ಕನ್ನಡಪ್ರಭದ ಮೊದಲ ಸುದ್ದಿ ಸಂಪಾದಕ ಎಚ್‌.ಎನ್‌.ಮೂರ್ತಿ ನಿಧನ

By Kannadaprabha NewsFirst Published Jan 17, 2023, 10:08 AM IST
Highlights

‘ಕನ್ನಡಪ್ರಭ’ ಪತ್ರಿಕೆಯ ಆರಂಭಿಕ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಎಚ್‌.ಎನ್‌.ಮೂರ್ತಿ (ಎಚ್‌.ನರಸಿಂಹಮುರ್ತಿ) ಅವರು ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಪುತ್ರಿ, ಪುತ್ರನನ್ನು ಅಗಲಿದ್ದಾರೆ.

ಬೆಂಗಳೂರು (ಜ.17) : ‘ಕನ್ನಡಪ್ರಭ’ ಪತ್ರಿಕೆಯ ಆರಂಭಿಕ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಎಚ್‌.ಎನ್‌.ಮೂರ್ತಿ (ಎಚ್‌.ನರಸಿಂಹಮುರ್ತಿ) ಅವರು ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಪುತ್ರಿ, ಪುತ್ರನನ್ನು ಅಗಲಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಗ್ಗೆ 8.55 ಸುಮಾರಿಗೆ ಅವರು ಬೆಂಗಳೂರಿನ ವಿಜಯನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ದಿವಂಗತ ಮೂರ್ತಿ ಅವರ ದೇಹವನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಹಾಗೂ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ತನ್ಮೂಲಕ ಮೂರ್ತಿ ಅವರು ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ.

Latest Videos

ನಿವೃತ್ತಿಗೆ 15 ದಿನ ಬಾಕಿ, ಕಾರು ಡಿಕ್ಕಿಯಾಗಿ ದೆಹಲಿ ಸಬ್ ಇನ್ಸ್‌ಪೆಕ್ಟರ್‌ ನಿಧನ!

ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಎಚ್‌.ಎನ್‌.ಮೂರ್ತಿ ಅವರು, ಕನ್ನಡಪ್ರಭ ಪತ್ರಿಕೆಯು 1967ರ ನವೆಂಬರ್‌ 4ರಂದು ಆರಂಭವಾದಾಗ ಆರಂಭಿಕ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮುನ್ನ ಪ್ರಜಾವಾಣಿ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಹಲವು ವರ್ಷ ಕಾರ್ಯನಿರ್ವಹಿಸಿದ್ದರು. ಪತ್ರಿಕೋದ್ಯಮದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ 1985ರಲ್ಲಿ ನಿವೃತ್ತರಾಗಿದ್ದ ಅವರು ಆ ನಂತರವೂ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಪ್ರಜಾಮತ ವಾರಪತ್ರಿಕೆಗಳಲ್ಲಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದರು.

click me!