ರಾಜ್ಯದ ಹಲವೆಡೆ ಭರ್ಜರಿ ಮಳೆ

Published : May 22, 2021, 07:55 AM IST
ರಾಜ್ಯದ ಹಲವೆಡೆ ಭರ್ಜರಿ ಮಳೆ

ಸಾರಾಂಶ

* ಬೆಂಗಳೂರು ಸೇರಿದಂತೆ ಕೋಲಾರ, ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಹಲವೆಡೆ ಮಳೆ  * ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಲಿಲ್ಲ * ಕೆಲ ಕಾಲ ಬಿಡುವು ನೀಡಿದ ಮಳೆ ಮತ್ತೆ ಸಂಜೆ ಮಳೆ ಆರಂಭ  

ಬೆಂಗಳೂರು(ಮೇ.22): ರಾಜಧಾನಿ ಬೆಂಗಳೂರು ಸೇರಿದಂತೆ ಕೋಲಾರ, ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಹಲವೆಡೆ ಮಳೆ ಸುರಿದಿದೆ. ಬೆಂಗಳೂರಿನ ಹಲವೆಡೆ ಮಧ್ಯಾಹ್ನ 1ರ ಸುಮಾರಿಗೆ ಮಳೆ ಸುರಿದಿದೆ.

ಕೆಲ ಕಾಲ ಬಿಡುವು ನೀಡಿದ ಮಳೆ ಮತ್ತೆ ಸಂಜೆ ಮಳೆ ಆರಂಭವಾಯಿತು. ರಾತ್ರಿಯೂ ತುಂತುರು ಮಳೆ ಸುರಿಯಿತು. ಇನ್ನು ಕೋಲಾರ ಜಿಲ್ಲೆಯ ವಿವಿಧಡೆ, ಹುಬ್ಬಳ್ಳಿ- ಧಾರವಾಡ, ಹಾವೇರಿಯಲ್ಲಿ ಸುಮಾರು 2 ಗಂಟೆಗಳ ಕಾಲ ಮಳೆ ಸುರಿಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಲಿಲ್ಲ.

ಈಗ ಪೂರ್ವ ಕರಾವಳಿಗೆ ‘ಯಾಸ್‌’ ಚಂಡಮಾರುತದ ಭೀತಿ!

ಯಾವುದೇ ರೀತಿಯಲ್ಲಿ ಜನಜೀವನಕ್ಕೆ ತೊಂದರೆ ಆಗಲಿಲ್ಲ. ಮಧ್ಯಾಹ್ನ 4 ಗಂಟೆಗೆ ಆರಂಭವಾದ ಮಳೆ 6.30 ರ ವರೆಗೂ ಮುಂದುವರಿದಿತ್ತು. ಬಳಿಕವೂ ಜಿಟಿ ಜಿಟಿ ಮಳೆ ಇತ್ತು. ಹುಬ್ಬಳ್ಳಿ, ಧಾರವಾಡ ಮಾತ್ರವಲ್ಲದೇ ಕಲಘಟಗಿ, ಕುಂದಗೋಳದಲ್ಲೂ ಮಳೆ ಉತ್ತಮವಾಗಿಯೇ ಇತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Priyank kharge: ರಜಾಕಾರರ ದಾಳಿಯಿಂದ ನಮ್ಮನ್ನು ರಕ್ಷಿಸಿದ್ದು ನೆಹರು, ಪಟೇಲ್ ಹೊರತು ಆರೆಸ್ಸೆಸ್ ಅಲ್ಲ: ಪ್ರಿಯಾಂಕ್‌
ಪ್ರಜ್ವಲ್ ರೇವಣ್ಣ ಕಾರಣಕ್ಕೆ ಪವಿತ್ರಾ ಗೌಡಗೆ ಬಿಗ್ ಶಾಕ್; ಇಬ್ಬರಿದ್ದ ಬ್ಯಾರಕ್‌ನಿಂದ 16 ಜನ ಇರುವೆಡೆ ಸ್ಥಳಾಂತರ!