ಮದ್ಯ ಮಾರಾಟ ಸಮಯ ವಿಸ್ತರಣೆ ಜೊತೆ ಎಣ್ಣೆ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್!

Published : Jun 03, 2020, 07:35 AM IST
ಮದ್ಯ ಮಾರಾಟ ಸಮಯ ವಿಸ್ತರಣೆ  ಜೊತೆ ಎಣ್ಣೆ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್!

ಸಾರಾಂಶ

ಇನ್ನು 9ರವರೆಗೂ ಮದ್ಯ‘ರಾತ್ರಿ’!| ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಮದ್ಯ ಮಾರಾಟ| ಹಿಸ ಬಿಯರ್‌ ಉತ್ಪಾದಿಸಲೂ ಅವಕಾಶ

ಬೆಂಗಳೂರು(ಜೂ.03): ಎಲ್ಲ ರೀತಿಯ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ನೀಡಲಾಗಿದ್ದ ಷರತ್ತು ಬದ್ಧ ಅನುಮತಿಯನ್ನು ಜೂನ್‌ 30ರವರೆಗೆ ವಿಸ್ತರಿಸಿರುವ ಅಬಕಾರಿ ಇಲಾಖೆ, ರಾತ್ರಿ 9 ಗಂಟೆ ವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೇ 2ರಿಂದ ಹಂತ ಹಂತವಾಗಿ ಎಲ್ಲ ರೀತಿಯ ಮದ್ಯದಂಗಡಿಗಳಲ್ಲೂ ಬೆಳಗ್ಗೆ 9ರಿಂದ ಸಂಜೆ 7 ಗಂಟೆ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಾ ಬಂದಿತ್ತು. ಜೂ.1ರಂದ ಜಾರಿಯಾದ ಲಾಕ್‌ಡೌನ್‌ 5.0 ಮಾರ್ಗಸೂಚಿ ಬಳಿಕ ಸರ್ಕಾರ ರಾಜ್ಯದಲ್ಲಿ ಕಫä್ರ್ಯ ಅವಧಿಯನ್ನು ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗೆ ಸೀಮಿತಗೊಳಿಸಿದ್ದರಿಂದ ಅಬಕಾರಿ ಇಲಾಖೆಯು ಈವರೆಗೆ ಮದ್ಯ ಮಾರಾಟಕ್ಕೆ ಇದ್ದ ಬೆಳಗ್ಗೆ 9ರಿಂದ ರಾತ್ರಿ 7 ಗಂಟೆವರೆಗಿನ ಅವಧಿಯನ್ನು ರಾತ್ರಿ 9 ಗಂಟೆವರೆಗೆ ವಿಸ್ತರಿಸಿದೆ. ಉಳಿದಂತೆ ಮದ್ಯದಂಗಡಿಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೋನಾ ನಿಯಂತ್ರಣದ ನಿಯಮಾವಳಿಗಳನ್ನು ಅನುಸರಿಸುವುದು ಸೇರಿದಂತೆ ಹಿಂದಿನ ಆದೇಶದ ಎಲ್ಲ ಷರತ್ತುಗಳು ಮುಂದುವರೆಯಲಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬಿಯರ್‌ ಉತ್ಪಾದನೆಗೂ ಅವಕಾಶ:

ಸಣ್ಣ ಪ್ರಮಾಣದ ಬಿಯರ್‌ ಉತ್ಪಾದಕರು ಇನ್ನು ಮುಂದೆ ಹೊಸದಾಗಿ ಬಿಯರ್‌ ಉತ್ಪಾದನೆ ಮಾಡಬಹುದು ಎಂದು ಕೂಡ ಅಬಕಾರಿ ಇಲಾಖೆ ಆಯುಕ್ತರು ಆದೇಶ ಮಾಡಿದ್ದಾರೆ.

ಮೇ 31ರವರೆಗೂ ಈಗಾಗಲೇ ಉತ್ಪಾದನೆ ಮಾಡಿಟ್ಟುಕೊಂಡಿದ್ದ ಬಿಯರ್‌ ಮಾತ್ರ ಮಾರಾಟ ಮಾಡಲು ಸಣ್ಣ ಪ್ರಮಾಣದ ಬಿಯರ್‌ ಉತ್ಪಾದಕರಿಗೆ ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ಹೊಸದಾಗಿ ಬಿಯರ್‌ ಉತ್ಪಾದಿಸಲೂ ಅವಕಾಶ ನೀಡಲಾಗಿದೆ. ಜೊತೆಗೆ, ಈ ಉತ್ಪಾದಕರು ಗ್ಲಾಸ್‌, ಕಂಟೈನರ್‌, ಸೆರಾಮಿಕ್ಸ್‌ಗಳಲ್ಲಿ 2 ಲೀಟರ್‌ ಮೀರದಂತೆ ಬಿಯರ್‌ ಮಾರಾಟ ಮಾಡಲು ಅನುಮತಿ ನೀಡುವಂತೆ ಇಲಾಖೆಯ ಎಲ್ಲಾ ಉಪ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!