
ಹಾಸನ (ಅ.23): ಹಾಸನಾಂಬ ಉತ್ಸವದ ಸಮಾರೋಪ ಸಂದರ್ಭದಲ್ಲಿ ನಡೆದ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಭಕ್ತಿಯಿಂದ ಕೆಂಡ ಹಾಯ್ದು ಸಾರ್ವಜನಿಕರ ಗಮನ ಸೆಳೆದರು.
ಶ್ರದ್ಧಾಭಕ್ತಿಯಿಂದ ಆಚರಿಸಲಾದ ಈ ಕೆಂಡೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ, ಕೆಂಡದ ಮೇಲೆ ಹಾಯ್ದು ತಮ್ಮ ಭಕ್ತಿಯನ್ನು ಮೆರೆದರು. ಜನರ ಜೊತೆಗೆ ಡಿಸಿ ಲತಾಕುಮಾರಿ ಕೂಡ ಕೆಂಡ ಹಾಯ್ದು ದೇವರಿಗೆ ತಮ್ಮ ಭಕ್ತಿಯನ್ನ ಸಲ್ಲಿಸಿದರು. ಪ್ರಸಿದ್ಧ ಹಾಸನಾಂಬ ದೇವಿಯ ಉತ್ಸವದ ಸಾರ್ವಜನಿಕ ದರ್ಶನ ಅಕ್ಟೋಬರ್ 22ರಂದು ಕೊನೆಗೊಂಡಿತು.
ಇಂದು, ಅಕ್ಟೋಬರ್ 23ರ ಮಧ್ಯಾಹ್ನ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ. ಕಳೆದ 13 ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದಿದ್ದು, ದೇಗುಲದ ಆದಾಯ ₹25 ಕೋಟಿಗೆ ಸಮೀಪಿಸಿದೆ. ಈ ಕೆಂಡೋತ್ಸವವು ಉತ್ಸವದ ಮುಕ್ತಾಯವು ಭಕ್ತರಲ್ಲಿ ಭಕ್ತಿ-ಭಾವ ಮೆರೆದರು. ಇದರಲ್ಲಿ ಭಕ್ತರು ಮತ್ತು ಗಣ್ಯರು ಒಂದಾದರು. ಸ್ವತಃ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡರು ಜನರೊಂದಿಗೆ ಸಾಮಾನ್ಯರೊಡನೆ ಬೆರೆತರು. ಈ ಘಟನೆಯು ಹಾಸನದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ಶ್ರೀಮಂತಿಕೆಯನ್ನು ಎತ್ತಿ ತೋರಿಸಿತು, ಜೊತೆಗೆ ಜಿಲ್ಲಾಡಳಿತದ ಜನಸಾಮಾನ್ಯರೊಂದಿಗಿನ ಒಡನಾಟ ಇನ್ನಷ್ಟು ಮೆರಗು ನೀಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ