
ಬೆಂಗಳೂರು(ಜು.20): ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆ ಮತ್ತು ಚಿಕಿತ್ಸಾ ನಿರ್ವಹಣೆ ಹೊಣೆಯನ್ನು ಓರ್ವ ಐಎಎಸ್, ಮತ್ತೋರ್ವ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಏಳು ಪ್ರತ್ಯೇಕ ತಂಡಗಳಿಗೆ ವಹಿಸಿ ಸರ್ಕಾರ ಆದೇಶ ಮಾಡಿದೆ.
ಉಮಾ ಮಹದೇವನ್ ಮತ್ತು ಸುನಿಲ್ ಅಗರವಾಲ್ ಅವರ ತಂಡಕ್ಕೆ ಐದು ಆಸ್ಪತ್ರೆ, ಮೊಹಮದ್ ಮೊಹಿಸಿನ್ ಮತ್ತು ಹರಿಶೇಖರನ್ ನೇತೃತ್ವದ ತಂಡಕ್ಕೆ ಆರು ಆಸ್ಪತ್ರೆ, ಡಾ. ಏಕರೂಪ್ ಕೌರ್ ಮತ್ತು ಅಲಿಕಾನ್ ಎಸ್.ಮೂರ್ತಿ ಅವರ ತಂಡಕ್ಕೆ ಮೂರು ಆಸ್ಪತ್ರೆ, ಮಹೇಶ್ವರರಾವ್ ಮತ್ತು ಕೆ.ಟಿ.ಬಾಲಕೃಷ್ಣ ತಂಡಕ್ಕೆ ನಾಲ್ಕು ಆಸ್ಪತ್ರೆ, ಕಪಿಲ್ ಮೋಹನ್, ರಾಮಚಂದ್ರ ರಾವ್ ತಂಡಕ್ಕೆ ಐದು ಆಸ್ಪತ್ರೆ, ಹರ್ಷ ಗುಪ್ತ ಮತ್ತು ಡಿ. ರೂಪ ಅವರ ತಂಡಕ್ಕೆ ಮೂರು ಆಸ್ಪತ್ರೆ, ಗೌರವ್ ಗುಪ್ತ ಮತ್ತು ಅಲೋಕ್ ಕುಮಾರ್ ಅವರ ತಂಡಕ್ಕೆ ನಾಲ್ಕು ಆಸ್ಪತ್ರೆಗಳ ಉಸ್ತುವಾರಿ ವಹಿಸಲಾಗಿದೆ.
ಮಹಾಮಾರಿ ಕೊರೋನಾ ಸೇವೆಗೆ ವಿವಿ ವಿದ್ಯಾರ್ಥಿಗಳು..!
ದಾಖಲಾತಿ ಸಿಗದ ರೋಗಿಗಳು ಅಧಿಕಾರಿಗಳಿಗೆ ತಮ್ಮ ಕುಂದು ಕೊರತೆ ಸಲ್ಲಿಸಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ