Breaking News ಡಿ.31ರ ಕರ್ನಾಟಕ ಬಂದ್ ಕ್ಯಾನ್ಸಲ್ , ಮತ್ತೊಂದು ದಿನಾಂಕ ಫಿಕ್ಸ್ ಮಾಡಿದ ವಾಟಾಳ್

Published : Dec 30, 2021, 06:48 PM ISTUpdated : Dec 30, 2021, 07:21 PM IST
Breaking News ಡಿ.31ರ ಕರ್ನಾಟಕ ಬಂದ್ ಕ್ಯಾನ್ಸಲ್ , ಮತ್ತೊಂದು ದಿನಾಂಕ ಫಿಕ್ಸ್ ಮಾಡಿದ ವಾಟಾಳ್

ಸಾರಾಂಶ

ಬಸವರಾಜ ಬೊಮ್ಮಾಯಿ ಸಂಧಾನ ಸಭೆ ಯಶಸ್ವಿ ಕರ್ನಾಟಕ ಬಂದ್‌ ಕೈಬಿಡಲು ತೀರ್ಮಾನಿಸಿದ ವಾಟಾಳ್ ನಾಗರಾಜ್ ಎಂಇಎಸ್ ಬ್ಯಾನ್‌ಗೆ ಒತ್ತಾಯಿಸಿ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದ ವಾಟಾಳ್

ಬೆಂಗಳೂರು, (ಡಿ.30): ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್(Vatal nagaraj) ಕರೆ ಕೊಟ್ಟಿದ್ದ ಕರ್ನಾಟಕ ಬಂದ್(Karnataka Bandh) ವಾಪಸ್ ಪಡೆದಿದ್ದಾರೆ.ಬದಲಿಗೆ ಮತ್ತೊಂದು ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ.

ರಾಜ್ಯದಲ್ಲಿ ಎಂಇಎಸ್ (MES) ಬ್ಯಾನ್ ಮಾಡುವಂತೆ ಒತ್ತಾಯಿಸಿ ನಾಳೆ ಅಂದ್ರೆ ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಆದ್ರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮನವಿ ಮೇರೆಗೆ ವಾಟಾಳ್ ನಾಗರಾಜ್ ಬಂದ್ ವಾಪಸ್ ಪಡೆದುಕೊಂಡಿದ್ದು, ಜನವರಿ 22ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ವಾಟಾಳ್ ಸಿಎಂ ಭೇಟಿ ಬಳಿಕೆ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

Karnataka Bandh: ವಾಟಾಳ್ ನಾಗರಾಜ್‌ಗೊಂದು ಮನವಿ ಮಾಡಿದ ಸಿಎಂ ಬೊಮ್ಮಾಯಿ

ಮನವೊಲಿಸುವಲ್ಲಿ ಬೊಮ್ಮಾಯಿ ಯಶಸ್ವಿ
ಕರ್ನಾಟಕ ಬಂದ್ ಮಾಡಲು ಪಣತೊಟ್ಟಿದ್ದ ವಾಟಾಳ್ ನಾಗರಾಜ್‌ ಅವರನ್ನ ಮನವೊಲಿಸುವಲ್ಲಿ ಬಸವರಾಜ ಬೊಮ್ಮಾಯಿ ಯಶ್ವಿಯಾಗಿದ್ದಾರೆ. ಬಂದ್‌ಗೆ ಇನ್ನೇನು ಒಂದು ದಿನ ಬಾಕಿ ಇರುವಾಗಲೇ ಕನ್ನಡ ಪರ ಸಂಘಟನೆಗಳ ಪ್ರಮುಖ ನಾಯಕರನ್ನ ಕರೆದು ಸಿಎಂ ಸಭೆ ನಡೆಸಿದರು.

ಕೃಷ್ಣ ಕಚೇರಿ ಸಿಎಂ ಸಭೆ ನಡೆಸಿದ್ದು, ಕರ್ನಾಟಕ ಬಂದ್ ಕೈಬಿಡುವಂತೆ ವಾಟಾಳ್ ನಾಗರಾಜ್‌ಗೆ ಮನವಿ ಮಾಡಿದ್ದಾರೆ. ಮುಂದೆ ಯಾವಗಾದರೂ ಬಂದ್ ಮಾಡಿ ಎಂದಿದ್ದಾರೆ. ಇದಕ್ಕೆ ವಾಟಾಳ್ ಒಪ್ಪಿಗೆ ಸೂಚಿಸಿದ್ದು. ಡಿ.31ರ ಬಂದ್‌ ಕೈಬಿಟ್ಟಿದ್ದಾರೆ.

ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ವಾಟಳ್ ನಾಗರಾಜ್ ಸಾ.ರಾ. ಗೋವಿಂದ್ ಬಂದ್ ಕರೆ ನೀಡಿದ್ರು. ನಿನ್ನೆ(ಡಿ.29) ಬಂದ್ ವಾಪಸ್ ಪಡೆಯಲು ಮನವಿ ಮಾಡಿದ್ದೆ. ನನ್ನ ಮನವಿಗೆ ಅವರು ಸ್ಪಂದಿಸಿ ಬಂದ್ ವಾಪಸ್ ಪಡೆದಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.

ಬಂದ್ ಬದಲು ನಾಳೆ ರ್ಯಾಲಿ
ಬಂದ್ ಬದಲು ನಾಳೆ(ಡಿ. 31) ಬೆಳಗ್ಗೆ  10:30ಕ್ಕೆ ರ್ಯಾಲಿ(Rally ಮಾಡಲು ತೀರ್ಮಾನವಾಗಿದ್ದು, ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಯಲಿದೆ.

ಟೌನ್ ಹಾಲ್ ನಿಂದ ಹೊರಟು ಮೈಸೂರ್ ಬ್ಯಾಂಕ್ ಸಿಗ್ನಲ್ ಮೂಲಕ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ತಲುಪಿ , ಆನಂದ್ ರಾವ್ ಫ್ಲೈ ಓವರ್ ಮುಖಾಂತರ ಫ್ರೀಡಂ ಪಾರ್ಕ್ ವರೆಗೆ ಕನ್ನಡ ಪರ ಸಂಘಟನೆಗಳು ರ್ಯಾಲಿ ನಡೆಸಲಿವೆ.

ರ್ಯಾಲಿಯಲ್ಲಿ 500 ರಿಂದ ಸಾವಿರ ಸದಸ್ಯರು ಭಾಗವಹಿಸುವ ನಿರೀಕ್ಷೆ ಇದ್ದು, ರ್ಯಾಲಿ ಹೊರಡುವ ವೇಳೆ ಟ್ರಾಫಿಕ್ ಡೈವರ್ಟ್ ಮಾಡಿಕೊಳ್ಳಲು ಪೊಲೀಸರಿಗೆ ಸೂಚನೆ ಸಹ ನೀಡಲಾಗಿದೆ. 

ಜನವರಿ 22ಕ್ಕೆ ಬಂದ್
ಇನ್ನು ಈ ಬಗ್ಗೆ ವಾಟಾಳ್ ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎಂಇಎಸ್ ನಿಷೇಧ ಮಾಡುವುದಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಕರ್ನಾಟಕ ಬಂದ್ ಹಿಂಪಡೆಯುವಂತೆ ಸಿಎಂ ಕೋರಿಕೊಂಡರು. ಸಿಎಂ ಮನವಿಯ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡು, ಹೊಸ ವರ್ಷಕ್ಕೆ ತೊಂದರೆಯಾಗಲಿದೆ, ಅದು ಸರಿಯಿಲ್ಲ ಎಂಬುದಾಗಿ ತೀರ್ಮಾನ ಕೈಗೊಂಡಿದ್ದು, ನಾಳಿನ(ಡಿ.31) ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾದೆ ಎಂದು ವಾಟಾಳ್ ನಾಗರಾಜ್ ಘೋಷಿಸಿದರು. ಜನವರಿ 22ಕ್ಕೆ ಬಂದ್ ಮಾಡ್ತೇವೆ ಎಂದು ಹೇಳಿದರು.

ಬಂದ್ ಮಾಡಲು ಪಣತೊಟ್ಟಿದ್ದ ವಾಟಾಳ್
ಹೌದು....ಕರ್ನಾಟಕ ಬಂದ್‌ಗೆ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಇತರೆ ಸಂಘಟನೆಗಳು ಬೆಂಬಲ ಕೊಡಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದವು. ಆದರೂ ಸಹ ವಾಟಾಳ್ ನಾಗರಾಜ್ ಡಿಸೆಂಬರ್ 31ರಂದು ಬಂದ್ ಮಾಡಿಯೇ ತೀರುತ್ತೇನೆ ಎಂದು ಪಣತೊಟ್ಟಿದ್ದರು.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಡಿ.31ರಂದು ಕರೆ ನೀಡಿರುವ ಕರ್ನಾಟಕ ಬಂದ್‌ ವಿಚಾರದಲ್ಲಿ ಯಾವುದೇ ಬದಲಾವಣೆ ಪ್ರಶ್ನೆಯೇ ಇಲ್ಲ. ಸೂರ್ಯ ಈ ಕಡೆ ಬಂದು, ಚಂದ್ರ ಆ ಕಡೆ ಹೋದರೂ ಬಂದ್‌ ನಡೆದೇ ನಡೆಯುತ್ತದೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ ಸ್ಪಷ್ಟಪಡಿಸಿದ್ದರು.

, ಅಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್‌ ಆಗಲಿದ್ದು ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು. ಇದೇವೇಳೆ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ನಕ್ಷತ್ರ ನೋಡಿಕೊಂಡು, ಪಂಚಾಂಗ ನೋಡಿಕೊಂಡು ಎಂಇಎಸ್‌ ನಿಷೇಧ ಮಾಡಲಿಕ್ಕಾಗದು. ಕ್ಯಾಬಿನೆಟ್‌ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಸಿಎಂ ಹೋಗಿ ಬದ್ಧತೆ ತೋರಬೇಕು ಎಂದು ಆಗ್ರಹಿಸಿದ್ದರು.

ಕನ್ನಡ ಸಂಘಟನೆಗಳ ಒಡಕು ಮತ್ತೆ ಬಹಿರಂಗ
ಎಂಇಎಸ್‌ ನಿಷೇಧಕ್ಕೆ ಆಗ್ರಹಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ ಕನ್ನಡಪರ ಸಂಘಟನೆಗಳಲ್ಲಿನ ಒಡಕನ್ನು ಮತ್ತೊಮ್ಮೆ ಬಹಿರಂಗಗೊಳಿಸಿದೆ.

ಕನ್ನಡ ಧ್ವಜ ಸುಟ್ಟಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬಸವಣ್ಣರ ಪ್ರತಿಮೆಗಳನ್ನು ವಿರೂಪಗೊಳಿಸಿದ ಎಂಇಎಸ್‌ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಒಕ್ಕೂಟದ ವಾಟಾಳ್‌ ನಾಗರಾಜ್‌ ಕರೆ ನೀಡಿರುವ ಬಂದ್‌ಗೆ ಹಲವು ಕನ್ನಡಪರ ಸಂಘಟನೆಗಳು ಬಹಿರಂಗವಾಗಿಯೇ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

ಕರ್ನಾಟಕ ರಕ್ಷಣಾ ವೇದಿಕೆಯಿಂದ (ಟಿ.ಎ.ನಾರಾಯಣಗೌಡ ಬಣ) ಡಿ.31ರ ರಾಜ್ಯ ಬಂದ್‌ ಬದಲಾಗಿ ಎಂಇಎಸ್‌ ನಿಷೇಧಕ್ಕೆ ಒತ್ತಾಯಿಸಿ ಡಿ.30ರಂದು ಬೆಂಗಳೂರಿನಲ್ಲಿ ಟೌನ್‌ಹಾಲ್‌ನಿಂದ ರಾಜಭವನದವರೆಗೆ ಪ್ರತಿಭಟನಾ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ. ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ನಾರಾಯಣಗೌಡ ನೇರವಾಗಿ ಹೇಳಿದ್ದಾರೆ.

ಉಳಿದಂತೆ ಜಯ ಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್‌ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿಅವರು ವಾಟಾಳ್‌ ನಾಗರಾಜ್‌ಗೆ ಪತ್ರ ಬರೆದು ಬಂದ್‌ ಮುಂದೂಡುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಕನ್ನಡಪರ ಸಂಘಟನೆಗಳಲ್ಲೇ ಒಡಕು ಕಾಣಿಸಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!