ಕರ್ನಾಟಕದ ಮಾಜಿ ರಾಜ್ಯಪಾಲ ಟಿ. ಎನ್ ಚತುರ್ವೇದಿ ನಿಧನ| ಉತ್ತರ ಪ್ರದೇಶದ ನೊಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮಾಜಿ ರಾಜ್ಯಪಾಲ
ಲಕ್ನೋ[ಜ.06]: ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕಿನಾಥ್ ಚತುರ್ವೇದಿ(90) ಜ.05ರಂದು ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಟಿ. ಎನ್ ಚತುರ್ವೇದಿ ಉತ್ತರಪ್ರದೇಶದ ನೋಯ್ಡಾದ ಸೆಕ್ಟರ್-27 ರ ಕೈಲಾಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿವೃತ್ತ ಐಎಎಸ್ ಆಧಿಕಾರಿಯಾಗಿದ್ದ ತ್ರಿಲೋಕಿನಾಥ್ ಚತುರ್ವೇದಿ 1991ರಲ್ಲಿ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು. ಅಲ್ಲದೇ ಆಗಸ್ಟ್ 2002-2007ರ ಅವಧಿಯಲ್ಲಿ ಕರ್ನಾಟಕದ ರಾಜ್ಯಪಾಲರಾಗಿದ್ದರು. ಇದಕ್ಕೂ ಮುನ್ನ 1984- 89 ರ ವರೆಗೆ ಸಿಎಜಿ ಆಗಿ ಕಾರ್ಯನಿರ್ವಹಿಸಿದ್ದರು.
ಜನವರಿ 18, 1929ರಂದು ಜನಿಸಿದ ಟಿ.ಎನ್ ಚತುರ್ವೇದಿ ಭಾರತದ ಮಹಾಲೇಖಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. 2017ರಲ್ಲಿ ಭಾರತದ ರಾಷ್ಟ್ರಪತಿ ಹುದ್ದೆಗೆ ಚತುರ್ವೇದಿ ಹೆಸರು ಕೇಳಿ ಬಂದಿತ್ತು.
Sad to hear of the demise of Shri T.N. Chaturvedi. He will be remembered for his remarkable contribution to public service. In a career spanning various decades, he discharged different responsiblities with great competence and erudition. Condolences to his family & well wishers.
— President of India (@rashtrapatibhvn)Deeply saddedned to learn about the demise of Shri T N Chaturvedi, Chairman, Indian Institute of Public Administration (IIPA). He was Former governor, ex-MP & former CAG and was an administrator par excellence.
— Vice President of India (@VPSecretariat)ಕರ್ನಾಟಕದ ಮಾಜಿ ರಾಜ್ಯಪಾಲರಾದ ಪದ್ಮ ವಿಭೂಷಣ ಟಿ ಎನ್ ಚತುರ್ವೇದಿ ಅವರ ನಿಧನ ತುಂಬಲಾರದ ನಷ್ಟ. ಭಾರತದ ಮಹಾಲೇಖಪಾಲರಾಗಿ ಅವರ ಸೇವೆ ಅಪಾರ.
ಅವರ ಆತ್ಮಕ್ಕೆ ಶಾಂತಿ ದೊರಕಲಿ. ಶ್ರೀಯುತರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲೆಂದು ಪ್ರಾರ್ಥಿಸುವೆ. pic.twitter.com/6EjBbX3fqO
ಕರ್ನಾಟಕದ ಮಾಜಿ ರಾಜ್ಯಪಾಲರಾದ ಟಿ.ಎನ್ ಚತುರ್ವೇದಿ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ.ನಾನು ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಿ.ಎನ್ ಚತುರ್ವೇದಿ ಅವರು ನಮ್ಮ ರಾಜ್ಯದ ರಾಜ್ಯಪಾಲರಾಗಿದ್ದು ಪಕ್ಷಾತೀತವಾಗಿ ಗೌರವಕ್ಕೆ ಪಾತ್ರರಾದವರು. ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ.
— H D Kumaraswamy (@hd_kumaraswamy)ರಾಜ್ಯಸಭಾ ಸದಸ್ಯರಾಗಿ, ಭಾರತ ಸರ್ಕಾರದ ಮಹಾ ಲೇಖಪಾಲರಾಗಿ ಸೇವೆ ಸಲ್ಲಿಸಿದ,
ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ ಪದ್ಮ ವಿಭೂಷಣ ಪುರಸ್ಕೃತ ಟಿ.ಎನ್ ಚತುರ್ವೇದಿ ಅವರ ನಿಧಕ್ಕೆ ತೀವ್ರ ಸಂತಾಪಗಳು.
ಅವರ ಆತ್ಮಕ್ಕೆ ಶಾಂತಿ ದೊರಕಲಿ,
ಅವರ ಕುಟುಂಬ ಸದಸ್ಯರು, ಆಪ್ತ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ. pic.twitter.com/jyb7eDxcJ4
ರಾಷ್ಟ್ರಪತಿ ರಮಾನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಮಾಜಿ ರಾಜ್ಯಪಾಲ ಚತುರ್ವೇದಿ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ
.