
"
ಬೆಂಗಳೂರು[ಡಿ.18]: ರಾಜ್ಯದ ಜನರಿಗೆ ಎರಡು ದಿನಗಳ ಬಂದ್ ಬಿಸಿ ತಟ್ಟಲಿದೆ ಎಂಬ ಮಾಹಿತಿಯುಳ್ಳ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಈ ಸುದ್ದಿ ಸಾರ್ವಜನಿಕರನ್ನು ಹಾಗೂ ಪೋಷಕರನ್ನು ಗೊಂದಲಕ್ಕೀಡು ಮಾಡಿದೆ. ಹಾಗಾದ್ರೆ ನಿಜಕ್ಕೂ ಬಂದ್ ಇದೆಯಾ? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಸತ್ಯ.
ಎರಡು ದಿನಗಳ ಭಾರತ್ ಬಂದ್ಗೆ ಕರೆ ನೀಡಲಾಗಿದ್ದು, ಜನರಿಗೆ ಬಂದ್ ಬಿಸಿ ತಟ್ಟಲಿದೆ ಎಂಬ ಸುವರ್ಣ ನ್ಯೂಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಪೋಷಕರನ್ನು ಗೊಂದಲಕ್ಕೀಡು ಮಾಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಬೇಕೇ ಎಂಬ ಚಿಂತೆ ಶುರುವಾಗಿದೆ. ಆದರೆ ಪೋಷಕರು ಹಾಗೂ ಜನ ಸಾಮಾನ್ಯರು ಚಿಂತೆಗೀಡಾಗುವುದು ಬೇಡ.
ಜನವರಿಯಲ್ಲಾದ ಬಂದ್ ವಿಡಿಯೋ, ಪೋಷಕರೇ ಚಿಂತೆ ಬಿಡಿ
ಈ ವಿಡಿಯೋ 2019ರ ಜನವರಿ 6ರದ್ದಾಗಿದೆ. ಜನವರಿಯಲ್ಲಿ ಕಾರ್ಮಿಕ ಸಂಘಟನೆಗಳು ಹಲವು ಬೇಡಿಕೆಗಳನ್ನು ಈಡೇರಿಕೆಗೆ ಮನವಿ ಮಾಡಿ ಕರೆದಿದ್ದ ಭಾರತ್ ಬಂದ್ ವಿಡಿಯೋ ಇದಾಗಿದೆ.
ಹೀಗಾಗಿ ಪೋಷಕರು ನಿಶ್ಚಿಂತೆಯಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬಹುದಾಗಿದೆ. ಸಾರ್ವಜನಿಕರು ಕೂಡಾ ಯಾವುದೇ ಆತಂಕವಿಲ್ಲದೇ ಓಡಾಡಬಹುದು. ಎಲ್ಲಾ ಸೌಲಭ್ಯಗಳು ದಿನ ನಿತ್ಯದಂತೆ ಲಭ್ಯವಿರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ