2 ಮತಗಳ ಅಂತರದಿಂದ ಸೋತ ಬಿಜೆಪಿ: ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ!

Published : Jan 05, 2019, 07:49 AM ISTUpdated : Jan 05, 2019, 07:50 AM IST
2 ಮತಗಳ ಅಂತರದಿಂದ ಸೋತ ಬಿಜೆಪಿ: ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ!

ಸಾರಾಂಶ

2 ಮತಗಳಿಂದ ಸೋತಿದ್ದರಿಂದ ಕೋಪಗೊಂಡ ಬಿಜೆಪಿ ಕಾರ್ಯ​ಕ​ರ್ತರು ಜೆಡಿ​ಎಸ್‌ ಕಾರ್ಯ​ಕ​ರ್ತ​ರ ಮೇಲೆ ಮಾರ​ಣಾಂತಿಕ ಹಲ್ಲೆ 

ಆಲಮೇಲ[ಜ.05]: ತಾಲೂಕು ಪಂಚಾಯತಿ ಉಪ ಚುನಾವಣೆಯಲ್ಲಿ ಕೇವಲ 2 ಮತಗಳಿಂದ ಸೋತಿದ್ದರಿಂದ ಕೋಪಗೊಂಡ ಬಿಜೆಪಿ ಕಾರ್ಯ​ಕ​ರ್ತರು ಜೆಡಿ​ಎಸ್‌ ಕಾರ್ಯ​ಕ​ರ್ತ​ರ ಮೇಲೆ ಮಾರ​ಣಾಂತಿಕ ಹಲ್ಲೆ ನಡೆ​ಸಿದ ಪರಿಣಾಮ ನಾಲ್ವರು ಯುವಕರು ಗಂಭೀರ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂ​ಕಿ​ನ ಮಲ​ಘಾಣ ಗ್ರಾಮ​ದಲ್ಲಿ ಶುಕ್ರ​ವಾರ ಸಂಭ​ವಿ​ಸಿದೆ.

ಹಲ್ಲೆಯಿಂದಾಗಿ ಜೆಡಿ​ಎಸ್‌ ಯುವ ಕಾರ್ಯ​ಕ​ರ್ತ​ರಾದ ಶ್ರೀಶೈಲ ಬಿರಾದಾರ, ಬಸವರಾಜ ಬಿರಾದಾರ, ಮಲ್ಲಿನಾಥ ಬಿರಾದಾರ, ಶಾಂತರಾಯ ಬಿರಾದಾರ (24) ಗಂಭೀರ ಗಾಯ​ಗೊಂಡಿದ್ದಾರೆ. ಸದ್ಯ ಅವರನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ​ಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾ​ವ​ರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳ​ದಲ್ಲೇ ಬೀಡು​ಬಿ​ಟ್ಟಿ​ದ್ದಾರೆ.

ಈ ಮೊದಲು ಜೆಡಿಎಸ್‌ ಸದಸ್ಯನಾಗಿದ್ದ ಶಾಂತಗೌಡ ಬಿರಾದಾರ ಅವರ ನಿಧನದಿಂದಾಗಿ ಸಿಂದಗಿ ತಾಲೂಕಿನ ಮಲಘಾಣ ತಾಪಂ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಕ್ಷೇತ್ರಕ್ಕೆ ಜ.2ರಂದು ಉಪಚುನಾವಣೆ ನಡೆದಿದ್ದು, ಶುಕ್ರವಾರ ಮತ ಎಣಿಕೆ ನಡೆ​ಯಿತು. ಇದ​ರಲ್ಲಿ ಕೇವಲ 2 ಮತಗಳ ಅಂತರದಿಂದ ಜೆಡಿಎಸ್‌-ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಈರಮ್ಮಗೌಡತಿ ಶಾಂತಗೌಡ ಬಿರಾದಾರ ಅವರು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಶರಣಪ್ಪ ರಾಮನಳ್ಳಿ ಗೆಲುವು ಸಾಧಿಸಿದರು.

ನಂತರ ಸ್ವಗ್ರಾಮ ಮಲಘಾಣದಲ್ಲಿ ಜೆಡಿಎಸ್‌ ಕಾರ್ಯಕರ್ತರು ವಿಜಯೋತ್ಸವ ಮಾಡಿ ಗ್ರಾಮದ ದೇವಾಲಯಗಳಿಗೆ ಅಭ್ಯರ್ಥಿಯೊಂದಿಗೆ ಹೋಗುತ್ತಿದ್ದರು. ಈ ಸಂದ​ರ್ಭ​ದಲ್ಲಿ ಸೋಲಿ​ನಿಂದ ತೀವ್ರ ಹತಾ​ಶೆ​ಗೊಂಡ ಬಿಜೆಪಿ ಕಾರ್ಯಕರ್ತರು ಏಕಾ​ಏ​ಕಿ​ಯಾಗಿ ಜೆಡಿಎಸ್‌ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜೆಡಿ​ಎ​ಸ್‌ನ ನಾಲ್ವರು ಯುವ ಕಾರ್ಯ​ಕ​ರ್ತರಿಗೆ ಗಂಭೀರ ಗಾಯ​ವಾ​ಗಿದೆ.

ಬಿಜೆಪಿ ಅಭ್ಯರ್ಥಿ ಶ್ರೀಮಂತ ರಾಮನಳ್ಳಿ ಹಾಗೂ ಬಿಜೆಪಿ ಮುಖಂಡ ಯಶವಂತ್ರಾಯಗೌಡ ರೂಗಿ ಸಹೋದರರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಆಲಮೇಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ​ಲಾ​ಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!