಎರಡು ಬಾಳೆಲೆ ಹರಡು... ಹಾಡನ್ನು ಕಾಂಗ್ರೆಸ್ ಸರ್ಕಾರಕ್ಕೆ ಅನ್ವಯಿಸಿಕೊಂಡು ಹಾಡಿ ಸರ್ಕಾರದ ಕಾಲೆಳೆದ ಪ್ರಸಂಗ ಜರುಗಿತು.
‘ಒಂದು-ಎರಡು ಬಣಗಳು ಎರಡು, ಮೂರು-ನಾಲ್ಕು ಲೆಕ್ಕ ಹಾಕು, ಐದು-ಆರು ಡಿನ್ನರ್ ಜೋರು, ಏಳು-ಎಂಟು ಯಾರ ಕಡೆಗೆ ನಂಟು, ಒಂಬತ್ತು-ಹತ್ತು ದೆಹಲಿಗೆ ಹತ್ತು, ಒಂದರಿಂದ ಹತ್ತು ಭಿನ್ನಮತ ಹೀಗಿತ್ತು. ಹೈಕಮಾಂಡ್ ತಲೆ ಕೆಡಿಸಿತ್ತು. ಕರ್ನಾಟಕ ಕಾಂಗ್ರೆಸ್ ಹಾಳಗೆಡವಿತ್ತು...’ ಎಂದು ಹಾಡನ್ನು ಹಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಆಂತರಿಕ ಬೆಳವಣಿಗೆಗಳ ಕುರಿತು ವ್ಯಂಗ್ಯವಾಡಿದರು.
- ಒಂದು-ಎರಡು ಬಣಗಳೆರಡು । ಐದು-ಆರು ಡಿನ್ನರ್ ಜೋರು । ಹಾಡಿನ ಮೂಲಕ ಸರ್ಕಾರಕ್ಕೆ ವ್ಯಂಗ್ಯ
ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಶಾಸಕ ಅಭಯ್ ಪಾಟೀಲ್, ಹೆಚ್ಚಿನ ಅನುದಾನಕ್ಕೆ ಆಗ್ರಹಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ನಾವು ಚಿಕ್ಕವರಾಗಿದ್ದಾಗ ನಮ್ಮ ಶಾಲೆಯಲ್ಲಿ ಒಂದು ಹಾಡು ಹೇಳಿ ಕೊಡುತ್ತಿದ್ದರು ಎಂದು ಒಂದು-ಎರಡು ಬಾಳೆಲೆ ಹರಡು ಹಾಡನ್ನು ಹಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ